ಚಿಕ್ಕಮಗಳೂರು: ಪರಿಶಿಷ್ಟ ಪಂಗಡಗಳ ಬುಡಕಟ್ಟು ಬೆಳೆಗಾರರಿಗೆ ಕಾಫಿ ಮಂಡಳಿಯಿಂದ ನೀಡಲಾಗುವ ತಾಂತ್ರಿಕ ಸಲಹೆಗಳ ಜೊತೆಗೆ ಆರ್ಥಿಕ ನೆರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ತಿಳಿಸಿದರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಕಾಫಿ ಮಂಡಳಿ ಸಂಯುಕ್ತಾಶ್ರದಲ್ಲಿ ಕಾಫಿ ಮತ್ತು ಕಾಳುಮೆಣಸು ಬೆಳೆಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಬೆಳೆಗಾರರಿಗೆ ಕಾಫಿ ಗಿಡಗಳನ್ನು ವಿತರಿಸಿ ಮಾತನಾಡಿದರು.
ಬುಡಕಟ್ಟು ಕಾಫಿ ಮತ್ತು ಮೆಣಸು ಬೆಳೆಯುವ ಬೆಳೆಗಾರರು ಮಂಡಳಿಯು ನೀಡುವ ತಾಂತ್ರಿಕ ಸಲಹೆ ಜೊತೆಗೆ ಆರ್ಥಿಕ ನೆರವನ್ನು ಪಡೆದು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸಬಲರಾಗಬೇಕು ಎಂದು ಹೇಳಿದರು.
ಕೇರಳ ರಾಜ್ಯದಲ್ಲಿ ಎರಡು ಎಕರೆ ಜಮೀನು ಹೊಂದಿರುವ ಬೆಳೆಗಾರರು ಉತ್ತಮ ಕೃಷಿ ಪದ್ದತಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ. ಜಿಲ್ಲೆಯ ಪಶ್ಚಿಮ ಘಟ್ಟಗಳ ಕಳಸ, ಮೂಡಿಗೆರೆ ಸುತ್ತಮುತ್ತಲಿನ ಸಾಲು ಅತ್ಯಂತ ಸಂಪದ್ಬರಿತ, ಫಲವತ್ತಾದ ಭೂಮಿಯನ್ನು ಹೊಂದಿದ್ದು ಸಣ್ಣ ಬೆಳೆಗಾರರಾದು ನೀವುಗಳು ಕಾಳಜಿ ವಹಿಸಿ ಶ್ರಮಪಟ್ಟು ದುಡಿದ್ದಲ್ಲಿ ಉತ್ತಮ ಲಾಭಗಳಿಸಬಹುದು ಎಂದು ಕಿವಿ ಮಾತು ಹೇಳಿದರು.
ಕೇಂದ್ರಿಯ ಕಾಫಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸೂರ್ಯಪ್ರಕಾಶ್ ಮಾತನಾಡಿ ಕಾಫಿ ಉತ್ಪಾದನೆಯನ್ನು ಹೆಚ್ಚಿಸಲು ಸಲುವಾಗಿ ಅನುತ್ಪಾದಕ ಗಿಡಗಳನ್ನು ಕಸಿ ಮುಖಾಂತರ ಹಾಗೂ ಕಾಫಿ ಸಂಶೋಧನಾ ಕೇಂದ್ರದಿಂದ ಉತ್ಪಾದನೆ ಹೆಚ್ಚಿಸುವಂತೆ ಸಲಹೆ ನೀಡಿದರು.
ಕಾಫಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮೂಲಭೂತ ಸೌಕರ್ಯಗಳನ್ನು ಯೋಜನೆಯಲ್ಲಿ ನೀಡಲು ಉದ್ದೇಶಿಸಲಾಗಿದ್ದು ಸದುಪಯೋಗಪಡೆದುಕೊಳ್ಳುವಂತೆ ತಿಳಿಸಿದರು.
ಚಿಕ್ಕಮಗಳೂರು ಕಾಫಿ ಮಂಡಳಿ ಉಪನಿರ್ದೇಶಕ ಶ್ರೀನಿವಾಸ್ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಕಾಫಿ ಮಂಡಳಿಯಿಂದ ಮುಂಬರುವ ಯೋಜನೆಗಳ ಸದುಪಯೋಗಪಡೆದುಕೊಳ್ಳಬೇಕು ಎಂದರು. ಇದೇ ವೇಳೆ ಬಾಳೆಹೊಳೆಯಲ್ಲಿ ಸ್ಥಾಪಿಸಲಾದ ಕಾಫಿ ನರ್ಸರಿ ಉತ್ತಮ ನಿರ್ವಹಣೆಗಾಗಿ ಯೋಜನಾ ಸಿಬ್ಬಂದಿ ಹಾಗೂ ನಿರ್ವಾಹಕ ಉಮೇಶ್ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮೂಡಿಗೆರೆ ಪ್ರಭಾರಿ ಹಿರಿಯ ಸಂಪರ್ಕ ಅಧಿಕಾರಿ ಮೊಹಮ್ಮದ್ ಅಸೀಫ್, ಕಳಸ ಬುಡಕಟ್ಟು ರೈತ ಉತ್ಪಾದಕ ಸಂಘದ ಅಧ್ಯಕ್ಷ ಒಬಯ್ಯ, ಕಾರ್ಯದರ್ಶಿ ಸುರೇಶ್, ಧನಲಕ್ಷ್ಮಿ, ಗಿರಿಜನ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸತೀಶ್, ಯೋಜನಾ ಸಿಬ್ಬಂದಿ ಅಣ್ಣೇಗೌಡ, ಅನಿಲ್ಕುಮಾರ್, ರಶ್ಮಿ, ಸಂತೋಷ್ಕುಮಾರ್ ಇದ್ದರು. ಪ್ರಭುಗೌಡ ಕಾಮರೆಡ್ಡಿ ನಿರೂಪಿಸಿ, ಎಸ್.ಡಿ ಜೋಶಿ ವಂದಿಸಿದರು.
ತಮ್ಮ ಕ್ಷೇತ್ರದ ಸಮಸ್ಯೆಗೆ ಕಂದಾಯ ಸಚಿವ ಆರ್ ಅಶೋಕ್ ಕಷ್ಟ ಅರಿತು ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದಾರೆ. ತಡವಾದರೂ ಅತಿವೃಷ್ಠಿ ಪಟ್ಟಿಯಲ್ಲಿ ಮೂಡಿಗೆರೆಯನ್ನು ಸೇರ್ಪಡೆ ಮಾಡಿದ್ದಾರೆ ಎಂದು ತಿಳಿಸಿದರು.

























Discussion about this post