ಸುಸ್ತು ಹಾಗೂ ಆಲಸ್ಯದ ಸಮಸ್ಯೆ ಸರ್ವೇಸಾಮಾನ್ಯವಾದುದು. ಇದಕ್ಕೆ ಹಲವಾರು ಕಾರಣಗಳಿದ್ದರೂ ಜೀವನಶೈಲಿಯಲ್ಲಿನ ಲೋಪ-ದೋಷಗಳೂ ಕೆಲವೊಮ್ಮೆ ಕಾರಣವಾಗಬಹುದು. ಹೆಚ್ಚಿನ ಕೆಲಸ, ನಿದ್ರಾಹೀನತೆ, ವ್ಯಾಯಾಮದ ಕೊರತೆ, ಕಡಿಮೆ ದೈಹಿಕ ಚಟುವಟಿಕೆಗಳು ಕೂಡ ಇದಕ್ಕೆ ಕಾರಣವಾಗುತ್ತದೆ. ಇದು ಮಾನವನ ಕಾರ್ಯಕ್ಷಮತೆ ಹಾಗೂ ಜೀವನದ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರುವುದರಿಂದ ಇದನ್ನು ನಿವಾರಣೆ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ.
ಕೆಲವೊಮ್ಮೆ ಹೆಚ್ಚು ತಿನ್ನುವುದರಿಂದ ಹಾಗೂ ಹೆಚ್ಚಿನ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಸ್ಥೂಲದೇಹಿಗಳಾಗುವುದು ಕೂಡ ಇದಕ್ಕೆ ಒಂದು ಪ್ರಮುಖ ಕಾರಣ. ಇದರ ಪರಿಹಾರಕ್ಕೆ 5 ಸುಲಭ ಉಪಾಯಗಳನ್ನು ಕೆಳಗೆ ನೀಡಿದ್ದು ಹೆಚ್ಚಿನ ಸಮಸ್ಯೆಯಿದ್ದರೆ ವೈದ್ಯರಿಂದ ಸಲಹೆ ಪಡೆಯುವುದು ಸೂಕ್ತವಾಗಿದೆ.
1. ಒಣಹಣ್ಣುಗಳು ಮತ್ತು ಬೀಜಗಳು: ಬಾದಾಮಿ, ಗೋಡಂಬಿ, ಖರ್ಜೂರ, ಆಖ್ರೋಟ್, ಅಗಸೆ ಬೀಜ, ಸೂರ್ಯಕಾಂತಿ ಬೀಜ, ಮತ್ತು ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಹೆಚ್ಚಿನ ಶಕ್ತಿ ದೊರೆಯುತ್ತದೆ. ದೇಹಕ್ಕೆ ಬೇಕಾದ ಪೌಷ್ಠಕಾಂಶಗಳು ಹಾಗೂ ನಾರಿನ ಅಂಶಗಳು ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಸುಸ್ತು ಮತ್ತು ಆಲಸ್ಯದ ಸಮಸ್ಯೆಗಳಿಂದ ಹೊರಬರಬಹುದು.
2. ಹಸಿರು ಚಹಾ: ಇದರಲ್ಲಿ ಪಾಲಿಫಿನಾಲ್ ಎಂಬ ಆಂಟಿಆಕ್ಸಿಡೆಂಟ್ಗಳು ಇರುವುದರಿಂದ ಒತ್ತಡ ಮತ್ತು ನಿಶ್ಶಕ್ತಿಯನ್ನು ನಿವಾರಿಸಿಕೊಳ್ಳಲು ಉಪಯುಕ್ತ. ಇದರಿಂದ ಒಳ್ಳೆಯ ನಿದ್ದೆಯೂ ಬಂದು ದೇಹಕ್ಕೆ ಬೇಕಾದ ವಿಶ್ರಾಂತಿ ದೊರೆದು ದೇಹಕ್ಕೆ ಹೊಸ ಚೈತನ್ಯ ಸಿಗುವುದು.
3. ಕಪ್ಪು ಚಾಕೊಲೇಟ್: ಇದರಲ್ಲಿ ಸಕ್ಕೆರೆಯ ಪ್ರಮಾಣ ಕಡಿಮೆಯಿರುವುದರಿಂದ ಚುರುಕಾಗಿರಲು ಸಹಾಯ ಮಾಡುತ್ತದೆ.
4. ಕೊಬ್ಬರಿ ಎಣ್ಣೆ: ಆಹಾರ ಪದ್ಧತಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ದೇಹದ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ಹೃದಯಕ್ಕೂ ಬಹಳ ಒಳ್ಳೆಯದಾಗಿದ್ದು ಉತ್ತಮ ರೋಗನಿರೋಧಕ ಶಕ್ತಿಯನ್ನೂ ನೀಡುತ್ತದೆ.
5. ಬಾಳೆಹಣ್ಣು: ಇದೂ ಕೂಡ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತಲ್ಲದೇ ಇದರಲ್ಲಿರುವ ಕಾರ್ಬೋಹೈಡ್ರೇಟ್ಗಳು ಅನೇಕ ಹಾರ್ಮೋನ್ಗಳ ಬಿಡುಗಡೆಗೆ ಸಹಾಯ ಮಾಡುತ್ತವೆ. ಇದನ್ನು ದಿನನಿತ್ಯ ಉಪಯೋಗಿಸುವುದು ಚೈತನ್ಯದಾಯಕ.
ಇವುಗಳನ್ನು ಪ್ರತಿನಿತ್ಯ ಸೇವಿಸುವುದರಂದ ದೇಹಕ್ಕೆ ಉತ್ತಮ ಚೈತನ್ಯ ದೊರೆತು ಯಾವಾಗಲೂ ಚಟುವಟಿಕೆಯಿಂದಿರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
Five simple remedies to get rid of fatigue and lethargy
ಇದನ್ನೂ ಓದಿ: Health: ಪುರುಷರ ಬಕ್ಕತಲೆಗೆ ಮುಖ್ಯ ಕಾರಣಗಳು ಹಾಗೂ ತಡೆಯಲು ಸೂಕ್ತ ಪರಿಹಾರಗಳು
ಇದನ್ನೂ ಓದಿ: Health: ಮಾನಸಿಕ ಆರೋಗ್ಯ ಹಾಗೂ ದೇಹಸೌಂದರ್ಯಗಳ ಮಧ್ಯೆ ನಾನು ಮಾನಸಿಕ ಆರೋಗ್ಯವನ್ನು ಆಯ್ದುಕೊಂಡಿದ್ದೇನೆ: ಹಿನಾ ಖಾನ್
Discussion about this post