ಅಲಹಾಬಾದ್: ಭಾರತದ ಆತ್ಮವಾದ ಶ್ರೀರಾಮ ಮತ್ತು ಶ್ರೀಕೃಷ್ಣ ಪಾತ್ರಗಳನ್ನು ಸೃಷ್ಟಿಸಿದ ವಾಲ್ಮೀಕಿ ಮಹರ್ಷಿ ಮತ್ತು ವೇದ ವ್ಯಾಸರಿಗೂ ಪೂಜನೀಯ ಸ್ಥಾನ ಸಿಗಬೇಕು ಎಂದು ಅಹಲಹಾಬಾದ್ ಹೈಕೋರ್ಟ್ ಜಸ್ಟೀಸ್ ಶೇಖರ್ ಕುಮಾರ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಆಮ್ಲಜನಕವನ್ನೇ ಸ್ವೀಕರಿಸಿ ಅದನ್ನೆ ಬಿಡುವ ಏಕೈಕ ಪ್ರಾಣಿ ಗೋವು ಎಂದು ವಿಜ್ಞಾನಿಗಳೂ ಹೇಳಿದ್ದಾರೆಂದು ಕಳೆದ ತಿಂಗಳು ವಿವಾದಾತ್ಮಕ ಅಭಿಪ್ರಾಯ ದಾಖಲಿಸಿದ್ದ ಅಹಲಹಾಬಾದ್ ಹೈಕೋರ್ಟ್ನ ಜಸ್ಟೀಸ್ ಶೇಖರ್ ಕುಮಾರ್ ಯಾದವ್, ಈಗ ಶ್ರೀರಾಮ ಮತ್ತು ಶ್ರೀಕೃಷ್ಣರಿಗೆ ರಾಷ್ಟ್ರೀಯ ಗೌರವ ದೊರೆಯಬೇಕು. ಇಂಥ ಕಾನೂನನ್ನು ಸಂಸತ್ ರೂಪಿಸಬೇಕು ಎಂದು ಹೇಳಿದ್ದಾರೆ.
ರಾಮಯಾಣ ಮತ್ತು ಮಹಾಭಾರತದಲ್ಲಿ ಇವೆರಡೂ ಪಾತ್ರಗಳನ್ನು ಸೃಷ್ಟಿಸಿದ ವಾಲ್ಮೀಕಿ ಮಹರ್ಷಿ ಮತ್ತು ವೇದ ವ್ಯಾಸರಿಗೂ ಕಾನೂನಾತ್ಮಕವಾಗಿ ಪೂಜನೀಯ ಸ್ಥಾನವನ್ನು ಮಾನ್ಯ ಮಾಡಬೇಕು ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದೇವರನ್ನು ಟೀಕಿಸಿದ ಆರೋಪದ ಮೇಲೆ ಕಳೆದ 10 ತಿಂಗಳಿಂದ ಬಂಧನದಲ್ಲಿರುವ ಉತ್ತರ ಪ್ರದೇಶದ ಹಥರಾಸ್ ಮೂಲದ ಅಕಾಶ್ ಜಾಟವ್ ಜಾಮೀನು ಅಜಿರ್ಯನ್ನು ವಿಚಾರಣೆಗೆ ಅಂಗೀಕರಿಸುವ ಸಂದರ್ಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನಾಸ್ತಿಕತೆಯನ್ನೂ ಸಂವಿಧಾನ ಮಾನ್ಯ ಮಾಡುತ್ತದೆ. ಹಾಗೆಂದ ಮಾತ್ರಕ್ಕೆ ದೇವತೆಗಳನ್ನು ಅಶ್ಲೀಲವಾಗಿ ಟೀಕಿಸಬಹುದೆಂದು ಅರ್ಥವಲ್ಲ. ಬೇರೆ ದೇಶಗಳಲ್ಲಿ ಧರ್ಮ ಮತ್ತು ದೇವರನ್ನು ಅವಹೇಳನ ಮಾಡಿದರೆ ಅತ್ಯಂತ ಕಠಿಣ ಇಲ್ಲವೆ ಅಮಾನವೀಯ ಸಜೆ ಇದೆ. ಭಾರತದಲ್ಲಿ ಇದು ಘೋರವಾಗಿಲ್ಲ. ನಾವು ವಾಸಿಸುವ ದೇಶದ ಸಂಸ್ಕೃತಿಯನ್ನು ಆದರ ಮತ್ತು ಗೌರವದಿಂದ ಕಾಣುವುದನ್ನು ಕಲಿಯಬೇಕು. ಶ್ರದ್ಧಾವಂತರ ನಂಬಿಕೆಗೆ ಧಕ್ಕೆಯಾಗುವಂತಹ ಟೀಕೆ ಸಲ್ಲದು. ದೇಶದ ಸಂಸ್ಕತಿಯನ್ನು ಮಕ್ಕಳಿಗೆ ಶಾಲೆಯಲ್ಲೇ ಹೇಳಿಕೊಡಬೇಕಿದೆ’ ಎಂದು ನ್ಯಾಯಮೂರ್ತಿ ಯಾದವ್ ಹೇಳಿದ್ದಾರೆ.
ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ, ಅವಕ್ಕೆ ಮೂಲಭೂತಹಕ್ಕನ್ನು ಖಾತ್ರಿ ಪಡಿಸುವಂತಹ ಕಾನೂನಿನ ಅಗತ್ಯವಿದೆ ಎಂದು ಜಸ್ಟೀಸ್ ಯಾದವ್ ಕಳೆದ ತಿಂಗಳು ಹಸುಗಳನ್ನು ಕಸಾಯಿಖಾನೆಗೆ ಸಾಗಿಸಿದ ಪ್ರಕರಣದ ವಿಚಾರಣೆ ವೇಳೆ ಹೇಳಿದ್ದರು.
Allahabad High Court asks State to bring law to honor Rama and Krishna
ಇದನ್ನೂ ಓದಿ: ಶಿಲುಬೆ ಇರುವುದು, ಚರ್ಚ್ಗೆ ಹೋಗುವುದನ್ನು ಆಧರಿಸಿ ಎಸ್ಸಿ ಪ್ರಮಾಣಪತ್ರ ರದ್ದುಗೊಳಿಸಲಾಗದು: ಮದ್ರಾಸ್ ಹೈಕೋರ್ಟ್
ಇದನ್ನೂ ಓದಿ: ಲಂಚ ಪ್ರಕರಣ: ನಿವೃತ್ತ ನ್ಯಾ. ಇಂದ್ರಕಲಾ ವಿರುದ್ಧದ ತನಿಖೆಗೆ ಮನವಿ – ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್
Discussion about this post