ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗತ್ತೆ, ಅವರ ಹತ್ರ ಉಲ್ಟಾ ಮಚ್ಚೆ ಇದೆ, ಅವರೇನು ಕಾಲಜ್ಞಾನಿನಾ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯ ನುಡಿದಿದ್ದಾರೆ.
ಈ ಮೊದಲು ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಅಂದಿದ್ರು, ಮೋದಿ ಎರಡು ಸಲ ಪ್ರಧಾನಿಯಾದ್ರು. ಸಿದ್ದರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗತ್ತೆ ಎಂದು ಕುಹಕ ಆಡಿದ್ದಾರೆ. ೨೦೧೮ ರಲ್ಲಿ ನಾನು ಮತ್ತೆ ಅಧಿಕಾರಕ್ಕೆ ಬರ್ತೀನಿ ಅಂದಿದ್ರು, ಆದ್ರೆ ಅಧಿಕಾರಕ್ಕೆ ಬಂದ್ರಾ? ಅವರು ಹೇಳಿದ್ದು ತದ್ವಿರುದ್ಧ ನಡೆಯತ್ತೆ ಎಂದಿದ್ದಾರೆ.
ಅವರು ಕಾಂಗ್ರೆಸ್ ಅಧಿಕಾರ ವಹಿಸಿಕೊಳ್ಳುತ್ತೆ ಅಂದ್ರೆ ಅದು ಹಾಗೆ ಆಗೋದೆ ಇಲ್ಲ. ಬಿಜೆಪಿ ಉಳಿಯಲ್ಲ ಅಂದ್ರೆ ಈ ಅವಧಿ ಮುಗಿಸಿ ಮತ್ತೆ ಇನ್ನ ೫ ವರ್ಷಗಳ ಕಾಲ ಅಧಿಕಾರಕ್ಕೆ ಬರುತ್ತೆ ಎಂದರು.
ಮಚ್ಚೆ ಇರೋರು ಹೇಳಿದ್ದು ನಡೆಯತ್ತೆ ಅಂತಾರೆ, ಸಿದ್ದರಾಮಯ್ಯನವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ ಎಂದು ಟೀಕಾ ಪ್ರಹಾರ ನಡೆಸಿದರು.
Discussion about this post