ಮೇಷರಾಶಿ
ಪ್ರಯಾಣದ ಯೋಜನೆ ಇದ್ದರೆ ಅದನ್ನು ಮುಂದೆ ಹಾಕಿ. ಈಗ ಪ್ರಯಾಣಕ್ಕೆ ಸಕಾಲವಲ್ಲ. ಕೌಟುಂಬಿಕ ವಿಷಯಗಳನ್ನು ಆದ್ಯತೆ ಯಲ್ಲಿ ನಿಭಾಯಿಸಿ. ಆರ್ಥಿಕ ಬಿಕ್ಕಟ್ಟು. ಹೊಸ ಸ್ನೇಹಿತರ ಭೇಟಿ, ಅನಾರೋಗ್ಯ, ಕುಟುಂಬ ಕಲಹ, ವಿದ್ಯಾರ್ಥಿಗಳಿಗೆ ಅನುಕೂಲ, ದೂರ ಪ್ರಯಾಣದಿಂದ ಕಾರ್ಯಾನುಕೂಲ, ಉದ್ಯೋಗ ಸ್ಥಾನ ಬದಲಾವಣೆ, ಅಕಾಲ ಭೋಜನ.
ವೃಷಭರಾಶಿ
ಕೆಲವು ಕಾರ್ಯಗಳ ಫಲಿತಾಂಶ ದೊರೆಯಲು ಕಾಯಬೇಕು. ತಕ್ಷಣವೇ ಫಲ ಸಿಗಬೇಕೆಂದು ಆತುರ ಸಲ್ಲದು. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ವ್ಯವಹಾರದಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಶತ್ರುಬಾಧ, ಪರರಿಗೆ ವಂಚನೆ, ಆರ್ಥಿಕವಾಗಿ ಅಭಿವೃದ್ದಿ, ಇಲ್ಲ ಸಲ್ಲದ ಆರೋಪ ಕೇಳುವಿರಿ, ಸಹೋದ್ಯೋಗಿಗಳ ಸಹಕಾರ.
ಮಿಥುನರಾಶಿ
ನೀವು ಮಹತ್ವಾಕಾಂಕ್ಷಿ. ಆದರೆ ನಿಮ್ಮ ಸಾಮರ್ಥ್ಯಕ್ಕೆ ಎಟುಕದ ಕೆಲಸ ಮಾಡಲು ಹೋಗಬೇಡಿ. ಅದರಿಂದ ನಿರಾಶೆಯಾದೀತು. ಕೌಟುಂಬಿಕ ಅಸಹಕಾರ. ಇಷ್ಟಾರ್ಥ ಕಾರ್ಯಸಿದ್ದಿ, ಹಿರಿಯ ಮಾರ್ಗದರ್ಶನ ಅಗತ್ಯ, ಆಭರಣ ಖರೀದಿಯಿಂದ ಸಂತಸ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮಿತ್ರರ ಭೇಟಿಯಿಂದ ನೆಮ್ಮದಿ, ತಾಯಿಯಿಂದ ಸಂತಸ.
ಕರ್ಕಾಟಕರಾಶಿ
ಆರ್ಥಿಕ ಹೊರೆ ಬಾಸುವುದು. ಖರ್ಚು ಕಡಿಮೆ ಮಾಡ ಬೇಕು. ಅನವಶ್ಯ ವಸ್ತುಖರೀದಿ ಬೇಡ. ಕೌಟುಂ ಬಿಕ ವಿಷಯ ಚಿಂತೆಗೆ ಕಾರಣವಾಗುವುದು. ಪಾಲುದಾರಿಕೆ ವ್ಯವಹಾರದಲ್ಲಿ ದುಡುಕಿನ ನಿರ್ಧಾರ, ಸಾರ್ವಜನಿಕವಾಗಿ ಮನ್ನಣೆ, ನೌಕರಿಯಲ್ಲಿ ಕಿರಿಕಿರಿ, ಆರ್ಥಿಕವಾಗಿ ನೆಮ್ಮದಿಯಿದ್ದರೂ ಖರ್ಚು ಅಧಿಕವಾಗಲಿದೆ, ದುರಾಲೋಚನೆಯಿಂದ ಕಾರ್ಯಹಾನಿ.
ಸಿಂಹರಾಶಿ
ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯಲು ಬಯಸುವಿರಿ. ಅದರಲ್ಲಿ ಸಫಲರೂ ಆಗುವಿರಿ. ಆದರೂ ಕೆಲವು ತೊಡಕುಗಳು ಸಂತೋಷ ಹಾಳುಮಾಡಬಹುದು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಧಿಕ ಲಾಭ, ದಾಂಪತ್ಯದಲ್ಲಿ ವಿರಸ, ನಿರೀಕ್ಷಿತ ಸ್ಥಾನ ಗೌರವ ಲಭ್ಯ, ಬಂಧು ಮಿತ್ರರ ಜೊತೆಗೆ ತಾಳ್ಮೆಯಿಂದ ವ್ಯವಹರಿಸಿ, ಸಾರ್ಜನಿಕವಾಗಿ ಮನ್ನಣೆ, ಅತಿಯಾದ ಕೋಪ.
ಕನ್ಯಾರಾಶಿ
ವೃತ್ತಿಯಲ್ಲಿ ಸಂಘರ್ಷದ ಪರಿಸ್ಥಿತಿ ಉಂಟಾದೀತು. ಸಹನೆ ಕಾಯ್ದುಕೊಳ್ಳಬೇಕು. ಮನೆಯಲ್ಲಿ ಸಣ್ಣ ಸಮಸ್ಯೆಯೊಂದು ನೆಮ್ಮದಿ ಕದಡುವುದು. ಪುಣ್ಯಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಮಕ್ಕಳ ವಿಚಾರದಲ್ಲಿ ನೆಮ್ಮದಿ, ಬಾಕಿ ವಸೂಲಿಯಿಂದ ಸಂತಸ, ದುಷ್ಟರಿಂದ ತೊಂದರೆ, ಜವಾಬ್ದಾರಿ ಹೆಚ್ಚಲಿದೆ, ಸಹೋದ್ಯೋಗಿಗಳ ಸಹಕಾರ.
ತುಲಾರಾಶಿ
ಬಂಧುತ್ವಕ್ಕೆ ಸಂಬಂಸಿ ಸಂತೋಷದ ಸುದ್ದಿ ಕೇಳುವಿರಿ. ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣುವುದು. ಎಲ್ಲರೊಡನೆ ಹೊಂದಾಣಿಕೆ ಸಾಸಿ. ಶತ್ರುಭಯ, ಕಾರ್ಯಗಳಲ್ಲಿ ಅಪಜಯ, ಸಾಲ ಮಾಡುವ ಪರಿಸ್ಥಿತಿ ಎದುರಾಗಲಿದೆ, ಕೈ ಹಾಕಿದ ಕೆಲಸಗಳಲ್ಲಿ ವಿಘ್ನ, ಜವಾಬ್ದಾರಿಯಿಂದ ಕಾರ್ಯವೈಖರಿ, ಹೊಂದಾಣಿಕೆಯಿಂದ ಅಧಿಕ ಲಾಭ ದೊರೆಯಲಿದೆ.
ವೃಶ್ಚಿಕರಾಶಿ
ನಿಮ್ಮ ಕಾರ್ಯಗಳು ಸತತ ವಿಫಲವಾಗುವುದು ನಿಮಗೆ ಹತಾಶೆ ಹುಟ್ಟಿಸುತ್ತದೆ. ನಿರಾಶೆ ಬೇಡ, ತಾಳ್ಮೆಯಿಂದ ಕಾದರೆ ಎಲ್ಲವೂ ಸರಿಹೋಗುವುದು. ಅಧಿಕ ತಿರುಗಾಟದಿಂದ ದೇಹಾಯಾಸ, ಧನಾರ್ಜನೆಗೆ ಕೊರತೆಯಿರದು, ಅನಾವಶ್ಯಕ ಚರ್ಚೆಗೆ ಆಸ್ಪದ ಕೊಡಬೇಡಿ, ಪುಣ್ಯಕ್ಷೇತ್ರಗಳ ದರ್ಶನ, ಶತ್ರುಗಳಿಂದ ತೊಂದರೆ, ಮಾತಿನ ಮೇಲೆ ಹಿಡಿತ ಇರಲಿ.
ಧನಸುರಾಶಿ
ಏಕತಾನತೆಯ ಬದುಕು ಬೇಸರ ಹುಟ್ಟಿಸಬಹುದು. ಹೊಸದೇನೋ ಮಾಡಲು ತುಡಿತ ಹುಟ್ಟಬಹುದು. ಆದರೆ ಅದಕ್ಕೆ ಸೂಕ್ತ ಕಾಲಾವಕಾಶ ದೊರಕದು. ಸಾಮಾಜಿಕವಾಗಿ ಗೌರವ, ಗುರು ಹಿರಿಯರ ಸಹಕಾರ, ಕೌಟುಂಬಿಕವಾಗಿ ನೆಮ್ಮದಿ, ವ್ಯಾಪಾರದಲ್ಲಿ ಅಧಿಕ ಲಾಭ, ರಾಜಕಾರಣಿಗಳಿಗೆ ಅನುಕೂ, ಮಕ್ಕಳಿಂದ ನೆಮ್ಮದಿ, ಹಿರಿಯ ಆರೋಗ್ಯದ ಕಡೆ ಗಮನ ಹರಿಸಿ.
ಮಕರರಾಶಿ
ಪ್ರತಿಯೊಂದು ಕೆಲಸ ನಿಯಮಾನುಸಾರ ಮಾಡಿರಿ. ವಿಭಿನ್ನ ದಾರಿ ತುಳಿದರೆ ಅದು ಫಲ ನೀಡಲಾರದು. ಹಣ ಗಳಿಕೆಗೆ ಸುಲಭ ದಾರಿ ಹುಡುಕದಿರಿ.ಸ್ಥಳ ಬದಲಾವಣೆ, ದಂಪತಿಗಳಲ್ಲಿ ಅನ್ಯೋನ್ಯತೆ, ಉದ್ಯೋಗದಲ್ಲಿ ಪ್ರಗತಿ, ದೂರದ ಊರುಗಳಿಂದ ಶುಭವಾರ್ತೆ ಕೇಳುವಿರಿ, ಶತ್ರುಗಳಿಂದ ತೊಂದರೆ, ಕೃಷಿಕರಿಗೆ ಅನುಕೂಲ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ.
ಕುಂಭರಾಶಿ
ಭಾವನಾತ್ಮಕ ಪರಿಸ್ಥಿತಿ ಎದುರಿಸಬೇಕಾದೀತು. ಇತರರ ಮುಂದೆ ದುರ್ಬಲ ಮನಸ್ಸಿ ನವರೆಂದು ತೋರಿಸಿ ಕೊಳ್ಳಬೇಡಿ. ದೃಢ ನಿಲುವು ತೋರಿರಿ. ನಂಬಿದ ಜನರಿಂದಲೇ ಮೋಸ ಹೋಗುವ ಸಾಧ್ಯತೆ, ವ್ಯವಹಾರದಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ದೊರೆಯಲಿದೆ, ಅಕಾಲ ಭೋಜನ, ಇತರರಿಗೆ ವೈಮನಸ್ಸು ಮೂಡಲಿದೆ, ಸಹೋದ್ಯೋಗಿಗಳಿಂದ ಅಧಿಕ ಲಾಭ.
ಮೀನರಾಶಿ
ಅತಿಯಾದ ಕೆಲಸದ ಒತ್ತಡವು ಉಲ್ಲಾಸ ಕಸಿಯಬಹುದು. ಸಂಜೆ ವೇಳೆಗೆ ಜಡತೆ ಆವರಿಸಬಹುದು. ಆಪ್ತರ ಜತೆಗೆ ಕಾಲ ಕಳೆಯಿರಿ. ಆಸ್ತಿ ಖರೀದಿ ಯೋಗ, ಆರೋಗ್ಯದಲ್ಲಿ ಅಭಿವೃದ್ದಿ, ಬಾಕಿ ವಸೂಲಿಯಿಂದ ನೆಮ್ಮದಿ, ಅಧಿಕಾರಿಗಳಿಂದ ಸಹಕಾರ, ಸ್ನೇಹಿತರಿಂದ ಕಿರಿಕಿರಿ, ಮನೆಯಲ್ಲಿ ಕಿರಿಕಿರಿ, ಸಾಮಾಜಿಕವಾಗಿ ಇಲ್ಲ ಸಲ್ಲದ ಆರೋಪ.
Discussion about this post