ಚಂಡೀಗಡ: ನಾಲ್ಕೈದು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸುವ ಪಂಜಾಬ್ನಲ್ಲಿ ಪಕ್ಷದ ಒಳಜಗಳದ ಕಾರಣ ಈಗಾಗಲೇ ಕಾಂಗ್ರೆಸ್ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಹೀಗಿರುವಾಗ ಪಕ್ಷ ಶಾಸಕರು ಜನರ ಜತೆಗೆ ಉದ್ಧಟತನದಿಂದ ವತರ್ತಿಸಿ ಇನ್ನಷ್ಟು ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಪಂಜಾಬ್ನ ಭೋವಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ ತಮ್ಮ ಕ್ಷೇತದ ಗ್ರಾಮವೊಂದರಲ್ಲಿ ಸಾರ್ವಜನಿಕ ಕಾರ್ಯಕ್ರಮದರಲ್ಲಿ ಭಾಗಿಯಾಗಿದ್ದರು. ಆಗ ಯುವಕ ಹರ್ಷ ಕುಮಾರ್, ಗ್ರಾಮಕ್ಕಾಗಿ ಏನೇನು ಅಭಿವೃದ್ಧಿ ಕಾರ್ಯ ಮಾಡಿದ್ದೀರಿ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ. ಇದರಿಂದ ಸಿಟ್ಟಿಗೆದ್ದ ಶಾಸಕ ಮತ್ತು ಅವರ ಭದ್ರತಾ ಸಿಬ್ಬಂದಿ ಯುವಕನನ್ನು ಥಳಿಸಿ, ನೂಕಾಡಿದರು. ಈ ವಿಡಿಯೋ ಈಗ ವೈರಲ್ ಆಗಿದೆ. ಬಿಜೆಪಿ ಇದನ್ನು ಕಾಂಗ್ರೆಸ್ ವಿರುದ್ಧ ಪ್ರಚಾರಕ್ಕೆ ಬಳಸಿಕೊಂಡಿದ್ದು, “ಕಾಂಗ್ರೆಸ್ನ ಅಸಹಿಷ್ಣು ಮುಖ’ ಈ ರೀತಿ ಅನಾವರಣಗೊಂಡಿದೆ ಎಂದು ಹೀಯಾಳಿಸಿದೆ.
ಸಭೆಯಲ್ಲಿ ಜೋಗಿಂದರ್ ಮಾತನಾಡುತ್ತಿದ್ದಾಗ ಹರ್ಷ ಕುಮಾರ್ ಜೋರು ದನಿ ಮಾಡಿದ. ಆಗ ಶಾಸಕರ ಭದ್ರತಾ ಸಿಬ್ಬಂದಿ ಅವನನ್ನು ದೂರು ಕರೆದೊಯ್ಯಲು ಯತ್ನಿಸಿದರು. ಆದರೆ, ಜೋಗಿಂದರ್, ಯುವಕನಿಗೆ ಮೈಕ್ ನೀಡಿ ಮಾತನಾಡಲು ಹೇಳಿದರು. ಯುವಕ, “ಗ್ರಾಮಕ್ಕಾಗಿ ನೀವು ಮಾಡಿರುವ ಕಾರ್ಯವಾದರೂ ಏನು” ಎಂದು ಗಟ್ಟಿಯಾಗಿ ಪ್ರಶ್ನಿಸಿದ. ಇದರಿಂದ ಕುಪಿತರಾದ ಶಾಸಕ, ಯುವಕನ ಕೆನ್ನೆಗೆ ಪಟಪಟನೆ ಹೊಡೆದರು. ನಂತರ ಶಾಸಕರ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಬೆಂಬಲಿಗರು ಯುವಕನ ಮೇಲೆ ಕೈಮಾಡಿ ಅವನನ್ನು ಕಾರ್ಯಕ್ರಮದಿಂದ ಎಳೆದೊಯ್ಯದರು.
ನಂತರ ಮಾಧ್ಯಮದ ಜತೆ ಮಾತನಾಡಿದ ಹರ್ಷ ಕುಮಾರ್, ‘ನಾನು ಕೇಳಬಾರದನ್ನೇನೂ ಕೇಳಲಿಲ್ಲ. ಜನರಿಗಾಗಿ ಶಾಸಕರು ಏನೇನು ಮಾಡಿದ್ದಾರೆಂದು ಪ್ರಶ್ನಿಸಿದೆ. ಅದಕ್ಕೆ ಈ ನನ್ನ ಮೇಲೆ ದುಂಡಾವರ್ತನೆ ಮಾಡಲಾಗಿದೆ’ ಎಂದಿದ್ದಾನೆ. ‘ಗ್ರಾಮದ ಒಳಿತಿಗಾಗಿ ಪ್ರಶ್ನಿಸಿದ ನನ್ನ ಮಗನ ಮೇಲೆ ಹಲ್ಲೆ ಮಾಡಲಾಗಿದೆ. ಆತನಿಗೆ ನ್ಯಾಯ ಸಿಗಬೇಕು’ ಎಂದು ಯುವಕನ ತಾಯಿ ಹೇಳಿದ್ದಾರೆ. ತಮ್ಮ ಮತ್ತು ಆಪ್ತರ ದುಂಡಾವರ್ತನೆ ಬಗ್ಗೆ ಶಾಸಕ ಜೋಗಿಂದರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Ask a question and this is what you get in return. @INCPunjab MLA Joginder Pal along with the police, thrashed a man who took an account of his non-performance. Get ready to face the consequences, people will resolutely revert to this slap on democracy in 2022. #ShameOnCongress pic.twitter.com/3X1eYhlaNd
— Shiromani Akali Dal (@Akali_Dal_) October 20, 2021
Punjab MLA Thrashes Youth Who Questions About What are Works He done for That Village
ಇದನ್ನೂ ಓದಿ: ಪಂಜಾಬ್ ಹೈ ಅಲರ್ಟ್: ಪಾಕಿಸ್ತಾನ ಹಿನ್ನೇಲೆಯ ಉಗ್ರವಾದಿಗಳನ್ನು ಬಂಧನ ಹಿನ್ನೆಲೆ
ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಗುಪ್ತಚರ ತಂಡ ರವಾನೆ
Discussion about this post