ಮೇಷರಾಶಿ
ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಸಿಗುವುದು. ಸವಾಲುಗಳಿಗೆ ಅಂಜಬೇಡಿ. ನಗುತ್ತಲೇ ಕಾರ್ಯ ನಿರ್ವಹಿಸಿ. ಕೌಟುಂಬಿಕ ಶಾಂತಿ. ಹೊಸ ಅವಕಾಶವೊಂದು ದೊರೆಯಲಿದೆ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಮಕ್ಕಳ ಭವಿಷ್ಯದ ಚಿಂತೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆ, ಬೆನ್ನು ನೋವು, ಅಧಿಕ ಉಷ್ಣ, ಪಿತ್ತ ದೋಷಗಳು, ದೇವತಾ ದರ್ಶನ, ಸೇವಕರಿಂದ ಅನುಕೂಲ, ಸಾಲಭಾದೆ, ಶತ್ರು ಕಾಟ, ಸೋದರಮಾವನಿಂದ ತೊಂದರೆ, ಆರ್ಥಿಕ ಅನಾನುಕೂಲ.
ವೃಷಭರಾಶಿ
ವೃತ್ತಿಯಲ್ಲಿ ಎಂದಿಗಿಂತ ಹೆಚ್ಚು ಸವಾಲು ಎದುರಿಸುವಿರಿ. ಯೋಜಿಸಿ ಕೆಲಸ ಮಾಡಿ. ಒತ್ತಡಕ್ಕೆ ಮಣಿದು ಅಪ್ರಿಯ ಕೆಲಸವನ್ನು ಮಾಡಬೇಡಿ. ಹಳೆಯ ವ್ಯಾಜ್ಯಗಳು ಪರಿಹಾರ ಕಾಣಲಿದೆ, ಸರಕಾರಿ ನೌಕರರಿಗೆ ಶುಭವಾರ್ತೆ, ವ್ಯವಹಾರ ಲಾಭದಾಯಕ, ಆರ್ಥಿಕ ಚೇತರಿಕೆ, ಸ್ಥಿರಾಸ್ತಿಯಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ತಾಯಿಯಿಂದ ಸಹಕಾರ, ದಾನ ಧರ್ಮದ ಮನಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನರಾಶಿ
ಆದಾಯವೂ ಹೆಚ್ಚು, ಖರ್ಚೂ ಅಧಿಕ. ಮನಸ್ಸಿನಲ್ಲಿ ಉದ್ವಿಗ್ನತೆ. ದೇಹಾಲಾಸ್ಯವೂ ಕಾಡಬಹುದು. ದೇವರ ಪ್ರಾರ್ಥನೆಯಿಂದ ಮಾನಸಿಕ ಶಾಂತಿ. ಮನೆಯಲ್ಲಿ ಧಾರ್ಮಿಕ ಕಾರ್ಯದ ಚಿಂತನೆ, ಪುಣ್ಯಕ್ಷೇತ್ರಗಳ ಭೇಟಿ, ಮಕ್ಕಳಿಂದ ಸಂತಸ, ಧೈರ್ಯದಿಂದ ಮುನ್ನಡೆಯುವಿರಿ, ಸಹೋದ್ಯೋಗಿಗಳ ಸಹಕಾರ, ಸರ್ಕಾರಿ ಕೆಲಸಗಳಿಗೆ ತಿರುಗಾಟ, ಧಾರ್ಮಿಕ ಆಚರಣೆಗಳು, ಹತ್ತಿರದ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಕೋಪ, ಆರ್ಥಿಕ ಅನುಕೂಲ.
ಕರ್ಕಾಟಕರಾಶಿ
ಕೌಟುಂಬಿಕ ಅಶಾಂತಿ. ಸಂಗಾತಿ ಜತೆಗೆ ವಾಗ್ವಾದ ನಡೆದೀತು. ಭಾವನೆ ನಿಯಂತ್ರಿಸಿ. ಆರ್ಥಿಕ ಒತ್ತಡವೂ ಕಾಡುವುದು. ಅನಿರೀಕ್ಷಿತ ಖರ್ಚು ಒದಗುವುದು. ಅತೀ ಬುದ್ಧಿವಂತಿಕೆ ಬೇಡ, ಹೊಸ ಹೂಡಿಕೆಗಳ ಬಗ್ಗೆ ಎಚ್ಚರವಿರಲಿ, ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸಿ, ಮೇಲಾಧಿಕಾರಿಗಳ ಜೊತೆಗೆ ಉತ್ತಮವಾಗಿ ವರ್ತಿಸಿ, ಖರ್ಚುಗಳು ಮತ್ತು ನಷ್ಟಗಳು, ದೂರ ಪ್ರಯಾಣ, ಭವಿಷ್ಯದ ಚಿಂತೆ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಪತ್ರ ವ್ಯವಹಾರದಲ್ಲಿ ಜಯ.
ಸಿಂಹರಾಶಿ
ಹೆಚ್ಚು ಕೆಲಸ, ಹೆಚ್ಚು ಒತ್ತಡ. ವೃತ್ತಿ ಮತ್ತು ಖಾಸಗಿ ಬದುಕು ಎರಡರಲ್ಲೂ ಸಮಸ್ಯೆ ಎದುರಿಸುವಿರಿ. ತಾಳ್ಮೆ ಕೆಟ್ಟರೆ ಸೌಹಾರ್ದ ಸಂಬಂಧ ಹಾಳಾದೀತು. ದೂರ ಪ್ರಯಾಣ, ಧಾರ್ಮಿಕ ಕಾರ್ಯ ನಡೆಯುವ ಸಾಧ್ಯತೆ, ಹೊಂದಾಣಿಕೆಯಿಂದ ಕಾರ್ಯಸಾಧನೆ, ಸ್ವಂತ ಉದ್ಯಮದಲ್ಲಿ ಲಾಭ, ಸ್ವಾಭಿಮಾನದ ನಡವಳಿಕೆ, ಆರೋಗ್ಯದ ಕಡೆ ಹೆಚ್ಚು ಗಮನ, ಷೇರು ಮಾರುಕಟ್ಟೆಯಿಂದ ಅನುಕೂಲ, ರತ್ನಾಭರಣಗಳ ಖರೀದಿ, ಔದಾರ್ಯದ ನಡವಳಿಕೆ, ವ್ಯಾಜ್ಯಗಳು ಪರಿಹಾರ ಕಾಣಲಿದೆ.
ಕನ್ಯಾರಾಶಿ
ಉತ್ಸಾಹದ ದಿನ. ನೀವು ನಿರೀಕ್ಷಿಸಿದ ಕಾರ್ಯ ಕೈಗೂಡುವುದು. ಭವಿಷ್ಯದ ಕುರಿತಂತೆ ಆಶಾವಾದ ಮೂಡಿಸುವ ಬೆಳವಣಿಗೆ. ಆರ್ಥಿಕ ಸುಧಾರಣೆ.ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಸಹೋದ್ಯೋಗಿಗಳ ಸಹಕಾರ, ದ್ವೇಷ ಸಾಧನೆ ಬೇಡ, ಅಹಂಭಾವದಿಂದ ನಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಸ್ವಯಂಕೃತ ಅಪರಾಧದಿಂದ ಅಪಕೀರ್ತಿ, ದೂರ ಪ್ರದೇಶಕ್ಕೆ ತೆರಳುವ ಆಲೋಚನೆ, ಅಧಿಕ ಒತ್ತಡಗಳು, ತಲೆಗೆ ಮೊಣಕಾಲಿಗೆ ಪೆಟ್ಟು, ಅಧಿಕಾರಿಗಳಿಂದ ತೊಂದರೆ ಸಾಧ್ಯತೆ.
ತುಲಾರಾಶಿ
ನಿಮ್ಮ ಬದುಕಲ್ಲಿ ಹಲವಾರು ಬೆಳವಣಿಗೆ ಏಕಕಾಲದಲ್ಲಿ ಸಂಭವಿಸಬಹುದು. ನೀವು ತಾಳ್ಮೆಯಿಂದ ನಿಭಾಯಿಸಬೇಕು. ದುಡುಕಬೇಡಿ. ಆರ್ಥಿಕ ಸಮಸ್ಯೆ ಪರಿಹಾರದಲ್ಲಿ ಹೊಸ ಅವಕಾಶ, ಹಳೆಯ ಬಾಕಿ ವಸೂಲಿ, ಮನೆಯಲ್ಲಿ ನೆಮ್ಮದಿ, ಸಾಂಸಾರಿಕವಾಗಿ ಉತ್ತಮ ಹೊಂದಾಣಿಕೆ, ಹಳೆಯ ನೆನಪುಗಳಿಂದ ನೋವು, ಪರಸ್ಥಳ ವಾಸ, ಅತಿ ನಂಬಿಕೆಯಿಂದ ಮೋಸ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಹೊಗಳಿಕೆ ಮತ್ತು ಪ್ರಶಂಸೆಗಳು, ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ.
ವೃಶ್ಚಿಕರಾಶಿ
ಆತ್ಮವಿಶ್ವಾಸದ ಕೊರತೆ. ಇದರಿಂದಾಗಿ ನಿಮ್ಮ ಕಾರ್ಯಗಳೆಲ್ಲ ನಿಧಾನವಾಗುವವು. ಕಠಿಣ ನಿಲುವು ತಳೆಯಲು ಹಿಂಜರಿಯಬೇಡಿ. ಕೋಪ ನಿಯಂತ್ರಣ ಮಾಡಿಕೊಳ್ಳಿ, ಅನಗತ್ಯ ಮಾತುಗಳಿಗೆ ಕಡಿವಾಣ ಹಾಕಿ, ವೈದ್ಯರ ಭೇಟಿ ಸಾಧ್ಯತೆ, ಹೊಸ ಅವಕಾಶ ಶುಭ ಸುದ್ದಿಯನ್ನು ತರಲಿದೆ, ಅಧಿಕ ಲಾಭ, ಪ್ರಶಂಸೆಗಳು, ಉದ್ಯೋಗದಲ್ಲಿ ಅನುಕೂಲ, ಶುಭ ಸೂಚನೆ, ಅನಾರೋಗ್ಯದಿಂದ ಗುಣಮುಖ, ಅತ್ಯುತ್ತಮ ಶುಭದಿವಸ, ಕಾರ್ಯಜಯ, ಮೃತ್ಯು ದೋಷಗಳು.
ಧನಸ್ಸುರಾಶಿ
ಕೆಲಸದಲ್ಲಿ ಅಡ್ಡಿಗಳು. ಸಂಪೂರ್ಣ ವಿಶ್ವಾಸವಿಲ್ಲದೆ ಪ್ರಮುಖ ನಿರ್ಧಾರ ತಾಳಬೇಡಿ. ಅನಿರೀಕ್ಷಿತ ಖರ್ಚು ಸಂಭವ. ಕೌಟುಂಬಿಕ ಸಮತೋಲನ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಅವಿವಾಹಿತರಿಗೆ ವಿವಾಹ ಭಾಗ್ಯ, ಸಹೋದ್ಯೋಗಿಗಳ ಜೊತೆಗೆ ಕಿರಿಕಿರಿ, ತಂದೆಯಿಂದ ಸಹಕಾರ, ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗಳು, ಪುಣ್ಯಕ್ಷೇತ್ರ ದರ್ಶನ, ಉದ್ಯೋಗನಿಮಿತ್ತ ಪ್ರಯಾಣ, ಒಳ ಒಪ್ಪಂದಗಳು, ಪಿತ್ತ ದೋಷ, ಮಾಟ ಮಂತ್ರ ತಂತ್ರದ ಭೀತಿ, ದುಡುಕಿನ ನಿರ್ಧಾರ ಬೇಡ.
ಮಕರರಾಶಿ
ಅತಿಯಾದ ಕೆಲಸ. ಇದರಿಂದ ದೈಹಿಕ ಬಸವಳಿಕೆ. ಸಂಜೆ ವೇಳೆಗೆ ವಿಶ್ರಾಂತಿಯನ್ನು ಬಯಸುವಿರಿ. ಆದರೆ ಕೆಲವು ಕಾರ್ಯಗಳು ಬಾಕಿ ಉಳಿಯುತ್ತವೆ. ಅಕಾಲ ಭೋಜನ, ದೂರ ಪ್ರಯಾಣದಿಂದ ನಷ್ಟ, ಶತ್ರುಗಳಿಂದ ನೋವು, ಪಾಲುದಾರಿಕೆಯಿಂದ ಲಾಭದ ಸೂಚನೆ, ಹೊಸ ನಿರೀಕ್ಷೆಗಳು ಮೂಡಲಿದೆ, ಪುಣ್ಯಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಪ್ರಯಾಣ ವಿಘ್ನ, ಅನಿರೀಕ್ಷಿತ ಸೋಲು, ನಿಧಿಯ ಆಸೆ, ಅನಾರೋಗ್ಯ, ಕೋರ್ಟ್ ಕೇಸ್ಗಳ ಅಲೆದಾಟ, ಕಾರ್ಯ ವಿಘ್ನ, ಸ್ವಯಂ ನಿಂದನೆಗಳು.
ಕುಂಭರಾಶಿ
ಸರಿಯಾದ ಸಮಯದಲ್ಲಿ ಕೆಲಸವನ್ನು ಮುಗಿಸಿರಿ. ಇಲ್ಲವಾದರೆ ಕೆಲಸದ ಹೊರೆ ಹೆಚ್ಚುತ್ತಾ ಹೋಗುವುದು. ಇತರರ ಸಹಾಯ ಪಡೆಯಲು ಅಂಜಬೇಕಿಲ್ಲ. ಎಲ್ಲಾ ವಿಚಾರದಲ್ಲಿಯೂ ಹೊಂದಾಣಿಕೆ ಇರಲಿ, ಸತಿಪತಿಗಳಲ್ಲಿ ಕಲಹಗಳು, ಪಾಲುದಾರಿಕೆಯಲ್ಲಿ ತೊಡಕು, ಮನೆಯಲ್ಲಿ ಕಿರಿಕಿರಿ, ವೈಚಾರಿಕ ಚಿಂತನೆಗಳು, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಮಕ್ಕಳ ಜೀವನದಲ್ಲಿ ಅಡೆತಡೆಗಳು, ಭಾವನೆಗಳಿಗೆ ಪೆಟ್ಟು, ಮೋಜು ಮಸ್ತಿಯಿಂದ ಸಮಸ್ಯೆ, ಬರವಣಿಗೆಯಲ್ಲಿ ವ್ಯತ್ಯಾಸ.
ಮೀನರಾಶಿ
ಬಾಕಿ ಉಳಿದ ಕಾರ್ಯ ಇಂದು ಮುಗಿಸಿರಿ. ಇದರಿಂದ ನಿಮಗೆ ನಿರಾಳತೆ ಒದಗುವುದು. ಕೌಟುಂಬಿಕ ಶಾಂತಿ, ಸಮಾಧಾನ. ಹಳೆಯ ಸ್ನೇಹಿತರ ಭೇಟಿ, ದೂರ ಪ್ರಯಾಣದಿಂದ ನಷ್ಟ, ಮನಸಿಗೆ ಬೇಸರ ಮೂಡಲಿದೆ, ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಳ್ಳುವಿರಿ, ಶತ್ರು ದಮನ, ಸ್ಥಿರಾಸ್ತಿ ವಾಹನದ ಮೇಲೆ ಸಾಲ, ದಾಂಪತ್ಯದಲ್ಲಿ ಕಲಹಗಳು, ಗೌರವಕ್ಕೆ ಧಕ್ಕೆ, ತಾಯಿಗೆ ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ತೊಂದರೆ, ಕೃಷಿಕರಿಗೆ ಅನಾನುಕೂಲ.
Discussion about this post