ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ. ಮಾನವ ಪ್ರಯತ್ನದ ಜೊತೆಗೆ ಗ್ರಹಗತಿಗಳ ಪ್ರಭಾವವೂ ಮನುಷ್ಯರ ಬದುಕಿನ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡರೆ ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ದೋಷಪೂರಿತರಾದ ಗ್ರಹಗಳಿಂದ ತೊಂದರೆ ಎದುರಿಸುತ್ತಿರುವವರು ಶಾಂತಿಗೆ ಸುಲಭ ಪರಿಹಾರ ಕ್ರಮಗಳನ್ನು ಅನುಸರಿಸಬಹುದು ಎನ್ನುತ್ತಾರೆ ಗೌರಿಬಿದನೂರಿನ ಜ್ಯೋತಿಷಿ ಪಂಡಿತ್ ರಾಮಕೃಷ್ಣ ಗುಂಜೂರ್. ಗ್ರಹಗತಿಗಳ ಸಮಸ್ಯೆ ಸುಲಭದ ಪರಿಹಾರ ಜೊತೆಗೆ ವಾರ ಭವಿಷ್ಯದ ವಿವರವೂ ಈ ಬರಹದಲ್ಲಿದೆ.
ಶನಿದೋಷವಿದ್ದಲ್ಲಿ ಶನಿವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ 9 ಕರ್ಪೂರಗಳನ್ನು ದೇವರ ಗರ್ಭಗುಡಿಯ ಮುಂದೆ ಹಚ್ಚಿ, 9 ಪ್ರದಕ್ಷಿಣೆಗಳನ್ನು ಮಾಡಿ, ಆಂಜನೇಯನ ಪ್ರಾರ್ಥನೆ ಮಾಡಿ. ಶನಿಮಹಾತ್ಮನ ದೇವಾಲಯಕ್ಕೆ ಹೋಗಿ 9 ಎಳ್ಳುಬತ್ತಿಗಳನ್ನು ಹಚ್ಚಿ, 9 ಪ್ರದಕ್ಷಿಣೆಗಳನ್ನು ಮಾಡಿ ಪ್ರಾರ್ಥಿಸಿಕೊಳ್ಳಿ. ಗುರುಬಲವಿಲ್ಲದಿದ್ದರೆ ಗೋಪೀಚಂದನ ಅಥವಾ ಶ್ರೀಗಂಧವನ್ನು ಹಣೆಗೆ ಮತ್ತು ಹೊಕ್ಕಳಿಗೆ ಹಚ್ಚಿಕೊಳ್ಳಿ. ಗುರುವಾರದಂದು ರಾಘವೇಂದ್ರ ಸ್ವಾಮಿಗಳ ಮಠದಲ್ಲಾಗಲೀ ಅಥವಾ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಾಗಲೀ ಕಡಲೇಕಾಳಿನಿಂದ ಮಾಡಿದ ಪ್ರಸಾದವನ್ನು ಹಂಚಿ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೂ ಗುರುವಿನ ವಿಶೇಷ ಅನುಗ್ರಹ ಸಿಗುತ್ತದೆ.
ಮಂಗಳಗ್ರಹದ ಸಮಸ್ಯೆಯಿದ್ದಲ್ಲಿ, ದೇವಿಯ ಆರಾಧನೆ ಅಥವಾ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದರಿಂದ ಅನುಕೂಲವಾಗುತ್ತದೆ. ರಾಹುಗ್ರಹದ ಸಮಸ್ಯೆಯಿದ್ದಲ್ಲಿ ರಾಹುವಿಗೇ ವಿಶೇಷ ಪ್ರಾರ್ಥನೆ ಮಾಡಬೇಕು ಅಥವಾ ನಾಗನಿಗೆ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಅಶ್ವತ್ಥಕಟ್ಟೆಗೆ ಪೂಜೆ ಮಾಡುವುದರಿಂದ ರಾಹು-ಕೇತು ಇಬ್ಬರ ಶಾಂತಿಯಾಗುತ್ತದೆ. ಚಂದ್ರ ದೋಷಪೂರಿತನಾಗಿದ್ದರೆ ಶಿವನ ಆರಾಧನೆ ಮಾಡುವುದರಿಂದ ಅನುಕೂಲವಾಗುತ್ತದೆ.
ಈಗ ಪ್ರತಿ ರಾಶಿಯ ವಾರ ಭವಿಷ್ಯವನ್ನು ಪರಿಶೀಲಿಸೋಣ. ವಾರ ಭವಿಷ್ಯ – ಭಾನುವಾರದಿಂದ (17/10/2021) ಶನಿವಾರದವರೆಗೆ (23/10/2021).
ಮೇಷ ರಾಶಿ: ಈ ವಾರ ಹಣಕಾಸಿನ ಅಡಚಣೆ ಹೆಚ್ಚಾಗುವ ಸಾಧ್ಯತೆ. ಆರೋಗ್ಯದಲ್ಲಿ ಬದಲಾವಣೆಗಳು, ವಾಹನದಲ್ಲಿ ತಿರುಗಾಡುವಾಗ ಜಾಗ್ರತೆ ವಹಿಸಿ. ಚಾಕು ಇತರೆ ಆಯುಧಗಳನ್ನು ಬಳಸಿ ಕೆಲಸ ಮಾಡುವಾಗ ಜಾಗ್ರತೆ ವಹಿಸಿ ಮಾಡುವ ಹೊಸ ಪ್ರಯತ್ನಗಳಿಗೆ ಅನುಕೂಲಕರವಾಗಿದೆ. ಮಂಗಳ ಗ್ರಹದ ಜಪ, ನರಸಿಂಹ ದೇವರ ಪೂಜೆಯಿಂದ ಉತ್ತಮ ಫಲ.
ವೃಷಭ ರಾಶಿ: ರಾಶಿಯಲ್ಲಿಯೇ ರಾಹು ಇರುವುದರಿಂದ ಹಣದ ಅಡಚಣೆ ಅಥವಾ ಖರ್ಚು ಹೆಚ್ಚಾಗುವ ಸಂಭವ. ಆದರೂ ನಿಮಗೆ ಬೇಕಾದ ಹಣ ಬಂದು ಸೇರುತ್ತದೆ. ಮಕ್ಕಳ ವಿದ್ಯಾಭ್ಯಾಸ, ಕೆಲಸ ಅಥವಾ ಮುಂದಿನ ಭವಿಷ್ಯದ ಬಗ್ಗೆ ಚಿಂತೆ. ಗಂಡ-ಹೆಂಡತಿಯ ಮಧ್ಯೆ ಸಣ್ಣಪುಟ್ಟ ಕಲಹ ಬರಬಹುದು. ರಾಹು-ಕೇತು ಆರಾಧನೆ ಅಥವಾ ಅಶ್ವತ್ಥನಾರಾಯಣ ಆರಾಧನೆಯಿಂದ ಶುಭ.
ಮಿಥುನ ರಾಶಿ: ತಾಯಿಯ ಆರೋಗ್ಯದ ಬಗ್ಗೆ ಚಿಂತೆ. ಮಕ್ಕಳು ಆಗದೆ ಇರುವ ದಂಪತಿಗೆ ಮಕ್ಕಳ ಚಿಂತೆ ಅಧಿಕವಾಗಿ ಮಾನಸಿಕ ಹಿಂಸೆ. ಕೈ ಹಾಕಿದ ಕಾರ್ಯಗಳು ವಿಫಲ. ವಿಘ್ನ ಆರ್ಥಿಕ ಸಂಕಷ್ಟ ಚಿಂತೆ, ಮನೋಬಲದಿಂದ ಎಲ್ಲವನ್ನೂ ಸ್ವೀಕರಿಸಿ ವಾರ ಕಳೆಯುವ ಸಮಯ. ಗುರು ಮತ್ತು ಶನಿಯ ಆರಾಧನೆಯಿಂದ ಉತ್ತಮ ಫಲ.
ಕಟಕ ರಾಶಿ: ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸಕ್ಕೆ ಉತ್ತಮ ಫಲವಿದೆ. ಮಕ್ಕಳ ಬಗ್ಗೆ ಚಿಂತೆ. ಮದುವೆ ಪ್ರಯತ್ನಗಳು ಸಮಾಧಾನಕರ. ಉತ್ತಮ ಮನಶ್ಥಿತಿಯಿಂದ ಎಲ್ಲವನ್ನೂ ಧೈರ್ಯವಾಗಿ ಸ್ವೀಕರಿಸುವ ಮನೋಭಾವ. ಗುರು-ಹಿರಿಯರಿಂದ ಸಹಾಯ. ಚಂದ್ರನ ಆರಾಧನೆ ಉತ್ತಮ.
ಸಿಂಹ ರಾಶಿ: ಕೆಲಸ ಕಾರ್ಯಗಳು ಸುಗವಾಗಿ ನಡೆಯುತ್ತವೆ. ಸರ್ಕಾರಿ ಕೆಲಸ ಮತ್ತು ಭೂಮಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ವಿಘ್ನ. ಮಾನಸಿಕ ಕಿರಿಕಿರಿ ಆದರೂ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ. ಶನಿ ಮತ್ತು ಗುರು ಆರಾಧನೆಯಿಂದ ಉತ್ತಮವಾಗುತ್ತದೆ.
ತುಲಾ ರಾಶಿ: ಉದ್ಯೋಗ, ವ್ಯಾಪಾರ, ಭೂಮಿಯ ವ್ಯವಹಾರ, ವಿದ್ಯಾಭ್ಯಾಸದಲ್ಲಿ ಅಡೆತಡೆಗಳು, ತಾಯಿಗೆ ಸಮಸ್ಯೆ, ಮಕ್ಕಳಿಗೆ ಸಂಬಂಧಿಸಿದ ಚಿಂತೆ, ಹಣಕಾಸಿನ ಅಡೆತಡೆ. ಬಂದ ಹಣವೆಲ್ಲಾ ಖರ್ಚು. ಈ ವಾರ ಸಾಧಾರಣವಾದ ಫಲ. ಸೂರ್ಯ ಮತ್ತು ಮಂಗಳ ಆರಾಧನೆಯಿಂದ ಉತ್ತಮ ದೊರೆಯುತ್ತದೆ.
ವೃಶ್ಚಿಕ ರಾಶಿ: ಮಾಡುವ ಕೆಲಸಗಳಲ್ಲಿ ಸಮಾಧಾನಕರವಾದ ಬೆಳವಣಿಗೆ ತಾಯಿಗೆ ಅನಾನುಕೂಲ ಅಥವಾ ಚಿಂತೆ. ಗಂಡ-ಹೆಂಡತಿಯ ಮಧ್ಯೆ ಸಣ್ಣಪುಟ್ಟ ಕಲಹಗಳು. ರಾಹು ಮತ್ತು ಕೇತುವಿನ ಆರಾಧನೆಯಿಂದ ಉತ್ತಮ ಫಲ.
ಧನಸ್ಸು ರಾಶಿ: ಮಾಡುವ ಕೆಲಸ ಕಾರ್ಯಗಳಲ್ಲಿ ತೃಪ್ತಿದಾಯಕ, ಮನಸ್ಸಿಗೆ ನೆಮ್ಮದಿ ಸ್ಪಲ್ಪ ಆರೋಗ್ಯದ ಕಡೆ ಗಮನ ಹರಿಸುವ ಸಮಯ. ಹಣಕಾಸಿನ ಅಡಚಣೆ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಶುಕ್ರ ಮತ್ತು ಕೇತು ಆರಾಧನೆ ಮಾಡಿ. ಉತ್ತಮ ಫಲವಿದೆ.
ಮಕರ ರಾಶಿ: ಮಾಡುವ ಕೆಲಸ ಕಾರ್ಯಗಳಲ್ಲಿ ಅಲ್ಪ ಪ್ರಗತಿ, ಅಡಚಣೆ. ಮಕ್ಕಳ ಬಗ್ಗೆ ಚಿಂತೆ. ಮನಸ್ಸಿಗೆ ಕಿರಿಕಿರಿ. ವ್ಯಾಪಾರ, ಸರ್ಕಾರಿ ಕೆಲಸಗಳಲ್ಲಿ ಸಮಾಧಾನಕರ ಪ್ರಗತಿ. ಗುರು ಮತ್ತು ಶನಿ ಆರಾಧನೆ ಮಾಡಿ, ಉತ್ತಮ ಫಲ ದೊರೆಯುತ್ತದೆ.
ಕುಂಭ ರಾಶಿ: ಮನಸ್ಸಿಗೆ ಕಿರಿಕಿರಿ, ಯಾವುದೇ ಕೆಲಸ ಮಾಡಲು ಸಾಧ್ಯವಾಗದ ಮನಃಸ್ಥಿತಿ. ಭಯದ ವಾತಾವರಣ. ತಾಯಿಗೆ ಸಮಸ್ಯೆ. ಸರ್ಕಾರಿ ಕಾರ್ಯ, ವ್ಯಾಪಾರದಲ್ಲಿ ಅಡಚಣೆ. ಎಲ್ಲಾ ಕೆಲಸಗಳೂ ವಿಫಲವಾಗುತ್ತವೆ. ಗುರು ಮತ್ತು ಶನಿ ಆರಾಧನೆ ಉತ್ತಮ.
ಮೀನ ರಾಶಿ: ಮದುವೆ ಕಾರ್ಯಗಳ ಪ್ರಯತ್ನ ಸಮಾಧಾನಕರ. ಹಣಕಾಸಿನ ಸ್ಥಿತಿ ಸುಧಾರಣೆ. ಪ್ರಯತ್ನಿಸಿ ಮಾಡಿಸಿ ಕೆಲಸಗಳಲ್ಲಿ ಶುಭ ಫಲ ಎಲ್ಲವೂ ಸುಗಮವಾಗಿ ನಡೆದರೂ ಮನಸ್ಸಿಗೆ ಅಲ್ಪ ಸಂತೋಷವಿರುತ್ತದೆ. ಚಂದ್ರನ ಆರಾಧನೆ ಮಾಡಿದರೆ ಉತ್ತಮ ಫಲ.

weekly horoscope from 17 october to 23 october zodiac signs jataka phala
ಇದನ್ನೂ ಓದಿ: Opinion: ಜ್ಯೋತಿಷವೆಂದರೆ ಭಯ ಬೇಡ, ಬೆಳಕಿನ ಆಟದ ಮೂಲ ತತ್ವಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ
ಇದನ್ನೂ ಓದಿ: Opinion: ವಯಸ್ಸಾದ ಮಾತ್ರಕ್ಕೆ ಭಾರ ಎನಿಸಬೇಕೆ? ಹಿರಿಯ ನಾಗರಿಕರ ನೆಮ್ಮದಿಗೆ ಕಿರಿಯರು ಏನು ಮಾಡಬಹುದು?
Discussion about this post