ಲಾತೂರು: ಮಹಾರಾಷ್ಟ್ರದ ಲಾತೂರು ಜಿಲ್ಲೆಯ ಔಸಾ ತಾಲ್ಲೂಕಿನ ಜವಳಗಾ ಗ್ರಾಮದ 29 ವರ್ಷದ ವಿಜಕುಮಾರ್ ಕಾಕಡೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಆದರೆ, ಅವರಿಗೆ ಎರಡೂ ಡೋಸ್ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂಬ ಸಂದೇಶ ಅವರ ಮೊಬೈಲ್ಗೆ ಬಂದಿದೆ. ಇದರ ಲಿಂಕ್ ಒತ್ತಿದಾಗ ಡಿಜಿಟಲ್ ಸರ್ಟಿಫಿಕೇಟ್ ಡೌನ್ ಲೋಡ್ ಆಯಿತು. ಅದರಲ್ಲಿ ನಾಥ್ ಸಭಾಗಡದ ಲಸಿಕಾ ಶಿಬಿರದಲ್ಲಿ ಬುಧವಾರ ಎರಡನೇ ಡೋಸ್ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗಿದೆ ಎಂದು ನಮೂದಿಸಲಾಗಿತ್ತು.
ಇದನ್ನು ನೋಡಿ ಆಶ್ಚರ್ಯ ಚಕಿತರಾದ ವಿಜಯಕುಮಾರ್, ಈ ಬಗ್ಗೆ ವಿಚಾರಿಸಿದಾಗ ನಾಥ್ ಸಭಾಗಡದಲ್ಲಿ ಬುಧವಾರ ಲಸಿಕಾ ಶಿಬಿರ ನಡೆದೇ ಇಲ್ಲ ಎಂಬ ವಿಚಾರ ಗೊತ್ತಾಗಿದೆ. ವ್ಯಾಕ್ಸಿನ್ ಅಪ್ಲಿಕೇಷನ್ಗೆ ಫಲಾನುಭವಿಯ ಮೊಬೈಲ್ ನಂಬರ್ ನಮೂದಿಸುವಾಗ ಆದ ಮಾನವ ದೋಷದಿಂದ ಈ ರೀತಿ ಆಗಿರಬಹುದು ಎಂದು ಔಸಾ ತಾಲ್ಲೂಕಿನ ವೈದ್ಯಕೀ ಅಧೀಕ್ಷಕ ಡಾ. ಅಗಂದ್ ಜಾಧವ್ ಹೇಳಿದ್ದಾರೆ.
ಗುರುವಾರಕ್ಕಿಂತ ಶೇ. 14 ತಗ್ಗಿದ ಹೊಸ ಪ್ರಕರಣ
ಶುಕ್ರವಾರ ಬೆಳಿಗ್ಗೆಗೆ ಕೊನೆಗೊಂಡ 24 ತಾಸಿನಲ್ಲಿ ದೇಶದಲ್ಲಿ 15,786 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಗುರುವಾರಕ್ಕೆ ಹೋಲಿಸಿದರೆ ಶೇ. 14ರಷ್ಟು ತಗ್ಗಿದೆ. 24 ತಾಸಿನ ಅವಧಿಯಲ್ಲಿ 231 ಮಂದಿ ಸಾವನ್ನಪ್ಪಿದ್ದಾರೆ.
ಚೇತರಿಕೆ ಪ್ರಮಾಣ ಶೇ. 98.16ಕ್ಕೆ ಏರಿದೆ. ಕಳೆದ ಮಾಚ್F ನಂತರ ಗುಣಮುಖ ಪ್ರಮಾಣ ಏರಿಕೆ ಕಂಡಿದೆ. ಕಳೆದ 24 ತಾಸಿನಲ್ಲಿ 18,641 ಮಂದಿ ಚೇತರಿಸಿಕೊಂಡಿದ್ದು, ಒಟ್ಟಾರೆ ಗುಣಮುಖರಾದವರ ಸಂಖ್ಯೆ 3,35,14,449ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 0.51ಕ್ಕೆ ಇಳಿದಿದೆ. ಒಟ್ಟಾರೆ ಸಕ್ರಿಯ ಕೇಸ್ಗಳ ಪ್ರಮಾಣ 1.75,745 ಇದ್ದು, 232 ದಿನಗಳ ನಂತರ ಕಡಿಮೆ ಆಗಿದೆ. ವಾರದ ಪಾಸಿಟಿವಿಟಿ ದರ ಶೇ. 1.31ರಷ್ಟಿದ್ದು, ದೈನಿಕದ ಪಾಸಿಟಿವಿಟಿ ಪ್ರಮಾಣ ಶೇ. 1.19 ಇದೆ.
Latur man gets final COVID-19 vaccination certificate without getting second jab
ಇದನ್ನೂ ಓದಿ: ಅ.25ರಿಂದ 1 ರಿಂದ 5ನೇ ತರಗತಿ ಶಾಲೆ ಆರಂಭ
ಇದನ್ನೂ ಓದಿ: ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪ್ರತಿ ತಿಂಗಳು 5 ಸಾವಿರ
Discussion about this post