ಲಖನೌ: ಉತ್ತರ ಪ್ರದೇಶದ ಕುಶಿನಗರದಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಬುಧವಾರ ಲೋಕಾರ್ಪಣೆ ಮಾಡಿದರು. ಶ್ರೀಲಂಕಾದ ಕೊಲಂಬೊದಿಂದ ಬಂದ ವಿಮಾನ ಇಲ್ಲಿ ಇಳಿಯುವ ಮೂಲಕ ವಿಮಾನ ನಿಲ್ದಾಣ ಅಧಿಕೃತವಾಗಿ ಚಾಲನೆಗೊಂಡಿತು. ಈ ವಿಮಾನದಲ್ಲಿ ಶ್ರೀಲಂಕಾದ 100ಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳ ನಿಯೋಗ ಆಗಮಿಸಿದೆ.
ವಿಮಾನ ನಿಲ್ದಾಣ ಉದ್ಘಾಟನೆಯ ನಂತರ ಮಾತನಾಡಿದ ಪ್ರಧಾನಿ ಮೋದಿ, ಅನೇಕ ದಶಕಗಳ ಕನಸು ಈಗ ನನಾಸಗಿದೆ.ಇದರಿಂದ ನನ್ನ ಸಂತಸ ಇಮ್ಮಡಿಸಿದೆ. ಇದು ಪೂರ್ವಾಂಚಲದ ಧಾರ್ಮಿಕ ಯಾತ್ರೆಯ ಹೆಬ್ಬಾಲಾಗಲಿದೆ ಎಂದರು. ದೆಹಲಿ ಮತ್ತು ಕುಶಿನಗರದ ಮಧ್ಯೆ ಸ್ಪೇಸ್ಜೆಟ್ ನೇರ ವಿಮಾನ ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಮೋದಿ ಹೇಳಿದರು.
ಶ್ರೀಲಂಕಾದ ಕ್ರೀಡಾ ಸಚಿವ ನಮಾಲ್ ರಾಜಪಕ್ಸ ಮಾತನಾಡಿ, ಇಲ್ಲಿಗೆ ಬಂದ ಮೊದಲ ಅಂತಾರಾಷ್ಟ್ರೀಯ ವಿಮಾನ ಎಂಬ ಹೆಗ್ಗಳಿಕೆಯನ್ನು ಶ್ರೀಲಂಕಾಕ್ಕೆ ನೀಡಿದ ಪ್ರಧಾನಿ ಮೋದಿಯವರ ಔದಾರ್ಯ ಬಹಳ ದೊಡ್ಡದು ಎಂದರು. ಕಾರ್ಯಕ್ರಮದಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇನ್ನಿತರರು ಭಾಗಿಯಾಗಿದ್ದರು.
250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಈ ವಿಮಾನ ನಿಲ್ದಾಣವನ್ನು 260 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೇಂದ್ರ ಸಚಿವ ಸಂಪುಟ 2020ರ ಜೂನ್ನಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು ಇಲ್ಲಿಗೆ ಆಗಮಿಸುವುದರಿಂದ ಕುಶಿನಗರ ಮತ್ತು ಸುತ್ತಮುತ್ತ ಹೂಡಿಕೆ ಹೆಚ್ಚಳವಾಗಿ, ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.
ಬೌದ್ಧ ಯಾತ್ರಾ ಸ್ಥಳದ ಪ್ರವಾಸೋದ್ಯಮಕ್ಕೆ ಉತ್ತೇಜನ
ಕುಶಿನಗರ ವಿಮಾನ ನಿಲ್ದಾಣದ ಚಾಲನೆಯಿಂದ ಉತ್ತರ ಪ್ರದೇಶದ ಪೂರ್ವಭಾಗದಲ್ಲಿರುವ ಬೌದ್ಧ ಯಾತ್ರಾಸ್ಥಳಗಳಿಗೆ ಸಂಪರ್ಕ ಹೆಚ್ಚಲಿದೆ. ಪ್ರವಾಸೋದ್ಯಮ ಬೆಳವಣಿಗೆ ಕಾಣಲಿದೆ. ಗೌತಮ ಬುದ್ಧ ಕುಶಿನಗರದಲ್ಲಿ ಮಹಾಪರಿನಿರ್ವಾಣ ಹೊಂದಿರುವುದಿಂದ ಬೌದ್ಧರಿಗೆ ಇದು ಪವಿತ್ರ ಕ್ಷೇತ್ರವಾಗಿದೆ.
PM Narendra Modi Inaugurates Kushinagar Airport
Kushinagar airport will boost connectivity and tourism. Here is my speech. https://t.co/5pXUE3rQho
— Narendra Modi (@narendramodi) October 20, 2021
ಇದನ್ನೂ ಓದಿ: ಉತ್ತರಾಖಂಡದಲ್ಲಿ ಹೆಚ್ಚಿದ ಮಳೆ, ಭಾರಿ ಪ್ರವಾಹ ಸಿಎಂ ಜತೆ ಪ್ರಧಾನಿ ಮೋದಿ ಚರ್ಚೆ
ಇದನ್ನೂ ಓದಿ: ಉತ್ತರಾಖಂಡದ ಮೇಘಸ್ಫೋಟ, ಸತ್ತವರ ಸಂಖ್ಯೆ 47ಕ್ಕೆ ಏರಿಕೆ
Discussion about this post