ದೇವಗಡ: ಮಕ್ಕಳ ಜಗಳ ವಿರಳವಾಗಿ ವಿಕೋಪದಲ್ಲಿ ಕೊನೆಯಾಗುವುದುಂಟು. ಆದರೆ, ಜಾರ್ಖಂಡ್ನ ದೇವಗಡ ಜಿಲ್ಲೆಯಲ್ಲಿ ಇದು ಕ್ರೂರ ಹತ್ಯೆಯಲ್ಲಿ ಪರ್ಯಾವಸನಗೊಂಡಿದೆ.
ಪರಸ್ಪರ ಜಗಳವಾಡಿದ ಸ್ನೇಹಿತರು ಓರ್ವನ ಗಂಟಲು ಸೀಳಿ ಕೈ, ಕಾಲುಗಳನ್ನು ಕತ್ತರಿಸಿ ಶವವನ್ನು ಗೋಣಿಚೀಲದಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ 14 ವರ್ಷದ ಮಗ ನಿಗೂಢವಾಗಿ ನಾಪತ್ತೆಯಾಗಿದ್ದಾನೆಂದು ರೋಹಿಣಿ ಹಳ್ಳಿಯ ಪೋಷಕರು ಬುಧವಾರ ದೂರು ನೀಡಿದ್ದರು. ಇದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಆತನ ಸ್ನೇಹಿತರನ್ನು ವಿಚಾರಣೆ ನಡೆಸಿದರು. ಅನುಮಾನಾಸ್ಪದ ಹೇಳಿಕೆ ನೀಡಿದ ಓರ್ವನನ್ನು ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ನಡೆಸಿದ ಮೇಲೆ ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಆತ ಬಾಯಿಬಿಟ್ಟ. ಈ ಹೇಳಿಕೆ ಆಧಾರದಲ್ಲಿ ಇನ್ನೊಬ್ಬ ಸ್ನೇಹಿತನನ್ನು ಬಂಧಿಸಿದರು. ನಂತರ ಅವರು ಅರಣ್ಯದಲ್ಲಿ ಶವ ಎಸೆದಿದ್ದ ಸ್ಥಳವನ್ನು ಹುಡುಕಿ ಗೋಣಿಚೀಲದಲ್ಲಿ ಕಟ್ಟಿದ ಶವನ್ನು ಪತ್ತೆ ಮಾಡಿದ್ದಾರೆ.
ಹತ್ಯೆಯಾದ ಬಾಲಕನನ್ನು ಅವನ ಸರಿ ವಯಸ್ಕ ಸ್ನೇಹಿತನೊಬ್ಬ ಮಂಗಳವಾರ ರಾತ್ರಿ 8.30ಕ್ಕೆ ಅವನ ಮನೆಯ ಸಮೀಪ ಭೇಟಿ ಮಾಡಿದ. ಅಲ್ಲಿಂದ ಅವರಿಬ್ಬರು ಕುಮಾರಬಾದ್ ಸ್ಟೇಷನ್ ರಸ್ತೆಗೆ ಹೋದರು. ಅಲ್ಲಿ ಅವರೊಂದಿಗೆ ಇನ್ನೊಬ್ಬ ಸ್ನೇಹಿತ ಕೂಡಿಕೊಂಡ. ಆತ ಇವರಿಬ್ಬರಿಗಿಂತ ನಾಲ್ಕೈದು ವರ್ಷ ಹಿರಿಯನಾಗಿದ್ದ. ಈ ಮೂವರು ನಂತರ ಪಳಂಗ ಪಹಾಡ್ ಅರಣ್ಯ ಪ್ರದೇಶಕ್ಕೆ ಹೋಗುತ್ತಿದ್ದಾಗ ಜಗಳ ನಡೆದು ಅವಿನಾಶ ಎಂಬ ಹಿರಿಯ ಸ್ನೇಹಿತ ಚಾಕುವಿನಿಂದ ಬಾಲಕನ ಗಂಟಲು ಸೀಳಿ, ಇರಿದು ಕೊಂದ. ನಂತರ ಆತನ ಕೈ, ಕಾಲುಗಳನ್ನು ಕತ್ತರಿಸಿ ದೇಹವನ್ನು ಮೂರು ಭಾಗ ಮಾಡಿ ಗೋಣಿಚೀಲದಲ್ಲಿ ತುಂಬಿ ಪಳಂಗ ಪಹಾಡ್ ಅರಣ್ಯದಲ್ಲಿ ಎಸೆದರು ಎಂದು ಪೊಲೀಸ್ ಅಧಿಕಾರಿ ಕುಮಾರ್ ಘಟನೆಯ ವಿವರ ನೀಡಿದ್ದಾರೆ.
Boy, Killed By Friends, His Hands, Legs Chopped Off In Jharkhand
ಇದನ್ನು ಓದಿ: ಪೋಕ್ಸೊ ಪ್ರಕರಣ ಒಂದೇ ದಿನದಲ್ಲಿ ವಿಚಾರಣೆ, ಜೀವಾವಧಿ ಸಜೆ ಪ್ರಕಟ
ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ 13 ಜನರಿಗೆ 20 ವರ್ಷ ಜೈಲು
Discussion about this post