ಮೇಷರಾಶಿ
ಮಾನಸಿಕ ಖಿನ್ನತೆ. ಎಲ್ಲದರಲ್ಲೂ ನಿರಾಸಕ್ತಿ. ದೇವರು, ಧರ್ಮದ ವಿಷಯದಲ್ಲಿ ಹೆಚ್ಚು ಆಸಕ್ತಿ ಮೊಳೆಯ ಬಹುದು. ಕೌಟುಂಬಿಕ ಕಿರಿಕಿರಿ ಕಾಡುವುದು. ಲಾಭದಾಯಕ ದಿನ, ಅನಾರೋಗ್ಯಕ್ಕೆ ಪರಿಹಾರ ಕಂಡುಕೊಳ್ಳುವಿರಿ, ಕುಟುಂಬ ಸದಸ್ಯರೊಂದಿಗೆ ವಿಶ್ರಾಂತಿ ಪಡೆಯುವಿರಿ, ಕೆಲಸದ ಒತ್ತಡದ ನಡುವಲ್ಲೂ ಸಂತಸದಿಂದ ಇರುವಿರಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಹಿರಿಯರ ಸಲಹೆಯನ್ನು ಆಲಿಸಿ, ದೂರ ಪ್ರಯಾಣದಿಂದ ಅಧಿಕ ಲಾಭ.
ವೃಷಭರಾಶಿ
ಅಧ್ಯಯನದಲ್ಲಿ ಯಶಸ್ಸು. ಸ್ಪರ್ಧಾತ್ಮಕ ಪರೀಕ್ಷೆಯಿದ್ದರೆ ಪೂರಕ ಫಲಿತಾಂಶ. ಸಂತೋಷ ಆಚರಣೆಯ ಕಾರಣದಿಂದ ಖರ್ಚು ಹೆಚ್ಚಬಹುದು. ಮಕ್ಕಳಿಂದ ನೆಮ್ಮದಿ, ದೀರ್ಘಾವಧಿಯ ಹೂಡಿಕೆಗಳು ಲಾಭವನ್ನು ತಂದುಕೊಡಲಿದೆ, ಸ್ನೇಹಿತರೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ, ಕೆಲಸದ ಸ್ಥಳದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ, ಆರೋಗ್ಯದ ಬಗ್ಗೆ ಅಸಡ್ಡೆ ಬೇಡ, ಸಂಗಾತಿಯಿಂದ ಸಹಕಾರ ದೊರೆಯಲಿದೆ.
ಮಿಥುನರಾಶಿ
ಆರ್ಥಿಕ ಲಾಭ. ನಿಮ್ಮ ಕಾರ್ಯಶೈಲಿಯಲ್ಲಿ ಬದಲಾವಣೆ ಮಾಡಬೇಕಾಗುವ ಪ್ರಸಂಗ. ಪ್ರೀತಿಯ ವಿಚಾರವು ಹೆಚ್ಚು ಆದ್ಯತೆ ಪಡೆಯುವುದು. ಅನಾರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಯಿದೆ, ಮಾತು ಕಡಿಮೆ ಮಾಡುವುದು ಉತ್ತಮ, ಆರ್ಥಿಕವಾಗಿ ಸಮಸ್ಯೆಗಳು ಎದುರಾಗುವ ಸಾಧ್ಯತೆ, ಸ್ನೇಹಿತರು ಸಾಲ ಕೇಳುವ ಸಾಧ್ಯತೆ, ಹಣಕಾಸಿನ ಸಮಸ್ಯೆ ಎದುರಾಗಲಿದೆ, ಭಿನ್ನಾಭಿಪ್ರಾಯಗಳಿಂದ ವೈಯಕ್ತಿಯ ಬದುಕಿಗೆ ಸಮಸ್ಯೆಯಾಗಲಿದೆ.
ಕರ್ಕಾಟಕರಾಶಿ
ಆರ್ಥಿಕವಾಗಿ ತುಸು ಸುಧಾರಣೆ. ಇತರರಿಂದ ನೆರವು ಪಡೆಯುವಿರಿ. ಕುಟುಂಬದಲ್ಲಿನ ಮನಸ್ತಾಪವು ಪರಿಹಾರ ಗೊಳ್ಳುವ ಸಂಕೇತಗಳು ಕಾಣಿಸುವುದು. ಅನಾರೋಗ್ಯ ಚರ್ಚೆಯನ್ನು ತಪ್ಪಿಸಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಪುಣ್ಯಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಮನೆಯಲ್ಲಿ ಸಂತಸ, ಪತಿ – ಪತ್ನಿಯಿಂದ ಸಹಕಾರ, ಹೊಂದಾಣಿಕೆಯಿಂದ ಅಧಿಕ ಲಾಭ, ಮೇಲಾಧಿಕಾರಿಗಳ ಕಿರಿಕಿರಿ, ಮಕ್ಕಳ ಶೈಕ್ಷಣಿಕ ವಿಚಾರದ ಬಗ್ಗೆ ಗಮನ ಹರಿಸಿ.
ಸಿಂಹರಾಶಿ
ನಿಮ್ಮ ಕೆಲಸ ಮಾಡಿ, ಫಲಾಫಲಗಳ ಕುರಿತು ಚಿಂತಿಸದಿರಿ ಎಂಬ ವಾಕ್ಯವನ್ನು ಇಂದು ನೀವು ಅನುಸರಿಸಬೇಕು. ಸಹನೆಯಿಂದ ಫಲ ದೊರಕುವುದು. ವಿಶೇಷ ವ್ಯಕ್ತಿಯ ಪರಿಚಯವಾಗಲಿದೆ, ಅದೃಷ್ಟ ನಿಮ್ಮನ್ನು ಹುಡುಕೊಂಡು ಬರಲಿದೆ, ಹಿಂದಿನ ದಿನಗಳ ಪರಿಶ್ರಮ ಇಂದು ಉತ್ತಮ ಫಲಿತಾಂಶವನ್ನು ತರಲಿದೆ, ಕುಟುಂಬದ ಬಗ್ಗೆ ಕಾಳಜಿ ವಹಿಸಿ, ಹಳೆಯ ಸ್ನೇಹಿತರ ಭೇಟಿ, ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ.
ಕನ್ಯಾರಾಶಿ
ಪ್ರಮುಖ ಗುರಿ ಸಾಸುವ ನಿಟ್ಟಿನಲ್ಲಿ ಅಡ್ಡಿಗಳು. ಧಾರ್ಮಿಕತೆ ಹೆಚ್ಚಿನ ಆಸಕ್ತಿ ಹುಟ್ಟಿಸಬಹುದು. ಅಧ್ಯಾತ್ಮದಿಂದ ನೋವು ಮರೆಯುವ ಯತ್ನ ನಿಮ್ಮದು. ಕೆಲಸದ ನಡುವೆ ವಿಶ್ರಾಂತಿ ಪಡೆಯಲು ಯತ್ನಿಸಿ, ಆಸ್ತಿ ವಿಚಾರದಲ್ಲಿ ನಿಮಗೆ ಲಾಭ, ಕುಟುಂಬ ಸದಸ್ಯರ ಅಗತ್ಯತೆಗಳಿಗೆ ಬೆಲೆ ಕೊಡಿ, ವಾಸ್ತವ ಎದುರಿಸುವಾಗ ಎಚ್ಚರವಾಗಿರಿ, ಶ್ರಮಕ್ಕೆ ತಕ್ಕ ಪ್ರತಿಫಲ, ಯೋಜನೆಯನ್ನು ರೂಪಿಸುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ.
ತುಲಾರಾಶಿ
ಸಮಯದೊಂದಿಗೆ ಹೋರಾಟ. ಕಾಲಮಿತಿಯಲ್ಲಿ ಕೆಲಸ ಮುಗಿಸ ಬೇಕಾದ ಒತ್ತಡ. ಸಹಕಾರದ ಕೊರತೆ. ಉದ್ವಿಗ್ನತೆ, ಅಸಹನೆ ಹೆಚ್ಚಳ. ಅದೃಷ್ಟ ನಿಮಗೆ ಆರ್ಥಿಕ ಪ್ರಯೋಜನವನ್ನು ತಂದುಕೊಡಲಿದೆ, ಸಂಗಾತಿ ಸಂತೋಷವನ್ನು ನೀಡಲಿದ್ದಾರೆ, ಪಾಲುದಾರಿಕೆ ವ್ಯವಹಾರ ನಿಮಗೆ ಹೆಚ್ಚು ಲಾಭವನ್ನು ತಂದುಕೊಡಲಿದೆ, ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ಹಳೆಯ ಸ್ನೇಹಿತರ ವಿಚಾರದಲ್ಲಿ ಎಚ್ಚರಿಕೆಯಿಂದರಿ.
ವೃಶ್ಚಿಕರಾಶಿ
ಜೀವನದಲ್ಲಿ ಪ್ರಮುಖ ಪಾಠ ಕಲಿಯುವ ಪ್ರಸಂಗ ಇಂದು ಒದಗೀತು. ತಪ್ಪುಗಳನ್ನು ಕೂಡಲೇ ಸರಿಪಡಿಸಿ. ತಪ್ಪನ್ನೇ ಸಮರ್ಥಿಸುವ ಪ್ರಯತ್ನಕ್ಕೆ ಕೈಹಾಕಬೇಡಿ. ಸ್ನೇಹಿತರೊಂದಿಗೆ ಆಹ್ಲಾದಕರ ಸಂಜೆ, ಕೆಲಸಕ್ಕಾಗಿ ದೂರ ಪ್ರಯಾಣ, ಉದ್ಯಮಿಗಳಿಗೆ ಅಧಿಕ ಲಾಭ ದೊರೆಯಲಿದೆ, ಕೌಟುಂಬಿಕ ರಹಸ್ಯದ ಸುದ್ದಿ ನಿಮಗೆ ಆಶ್ಚರ್ಯವನ್ನು ಮೂಡಿಸುತ್ತದೆ, ಬಿಡುವಿನ ಸಮಯವನ್ನು ಕುಟುಂಬದವರೊಂದಿಗೆ ಕಳೆಯಿರಿ, ಅಪೂರ್ಣ ಕಾರ್ಯವನ್ನು ಮುಗಿಸಲು ಪ್ರಯತ್ನಿಸಿ.
ಧನಸುರಾಶಿ
ಇತರರ ಸಲಹೆ ಪಾಲಿಸುವುದರಿಂದ ನಿಮಗೆ ಒಳಿತೇ ಆಗಲಿದೆ. ಹಾಗಾಗಿ ಕಿವಿಮಾತನ್ನು ಕಡೆಗಣಿಸಬೇಡಿ. ಆರ್ಥಿಕ ಒತ್ತಡ ತುಸು ಸಡಿಲವಾದೀತು. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ, ಹಣಕಾಸಿನ ಸ್ಥಿತಿಗತಿಗಳು ಉತ್ತಮವಾಗಿರಲಿದೆ. ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಒತ್ತಡದಿಂದ ಮೇಲುಗೈ ಸಾಧಿಸುವಿರಿ, ಪ್ರವಾಸ ಹೋಗುವ ಸಾಧ್ಯತೆಯಿದೆ, ಮಾನಸಿಕವಾಗಿ ಶಾಂತಿ ಸಮಾಧಾನವಿರಲಿದೆ.
ಮಕರರಾಶಿ
ಕೆಲವರು ನಿಮ್ಮನ್ನು ತಮ್ಮ ಸ್ವಾರ್ಥಕ್ಕೆ ಬಳಸಲು ಯತ್ನಿಸುವರು. ಆ ಕುರಿತು ಎಚ್ಚರವಿರಲಿ. ಸರಿಯೆಂದು ಕಂಡ ಕಾರ್ಯ ಮಾಡಲು ಹಿಂಜರಿಕೆ ತೋರದಿರಿ. ದೀರ್ಘ ಕಾಲದ ಅನಾರೋಗ್ಯ ಸಮಸ್ಯೆಯಿಂದ ಮುಕ್ತರಾಗುವಿರಿ, ಸಮಸ್ಯೆಗಳು ನಿಮ್ಮನ್ನು ಇನ್ನಷ್ಟು ಉಲ್ಭಣಗೊಳಿಸಲಿದೆ, ಧಾರ್ಮಿಕ ಕಾರ್ಯಗಳಲ್ಲಿ ಹೂಡಿಕೆ ಮಾಡುವಿರಿ, ಮಾನಸಿಕ ಸ್ಥಿರತೆ ಪಡೆಯುವ ಸಾಧ್ಯತೆಯಿದೆ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಮನರಂಜನೆಯ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ, ಮನೆಯವರೊಂದಿಗೆ ಸಂತಸ.
ಕುಂಭರಾಶಿ
ಮುಂಜಾನೆಯ ಅವ ಒತ್ತಡದಿಂದಲೇ ಕಳೆಯುವುದು. ಆದರೆ ಅಪರಾಹ್ನ ನಿರಾಳತೆ ಪಡೆಯುವಿರಿ. ಕೌಟುಂಬಿಕ ಸಹಕಾರ, ಸಮಾಧಾನ. ನಿಮ್ಮ ಮನಸ್ಸು ನಿಮ್ಮನ್ನು ದುರ್ಬಲಗೊಳಿಸಲಿದೆ, ಭೂಮಿ ಮಾರಾಟ ಹಾಗೂ ಖರೀದಿ ಮಾಡುವವರಿಗೆ ಲಾಭದಾಯಕ, ಬಿಡುವಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುವಿರಿ, ನಿರಾಸೆ ಎದುರಾಗುವ ಸಾಧ್ಯತೆಯಿದೆ, ರಹಸ್ಯ ವಿಚಾರವನ್ನು ಪರಿಚಯಸ್ಥರ ಬಳಿಯಲ್ಲಿ ಚರ್ಚೆ ಬೇಡ, ಪತ್ನಿಯ ಬೇಡಿಕೆಗಳಿಗೆ ಸ್ಪಂಧಿಸಿ.
ಮೀನರಾಶಿ
ಬಾಕಿ ಉಳಿದಿರುವ ಕಾರ್ಯ ಮುಗಿಸಿರಿ. ಬಳಿಕ ಹೊಸ ವ್ಯವಹಾರಕ್ಕೆ ಕೈ ಹಾಕಿರಿ. ಉದಾಸೀನತೆಗೆ ಕುಟುಂಬಸ್ಥರಿಂದ ಟೀಕೆ ಕೇಳುವಿರಿ. ಸಾಲಗಾರರ ಕಾಟ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಮನೆಯಲ್ಲಿ ಸಂಭ್ರಮದ ವಾತಾವರಣ, ಹೊಸ ಒಪ್ಪಂದಕ್ಕೆ ಸಹಿಹಾಕುವ ಸಾಧ್ಯತೆಯಿದೆ, ಲೇವಾದೇವಿದಾರರಿಗೆ ಅಧಿಕ ಲಾಭ, ಮನೆಯಲ್ಲಿ ಧಾರ್ಮಿಕ ಕಾರ್ಯಗಳ ಕುರಿತು ಚಿಂತನೆ, ಹೊಂದಾಣಿಕೆಯಿಂದ ಸಹೋದ್ಯೋಗಿಗಳ ಸಹಕಾರ.
Discussion about this post