ಚೆನ್ನೈ ಸೂಪರ್ ಕಿಂಗ್ಸ್ ತಂಡದೊಡನೆ ನಾಯಕ ಮಹೇಂದ್ರಸಿಂಗ್ ಧೋನಿಯ ಭವಿಷ್ಯದ ಪಾತ್ರದ ಕುರಿತ ಪ್ರಶ್ನೆಗೆ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ನ ಉಪ-ಛೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗೂ ತಂಡದ ಮಾಲಿಕ ಶ್ರೀನಿವಾಸನ್ ಧೋನಿಯಲ್ಲದೇ ಸಿಎಸ್ಕೆ ತಂಡವಿಲ್ಲ ಎಂದರು. ತಮ್ಮ ತಿರುಪತಿ ಭೇಟಿಯ ಸಮಯದಲ್ಲಿ ದೇವರ ದರ್ಶನ ಮಾಡಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸನ್ ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಚೆನ್ನೈ ತಂಡಕ್ಕೆ ಧೋನಿಯೇ ಆಧಾರಸ್ತಂಭವೆನ್ನುವುದನ್ನು ಖಚಿತಪಡಿಸಿದರು.
ಚೆನ್ನೈ ತಂಡ ನಾಲ್ಕು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಇತ್ತೀಚೆಗಿನ ಧೋನಿಯವರ ಕಳಪೆ ಬ್ಯಾಟಿಂಗ್ ಪ್ರದರ್ಶನಗಳಿಂದ ತಂಡದ ಆಡಳಿತ ಮಂಡಲಿ ಅವರನ್ನು ಮುಂದುವರೆಸುವ ವಿಷಯದಲ್ಲಿ ಅನುಮಾನಗಳಿದ್ದವು. ತಮ್ಮ ವೈಯಕ್ತಿಕ ಬ್ಯಾಟಿಂಗ್ ಪ್ರದರ್ಶನದಲ್ಲಿ ವೈಫಲ್ಯ ಕಂಡರೂ ತಂಡವನ್ನು ಚಾಕಚಕ್ಯತೆಯಿಂದ ಮುನ್ನಡೆಸುವ ವಿಚಾರದಲ್ಲಿ ಸ್ವಲ್ಪವೂ ಚ್ಯುತಿ ಬಾರದಂತೆ ನೋಡಿಕೊಂಡ ಧೋನಿ ತಂಡಕ್ಕೆ ನಾಲ್ಕನೇ ಪ್ರಶಸ್ತಿ ಗಳಿಸಿಕೊಟ್ಟು ತಂಡಕ್ಕೆ ತಮ್ಮ ಸೇವೆ ಅದೆಷ್ಟು ಅಮೂಲ್ಯವೆಂದು ತೋರಿಸಿಕೊಟ್ಟಿದ್ದಾರೆ.
ಧೋನಿ ಮತ್ತು ಇತರ ಆಟಗಾರರನ್ನು ಮುಂದಿನ ಹರಾಜು ಸಮಯದಲ್ಲಿ ಉಳಿಸಿಕೊಳ್ಳುವ ಬಗ್ಗೆ ಕೇಳಿದಾಗ “ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಬಗೆಗಿನ ನೀತಿಯನ್ನು ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು” ಎಂದು ಅವರು ತಿಳಿಸಿದರು.
CSK Owner Shrinivasan says CSK is incomplete without Dhoni
ಇದನ್ನೂ ಓದಿ: T20 ವಿಶ್ವಕಪ್: ಆರಂಭಿಕ ಜೋಡಿ ಯಾರೆಂಬ ಕುತೂಹಲಕ್ಕೆ ತೆರೆ ಎಳೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: ಇನ್ನೂ ಎರಡು ಎಸೆತಗಳಿರುವಂತೆಯೇ ಚೆನ್ನೈ ತಂಡವನ್ನು ಫೈನಲ್ಗೇರಿಸಿದ ಧೋನಿ
Discussion about this post