ಮೇಷರಾಶಿ
ಯಾವುದೇ ಪ್ರತಿಕೂಲ ಪರಿಸ್ಥಿತಿ ಒದಗಿದರೂ ಚಿಂತಿಸಬೇಡಿ. ಆಶಾವಾದ ಬಿಡಬೇಡಿ. ಅಂತಿಮವಾಗಿ ನಿಮಗೆ ಪೂರಕ ಬೆಳವಣಿಗೆ ಆಗೇ ತೀರುವುದು. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಸಾಹಸ ಪ್ರವೃತ್ತಿ, ದೇವತಾನುಗ್ರಹದಿಂದ ಮನೆಯಲ್ಲಿ ಸಂತಸ, ಆಸ್ತಿ ಮಾರಾಟ, ಅಪವಾದ ತೆಗಳಿಕೆಯಿಂದ ದೂರವಿರಿ.
ವೃಷಭರಾಶಿ
ನಿರಾಶೆ, ಹಿನ್ನಡೆ ಇಂದು ಉಂಟಾಗುವುದು. ಕಾರ್ಯಗಳು ನಿಷ್ಫಲ ಎನಿಸುವವು. ಹಾಗೆಂದು ಹತಾಶರಾಗದಿರಿ. ನಿರಾಶಾವಾದಕ್ಕೆ ಜೋತು ಬೀಳಬೇಡಿ ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ, ಪಾಲುದಾರಿಕೆಯಿಂದ ಸಮಸ್ಯೆ, ಧಾರ್ಮಿಕ ಕಾರ್ಯಗಳಿಗೆ ಧನವ್ಯಯ, ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ, ವಿದೇಶಿ ಮೂಲದಿಂದ ಧನಾಗಮ, ವ್ಯವಹಾರದಲ್ಲಿ ಪ್ರಗತಿ.
ಮಿಥುನರಾಶಿ
ಸೂಕ್ಷ್ಮ ಸಂವೇದಿ ಬೆಳವಣಿಗೆ ಸಂಭವಿಸುವುದು. ನಿಮ್ಮ ಭಾವನೆ ನಿಯಂತ್ರಿಸಬೇಕು. ನಿಮ್ಮ ಇಷ್ಟಾರ್ಥಗಳಿಗೆ ಇತರರು ಸ್ಪಂದಿಸುವರು. ರಾಜಕಾರಣಿಗಳಿಂದ ತೊಂದರೆ, ಅನಾರೋಗ್ಯದ ಬಗ್ಗೆ ಎಚ್ಚರಿಕೆ, ಶತ್ರುಗಳ ಕಾಟ, ಉದ್ಯೋಗ ವ್ಯವಹಾರದಲ್ಲಿ ಪ್ರಗತಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ, ಹಿರಿಯರ ಸಹಕಾರದಿಂದ ಗೌರವ ಸ್ಥಾನ ಪ್ರಾಪ್ತಿ.
ಕರ್ಕಾಟಕರಾಶಿ
ಭಾವುಕರಾಗದಿರಿ, ದುಡುಕದಿರಿ. ಇದು ನಿಮಗೆ ಇಂದಿನ ಸಲಹೆ. ಕೌಟುಂಬಿಕ ಸವಾಲು ಎದುರಿಸಲು ಸಹನೆಯೇ ಸೂಕ್ತ. ವೃತ್ತಿಯಲ್ಲಿ ತುಸು ಕಷ್ಟಗಳು. ಅವಿವಾಹಿತರಿಗೆ ವಿವಾಹ ಭಾಗ್ಯ, ಹೊಸ ಕಾರ್ಯಗಳಲ್ಲಿ ತೊಡಗುವಿರಿ, ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ದಾಂಪತ್ಯದಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ಒತ್ತಡ, ಮಕ್ಕಳಿಂದ ಸಹಾಯದ ನಿರೀಕ್ಷೆ, ಮಾನಸಿಕ ಅಸಮತೋಲನ.
ಸಿಂಹರಾಶಿ
ಭಾವನಾತ್ಮಕ ಸನ್ನಿವೇಶಕ್ಕೆ ಈಡಾಗುವಿರಿ. ಆಪ್ತರೊಂದಿಗೆ ನಿಮ್ಮ ಭಾವನೆ ಹಂಚಿಕೊಳ್ಳಲು ಹಿಂಜರಿಕೆ ಬೇಡ. ಅವರಿಂದ ಪೂರಕ ಸ್ಪಂದನೆ ದೊರೆತೀತು. ಮಾನಸಿಕ ವೇದನೆ, ದೀರ್ಘ ಪ್ರಯಾಣ, ಹಣಕಾಸಿನ ವಿಚಾರದಲ್ಲಿ ಸಾಹಸಿ ಪ್ರವೃತ್ತಿ ಸಲ್ಲದು, ತಾಳ್ಮೆಯಿಂದ ಸಫಲತೆ, ಪಾಪಕರ್ಮಗಳ ಕಾಟ, ದುಸ್ವಪ್ನಗಳಿಂದ ಕಾಟ, ವಿದ್ಯಾಭ್ಯಾಸದ ಚಿಂತೆ, ಶತ್ರುಗಳಿಂದ ಮಾನಸಿಕ ವೇದನೆ.
ಕನ್ಯಾರಾಶಿ
ಆರ್ಥಿಕ ಲಾಭ. ಹಿಂದಿನ ಹೂಡಿಕೆಯೊಂದು ಫಲ ನೀಡುವುದು. ಹೊಸ ಯೋಜನೆ ಜಾರಿಗೊಳಿಸಲು ಕಾಲ ಸೂಕ್ತವಾಗಿದೆ. ಎಲ್ಲರ ಬೆಂಬಲ ಲಭ್ಯ.ಉತ್ತಮ ಧನಾರ್ಜನೆ, ಭಾವನಾತ್ಮಕ ಚಿಂತನೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ನೆಮ್ಮದಿ, ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫಲತೆ, ದೇಹಾಯಾಸದ ಪ್ರವೃತ್ತಿ ಸಲ್ಲದು.
ತುಲಾರಾಶಿ
ಪ್ರೀತಿಪಾತ್ರರ ಜತೆ ದಿನ ಕಳೆಯುವ ಅವಕಾಶ. ನಿಮ್ಮ ಪ್ರೀತಿಯ ಬದುಕಿಗೊಂದು ತಿರುವು ದೊರಕಬಹುದು. ಇನ್ನಿತರ ಸಮಸ್ಯೆಗಳು ಮರೆಯುವವು.ಮಾನಸಿಕ ಅಸಮತೋಲನ, ತಾಯಿಯಿಂದ ಆರ್ಥಕ ಸಹಾಯ, ವಿದ್ಯಾಭ್ಯಾಸದಲ್ಲಿ ಮಂದತ್ವ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ತಾಯಿಯಿಂದ ಸಹಕಾರ, ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ದಿ, ಆಸ್ತಿ ವಿಚಾರದಲ್ಲಿ ಪ್ರಗತಿ.
ವೃಶ್ಚಿಕರಾಶಿ
ಇತರರ ಭಾವನೆಗಳಿಗೆ ಉತ್ತಮವಾಗಿ ಸ್ಪಂದಿಸುವಿರಿ. ಅವರ ಕಷ್ಟಕ್ಕೆ ನೆರವಾಗುವಿರಿ. ಅದರಿಂದಲೇ ನಿಮಗೆ ಸಮಾಧಾನ. ಗುಣಾತ್ಮಕ ಚಿಂತನೆಯಿರಲಿ.ಆರೋಗ್ಯದ ಕಡೆಗೆ ಗಮನ ಇರಲಿ, ಉದ್ಯೋಗದಲ್ಲಿ ಪ್ರಗತಿ, ಪಾಲುದಾರಿಕಾ ವ್ಯವಹಾರದಲ್ಲಿ ಚರ್ಚೆಗೆ ಅವಕಾಶ, ಸ್ವಯಂಕೃತಾ ಅಪರಾಧ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಒಂಟಿತನದಿಂದ ಕೆಟ್ಟ ಆಲೋಚನೆಗಳು ಬರಲಿದೆ.
ಧನಸುರಾಶಿ
ನಿಮ್ಮ ವ್ಯವಹಾರ ಕ್ಷೇತ್ರ ವಿಸ್ತರಿಸುವ ಅವಕಾಶ ದೊರಕಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಕೌಟುಂಬಿಕ ಸಮಸ್ಯೆ ಪರಿಹಾರ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ, ಪಾಲುದಾರಿಕೆ ವ್ಯವಹಾರದಲ್ಲಿ ಚರ್ಚೆ ಬೇಡ, ಷೇರು ವ್ಯವಹಾರದಲ್ಲಿ ನಷ್ಟ, ಆರ್ಥಿಕ ಚಿಂತೆಗಳು ಕಾಡಲಿದೆ, ಖರ್ಚುಗಳ ಮೇಲೆ ಹಿಡಿತವಿರಲಿ, ವಸ್ತುಗಳ ಕಳವು ಸಾಧ್ಯತೆ.
ಮಕರರಾಶಿ
ನಿಮ್ಮ ಪ್ರಯತ್ನಕ್ಕೆ ಸೂಕ್ತ ಫಲ ದೊರಕುವುದು. ಅದನ್ನು ಇತರರ ಜತೆ ಹಂಚಿಕೊಳ್ಳಲು ಮರೆಯದಿರಿ. ಕೆಲವರಿಗೆ ಸಿಗಬೇಕಾದ ಪಾಲು ನೀಡುವುದೊಳಿತು.ವಾಹನ ಖರೀದಿಯಿಂದ ಸಮಸ್ಯೆ, ಆರ್ಥಿಕ ಹಿನ್ನಡೆ, ಮಂತ್ರ ತಂತ್ರದ ಭೀತಿ ಎದುರಾಗಲಿದೆ, ಉದ್ಯೋಗ, ವ್ಯವಹಾರದಲ್ಲಿ ಮೇಲಾಧಿಕಾರಿಗಳ ಸಹಕಾರ, ಸಣ್ಣ ಪ್ರಯಾಣ, ಆರ್ಥಿಕ ಸ್ಥಿತಿಯಲ್ಲಿ ವೃದ್ದಿ, ಆಸ್ತಿ ವಿಚಾರದಲ್ಲಿ ಬದಲಾವಣೆ.
ಕುಂಭರಾಶಿ
ಇಂದಿನದು ಸಂತೋಷದ ದಿನ. ಅದಕ್ಕೆ ನಿರ್ದಿಷ್ಟ ಕಾರಣವೇ ಬೇಕೆಂದಿಲ್ಲ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆಪ್ತರ ಸಂಗದಲ್ಲಿ ಉಲ್ಲಾಸ. ಕೌಟುಂಬಿಕ ಶಾಂತಿ.ದೂರದ ವ್ಯವಹಾರದಿಂದ ಧನ ವೃದ್ದಿ, ಮನೆಯಲ್ಲಿ ಸಂತಸದ ವಾತಾವರಣ, ಬಾಡಿಗೆದಾರರಿಂದ ಸಮಸ್ಯೆ, ಕೆಲಸದಲ್ಲಿ ಹೆಚ್ಚಿನ ಒತ್ತಡ, ಆಧ್ಯಾತ್ಮದ ಕಡೆಗೆ ಗಮನ ಹರಿಸಿ, ಮಲತಾಯಿ ದೋರಣೆ, ದೇವತಾನುಗ್ರಹದಿಂದ ಕೂಡಿದ ದಿನ.
ಮೀನರಾಶಿ
ಮಿಶ್ರಫಲದ ದಿನ. ಲಾಭ ನಷ್ಟ ಎರಡನ್ನೂ ಅನುಭವಿಸುವಿರಿ. ಸಂಬಂಧದಲ್ಲೂ ಅಷ್ಟೆ. ಸಂತೋಷ, ಬೇಸರ ಎರಡೂ ಉಂಟಾದೀತು. ತಂದೆಯಿಂದ ನೋವು, ಆಧ್ಯಾತ್ಮಿಕ ಚಿಂತನೆಗಳು, ಮಕ್ಕಳಿಂದ ಸಂತಸ, ಆಸ್ತಿ ವಿಚಾರದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ, ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿ, ದೇಹಾಯಾಸವಾಗದಂತೆ ಕಾರ್ಯನಿರ್ವಹಿಸಿ.
Discussion about this post