ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಅಕ್ಟೋಬರ್ 1ರಿಂದೀಚೆಗೆ ನಾಗರಿಕರ ಮೇಲೆ ದಾಳಿ ಮತ್ತು ಹತ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಶೇಷ ಗುಪ್ತಚರ ಕಾರ್ಯಾಚರಣೆ ತಂಡವನ್ನು ಶ್ರೀನಗರಕ್ಕೆ ಕಳುಹಿಸಿದೆ. ಹೆಚ್ಚುವರಿ ನಿರ್ದೇಶಕರ ನೇತೃತ್ವದ ಈ ತಂಡವು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರ ಜತೆಯಲ್ಲಿ ಕಾರ್ಯನಿರ್ವಹಿಸಲಿದೆ. ನಿತ್ಯದ ಗುಪ್ತಚರ ಮಾಹಿತಿ ಹೆಚ್ಚಳ ಮತ್ತು ರವಾನಿಸುವ ಸಿಗ್ನಲ್ ಶೇ 40ರಷ್ಟು ಅಧಿಕಗೊಳಿಸುವ ಗುರಿಯನ್ನು ವಿಶೇಷ ಗುಪ್ತಚರ ಕಾರ್ಯಾಚರಣೆ ತಂಡಕ್ಕೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಉಗ್ರರ ನಿಗ್ರಹಕ್ಕೆ ಕೇಂದ್ರ ಮತ್ತು ರಾಜ್ಯಗಳ ಬೇರೆ ಬೇರೆ 28 ಸಂಸ್ಥೆಗಳು ಸಹಕರಿಸಿದ್ದು, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ದೆಹಲಿ, ಉತ್ತರ ಪ್ರದೇಶಗಳ ಕಾರ್ಯನಿರ್ವಹಿಸಲಿವೆ.. ಭಯೋತ್ಪಾದಕರು ಮತ್ತು ಅವರಿಗೆ ನೆರವು ನೀಡುವವರ ಮಾಹಿತಿಯನ್ನು ಹಂಚಿಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ. ಕಾಶ್ಮೀರ ಕಣಿವೆಯಲ್ಲಿ ವಲಸಿಗರು ಮತ್ತು ಆಯ್ದ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದಾಳಿ ಅವ್ಯಾಹತವಾಗಿದೆ. ಇದರ ಹಿಂದಿನ ಉದ್ದೇಶವಾದರೂ ಏನು ಎಂಬುದನ್ನು ವಿವರವಾಗಿ ತಿಳಿಯುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ಈ ವಿಶೇಷ ತಂಡವನ್ನು ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಬಿಹಾರದ ಇಬ್ಬರ ಹತ್ಯೆ
ಬೇರೆ ರಾಜ್ಯಗಳ ನಿವಾಸಿಗಳನ್ನು ಗುರಿಯಾಗಿಟ್ಟುಕೊಂಡು ಎರಡು ದಿನಗಳಲ್ಲಿ ಮೂರು ದಾಳಿ ನಡೆದಿದೆ. ಕುಲ್ಗಾಂ ಜಿಲ್ಲೆಯ ವಾನ್ಪೋ ಪ್ರದೇಶದಲ್ಲಿ ಭಾನುವಾರ ಇಬ್ಬರು ವಲಸೆ ಕಾಮಿರ್ಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ವಲಸಿಗರು ಬೀದಿಬಿದಿ ವ್ಯಾಪಾರ ಮಾಡಿಕೊಂಡಿಕೊಂಡು ಜೀವನ ಸಾಗಿಸುವವರಾಗಿದ್ದರು. ಶನಿವಾರ ಜಮ್ಮು ರೈಲ್ವೆ ನಿಲ್ದಾಣದ ಬಳಿ ದಾಳಿ ನಡೆದಿದೆ. ಮೃತರಲ್ಲಿ ಓರ್ವ ಬಿಹಾರದ ಬಂಕಾ ಜಿಲ್ಲೆಯವನಾಗಿದ್ದು, ಗೋಲ್&ಗಪ್ಪ ಮಾರಾಟ ಮಾಡುತ್ತಿದ್ದ, ಇನ್ನೊಬ್ಬ ಉತ್ತರ ಪ್ರದೇಶದ ಸಹರನಪುರದವನಾಗಿದ್ದು ಮರಗೆಲಸ ಮಾಡುತ್ತಿದ್ದ.
ನಾಗರಿಕರ ಹತ್ಯೆ ಹೊಣೆ ಹೊತ್ತ ಯುಎಲ್ಎ
ಜಮ್ಮು ಕಾಶ್ಮೀರದಲ್ಲಿ 11 ನಾಗರಿಕರ ಹತ್ಯೆಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಅಂಗಸಂಸ್ಥೆಯಾದ ಯುನೈಟೆಡ್ ಲಿಬರೇಷನ್ ಫ್ರಂಟ್ (ಯುಎಲ್ಎಫ್) ಹೊತ್ತುಕೊಂಡಿದೆ. ವಲಸೆ ಕಾಮಿರ್ಕರು ಕಾಶ್ಮೀರದಿಂದ ಹೊರಹೋಗಬೇಕು. ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಪ್ರತಿಕಾರವಾಗಿ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಯುಎಲ್ಎಫ್ ಟ್ವಿಟರ್ ಹ್ಯಾಂಡಲರ್ಗಳು ಪೋಸ್ಟ್ ಮಾಡಿದ್ದಾರೆ.
ವಿದ್ಯುದಾಗಾರ, ಏರ್ ಸ್ಟ್ರಿಪ್ಗಳು ಉಗ್ರರ ಗುರಿ
ಜಮ್ಮು-ಕಾಶ್ಮೀರದಲ್ಲಿ ಹರ್ಕತ್ 313 ಎಂಬ ಉಗ್ರರ ಹೊಸ ಗುಂಪು ಗಡಿ ನಿಯಂತ್ರಣ ರೇಖೆ (ಎಲ್ಐಸಿ) ಬಳಿಯ ಉರಿಯಲ್ಲಿರುವ ಎರಡು ಜಲ ವಿದ್ಯುತ್ ಟಕಗಳನ್ನು ಗುರಿಯಾಗಿರಿಸಿಕೊಂಡಿದೆ. ಅನಂತನಾಗ್ನಲ್ಲಿರುವ ತುರ್ತು ಬಳಕೆಯಏರ್ ಸ್ಟ್ರಿಪ್ ಕೂಡ ಭಯೋತ್ಪಾದಕರ ಗುರಿಯಾಗಿದೆ ಎಂದು ಬೇಹುಗಾರಿಕಾ ವರದಿ ಎಚ್ಚರಿಸಿದೆ.
ಜಮ್ಮು-ಕಾಶ್ಮೀರದಲ್ಲಿನ ಧಾಮಿರ್ಕ ಮುಖಂಡರ ಮೇಳೆ ದಾಳಿ ನಡೆಸಲು ಹಿಜ್ಬುಲ್ ಮುಜಾಹಿದ್ದೀನ್ ಸಂಟನೆ ಪಿತೂರಿ ಮಾಡಿದೆ. ಎಲ್ಇಟಿ ಅಂಗವಾದ ದಿ ರೆಸಿಸ್ಟೆನ್ಸಿ ಫ್ರಂಟ್ (ಟಿಆರ್ಎ್) ಗ್ರಾಮ ಪಂಚಾಯಿತಿ ಮುಖ್ಯಸ್ಥರ ಹತ್ಯೆಗೆ ಹೊಂಚು ಹಾಕುತ್ತಿದೆ. ವಲಸಿಗ ಕಾಮಿರ್ಕರ ಮೇಲೆ ಅವ್ಯಾಹತ ದಾಳಿ ನಡೆಯುವ ಸಂಭವ ಇದೆ ಎಂದು ಬೇಹುಗಾರಿಕಾ ಮೂಲಗಳು ಹೇಳಿವೆ.
Special Intelligence Team sent to Jammu Kashmir for investigation of Recent Violence
ಇದನ್ನೂ ಓದಿ: Screening of women: 30 ವರ್ಷಗಳಲ್ಲಿ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಮಹಿಳೆಯರ ತಪಾಸಣೆ
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ
Discussion about this post