ಚಿಕ್ಕಮಗಳೂರು : ಅನ್ಯಕಾರಣವನ್ನು ಉದ್ದೇಶವಾಗಿಟ್ಟುಕೊಂಡು ಸವರ್ಣಿಯ ವರ್ಗದ ಕೆಲವರು ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದು ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವಂತೆ ಕರ್ನಾಟಕ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಒತ್ತಾಯಿಸಿದರು.
ಕೊಪ್ಪ ತಾಲ್ಲೂಕಿನ ಕಲ್ಕೆರೆ ಗ್ರಾಮದಲ್ಲಿ ಸವರ್ಣೀಯ ವರ್ಗದವರು ಬುದ್ದಿಮಾಂದ್ಯ ಬಾಲಕಿ ಹಾಗೂ ಅವರ ತಾಯಿಯ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದು ತಪಿತಸ್ಥರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಸಂತ್ರಸ್ಥ ಕುಟುಂಬ ನ್ಯಾಯ ದೊರಕಿಸಿ ಕೊಡುವಂತೆ ಜಿಲಳಾಡಳಿವನ್ನು ಮನವಿ ಮಾಡಿದರು.
ಪರಿಶಿಷ್ಟ ವರ್ಗದವರಿಗೆ ಭೂಮಿ ಒತ್ತುವರಿ ಮಾಡಿರುವ ಶ್ರೀಮಂತರನ್ನು ತೆರವುಗೊಳಿಸಬೇಕು, ಹಾದಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ನೀಡಬೇಕು, ಹಳ್ಳಿಗಳಿಗೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕ.ದ.ಸಂ.ಸ ಸಹಸಂಚಾಲಕ ಅಶೋಕ್ ರಾಜರತ್ನಂ, ಜಿಲ್ಲಾ ಸಂಚಾಲಕ ಪುಟ್ಟಸ್ವಾಮಿ ಹಾದಿಹಳ್ಳಿ, ದಿವಾಕರ್, ಜಿಲ್ಲಾ ಖಜಾಂಚಿ ನಾಗರಾಜ್ಚೆಡ್ಡಿ ಮತ್ತಿತರರು ಇದ್ದರು.
Discussion about this post