ನವದೆಹಲಿ: ಆಹಾರಕ್ಕೆ ಉಪಯೋಗಿಸುವ ತೈಲ ಮತ್ತು ಎಣ್ಣೆಕಾಳುಗಳ ಬೆಲೆಯನ್ನು ತಹಬದಿಗೆ ತರುವ ಉದ್ದೇಶದಿಂದ ಅವುಗಳ ದಾಸ್ತಾನಿಗೆ 2022ರ ಮಾರ್ಚ್ ಅಂತ್ಯದವರೆಗೆ ಸರ್ಕಾರ ಮಿತಿ ಹಾಕಿದೆ. ಇದು ಶ್ರೀಸಾಮಾನ್ಯರ ಮೇಲಿರುವ ಬೆಲೆ ಏರಿಕೆಯ ಹೊರೆಯನ್ನು ತಗ್ಗಿಸುತ್ತದೆ ಮಾಡುತ್ತದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣೆ ಇಲಾಖೆ ಹೇಳಿದೆ.
ದೇಶದ ಒಟ್ಟಾರೆ ಖಾದ್ಯ ತೈಲ ಬಳಕೆಯಲ್ಲಿ ಶೇ. 60ರಷ್ಟು ತೈಲ ಹೊರ ದೇಶಗಳಿಂದ ಬರುವ ಕಾರಣ ವಿದೇಶ ವಾಣಿಜ್ಯ ವಹಿವಾಟಿನ ಮಹಾನಿರ್ದೇಶನಾಲಯ ನೀಡಿದ ಆಮದು ಮತ್ತು ರ್ತು ಸಂಕೇತ ಸಂಖ್ಯೆಯನ್ನು ಹೊಂದಿರುವ ರ್ತುದಾರರು, ಆಮದುದಾರರು ಎಣ್ಣೆ ಮಿಲ್, ಸಂಸ್ಕರಣಾ ಟಕ, ಡೀಲರ್ಗಳು, ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ನಿರ್ಬಂಧದಲ್ಲಿ ಕೆಲವು ವಿನಾಯಿತಿ ನೀಡಲಾಗಿದೆ.
ಅಂತರರಾಷ್ಟ್ರೀಯ ತೈಲ ವಹಿವಾಟು ಮತ್ತು ಸ್ಥಳಿಯ ಸರಬರಾಜಿನಲ್ಲಿನ ಏರಿಳಿತಗಳ ಕಾರಣ ಕಳೆದ ಒಂದು ವರ್ಷದಿಂದ ಖಾದ್ಯ ತೈಲದ ಬೆಲೆ ಲೀಟರ್ಗೆ ಸರಾಸರಿ 46.15ರಷ್ಟು ಹೆಚ್ಚಳ ಕಂಡಿದೆ. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣೆ ಇಲಾಖೆ (ಅಕ್ಟೋಬರ್ 9ರವರೆಗೆ) ನೀಡಿರುವ ಮಾಹಿತಿ ಪ್ರಕಾರ, ಆಹಾರಕ್ಕೆ ಬಳಸುವ ಎಣ್ಣೆ ಬೆಲೆ ಇಂತಿದೆ: ಸೋಯಾ 154.95 ರೂ. ಇದ್ದು, ಕಳೆದ ವರ್ಷ ಇದು 46.15 ರೂ. ಇತ್ತು. 2020ರ ಇದೇ ಹೊತ್ತಿಗೆ 129.19 ರೂ. ಇದ್ದ ಸಾಸಿವೆ ಎಣ್ಣೆ ಧಾರಣೆ ಈಗ 184.43 ರೂ.ಗೆ ಏರಿದೆ. ತಾಳೆ ಎಣ್ಣೆ ದರ 95.68 ರೂ.ನಿಂದ 132.06 ರೂ.ಗೆ ಹೆಚ್ಚಳ ಕಂಡಿದೆ. ವನಸ್ಪತಿ ಧಾರಣೆ ಈಗ 136.74 ರೂ. ಮುಟ್ಟಿದೆ. ಆದರೆ, ಕಳೆದ ವರ್ಷ ಇದಕ್ಕೆ 95.50 ರೂ. ಇತ್ತು. 2020ರಲ್ಲಿ 122.82 ರೂ.ಗೆ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ದೊರೆಯುತ್ತಿದ್ದರೆ ಈಗ ಅದಕ್ಕೆ 170.09 ರೂ. ತೆರಬೇಕಿದೆ.
ಕಳೆದ ಒಂದು ವರ್ಷದಿಂದ ಖಾದ್ಯ ತೈಲದ ಧಾರಣೆ ಲೀಟರ್ಗೆ ಸರಾಸರಿ 46.15ರಷ್ಟು ಏರಿಕೆ ಆಗಿದೆ. ಆದ್ದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
Govt of India Fixes Limitation for Storage of Edible Oil
ಇದನ್ನೂ ಓದಿ: ಅಡುಗೆ ಅನಿಲ ಬೆಲೆ ಏರಿಕೆ: 25 ರೂ. ಏರಿಸಿ ಶಾಕ್
ಇದನ್ನೂ ಓದಿ: ಶಿವಮೊಗ್ಗದ ಡಿಸಿ ಕಚೇರಿಯ ಗಿರಿರಾಜ್ ಪತ್ತೆ
Discussion about this post