ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಗಾಣಿಸಿ, ಶಾಂತಿ, ಸ್ಥಿರತೆ ನೆಲಸಲು ಇನ್ನು ಯಾವ್ಯಾವ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಪ್ರಶ್ನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ರಾಜಭಾವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಮುಂದಿಟ್ಟರು.
ಫೂಂಛ್ ಜಿಲ್ಲೆಯ ಅರಣ್ಯದಲ್ಲಿ ಭಯೋತ್ಪಾದಕರಗಾಗಿ ನಡೆಯುತ್ತಿರುವ ಶೋಧವು 13ನೇ ದಿನವಾದ ಶನಿವಾರವೂ ಮುಂದುವರಿದಿದೆ. ಸೇನೆಯ ಇಬ್ಬರು ಕಿರಿಯ ಅಧಿಕಾರಿಗಳು ಸೇರಿ, ಒಂಬತ್ತು ಯೋಧರು ಹುತಾತ್ಮರಾಗಿದ್ದಾರೆ. ಕಳೆದ ಎರಡು ವಾರದಲ್ಲಿ 11 ನಾಗರಿಕರು ಕಾಶ್ಮೀರದಲ್ಲಿ ಹತ್ಯೆ ಆಗಿದ್ದಾರೆ. ವಲಸೆ ಕಾಮಿರ್ಕರನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಮೂಲಭೂತವಾದಿಗಳ ಬೆದರಿಗೆ ಹೆಚ್ಚುತ್ತಿದೆ. ಭದ್ರತಾ ಪಡೆಗಳು ಎನ್ಕೌಂಟರ್, ಶೋಧ ಕಾರ್ಯಾರಚಣೆ, ಒಳನುಸುಳುವಿಕೆ ತಡೆಯುತ್ತಿದ್ದರೂ ಜಮ್ಮು- ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗೆ ಹತೋಟಿಗೆ ಬಂದಿಲ್ಲದಿರುವುದಕ್ಕೆ ಕಾರಣ ಏನು ಎಂದು ಅಮಿತ್ ಶಾ ಪ್ರಶ್ನಿಸಿದರು.
ಇದಕ್ಕೆ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸೇರಿ ಇನ್ನಿತರ ಅರಸೇನಾ ಪಡೆಗಳು ಕೇಂದ್ರೀಯ ತನಿಖಾ ಸಂಸ್ಥೆಗಳು, ವಿವಿಧ ಬೇಹುಗಾರಿಕಾ ವಿಭಾಗದ ಮುಖ್ಯಸ್ಥರು, ಜಮ್ಮು-ಕಾಶ್ಮೀರದ ಪೋಲಿಸ್ ನಿರ್ದೇಶಕರು ವಿಶದವಾಗಿ ವಿವರಣೆ ನೀಡಿದರು.
ಸಭೆಯಲ್ಲಿ ವ್ಯಕ್ತವಾದ ಮಾಹಿತಿ
ಈ ವರ್ಷ ಸೆಪ್ಟೆಂಬರ್ವರೆಗೆ ನಡೆದ 63 ಎನ್ಕೌಂಟರ್ಗಲ್ಲಿ 114 ಉಗ್ರರು ಬಲಿಯಾಗಿದ್ದಾರೆ. 97 ಯುವಕರು ಉಗ್ರರ ಗುಂಪು ಸೇರಿದ್ದು, 56 ಮಂದಿಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಕಳೆದ ವರ್ಷ 178 ಮಂದಿ ಉಗ್ರರ ಸಂಟನೆ ಸೇರಿದ್ದರು. ಈ ಪೈಕಿ 121 ಮಂದಿಯನ್ನು ಹೊಡೆದುರುಳಿಸಲಾಗಿತ್ತು ಎಂದು ಅಧಿಕಾರಿಗಳು ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಭಯೋತ್ಪಾದಕರು 28 ಸಾರಿ ವಿಧ್ವಂಸಕ ಕೃತ್ಯ ನಡೆಸಿದ್ದು, 32 ನಾಗರಿಕರು ಸಾವನ್ನಪ್ಪಿದ್ದಾರೆ. ಕಳೆದ ವರ್ಷ 41 ಜನರು ಬಲಿಯಾಗಿದ್ದರು. ಈ ವರ್ಷ 14ಒಳನುಸುಳುವಿಕೆ ಪ್ರಯತ್ನ ಯಶಸ್ವಿಯಾಗಿದೆೆ. ಪಾಕ್ ಜತೆಗೆ ಈ ವರ್ಷ ಕದನವಿರಾಮ ಮರುಊರ್ಜಿತವಾಗಿದ್ದರೂ, ಈವರೆಗೆ 93 ಸಾರಿ ಇದನ್ನು ಉಲ್ಲಂಘಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಈ ವರ್ಷ 80 ಪ್ರತಿಭಟನೆಗಳು ನಡೆದಿದ್ದು, 32 ಬಾರಿ ಕಲ್ಲುತೂರಾಟ ನಡೆಸಲಾಗಿದೆ. 3 ಸಾರಿ ಬಂದ್ ಆಚರಿಸಲಾಗಿದೆ. 2020ರಲ್ಲಿ 166 ಪ್ರತಿಭಟನೆ, 68 ಕಲ್ಲುತೂರಾಟದ ಟನೆ, ಕೇಂದ್ರಾಡಳಿತ ಪ್ರದೇಶದಲ್ಲಿ 2 ಸಾರಿ ಬಂದ್ ನಡೆದಿತ್ತು ಎಂಬ ಅಂಕಿಅಂಶವನ್ನು ಅಧಿಕಾರಿಗಳು ಸಭೆಗಯಲ್ಲಿ ಮಂಡಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ 2019ರ ಆಗಸ್ಟ್ನಲ್ಲಿ ವಿಶೇಷ ಸ್ಥಾನಮಾನ ರದ್ದುಗೊಂಡು ಇದು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿತವಾದ ನಂತರ ಉಗ್ರರ ಕೃತ್ಯ ಮತ್ತು ಒಳನುಸುಳುವಿಕೆ ಗಮನಾರ್ಹವಾಗಿ ಇಳಿಕೆ ಆಗಿದೆ. ಜನರಲ್ಲಿ ಸುರಕ್ಷತಾ ಭಾವನೆ ಮೊಳೆಯುತ್ತಿರುವ ಹೊತ್ತಿನಲ್ಲಿ ಅಲ್ಪಸಂಖ್ಯಾತರು, ವಲಸೆ ಕಾಮಿರ್ಕರನ್ನು ಗುರಿಯಾಗಿರಿಸಿಕೊಂಡ ದಾಳಿಗಳು ನಡೆಯುತ್ತಿವೆ. ಇದು ಆತಂಕಕಾರಿಯಾಗಿದ್ದು, ಇದನ್ನು ತಡೆಯಲು ಕಾರ್ಯತಂತ್ರ ಅಗತ್ಯವೆಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು. ಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಗೃಹ ಸಚಿವಾಲಯದ ಕಾರ್ಯದಶಿರ್ ಭಲ್ಲಾ ಇನ್ನಿತರ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.
ಹತ್ಯೆಯಾದ ಅಧಿಕಾರಿ ಪತ್ನಿಗೆ ಸರ್ಕಾರಿ ನೌಕರಿ
ನೌಗಾಮ್ದಲ್ಲಿ ಕಳೆದ ಜೂನ್ನಲ್ಲಿ ಉಗ್ರರು ಹತ್ಯೆ ಮಾಡಿದ ಪೊಲೀಸ್ ಅಧಿಕಾರಿ ಪರ್ವೈಜ್ ಅಹ್ಮದ್ ಅವರ ಪತ್ನಿ ಫಾತಿಮಾ ಅಖ್ತರ್ಗೆ ಅನುಕಂಪದ ಆಧಾರದಲ್ಲಿ ನೀಡಲಾದ ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶವನ್ನು ಅಮಿತ್ ಷಾ ಹಸ್ತಾಂತರಿಸಿದರು. ಶ್ರೀನಗರದಲ್ಲಿರುವ ಅಹ್ಮದ್ರ ಮನೆಗೆ ಭೇಟಿ ನೀಡಿದ ಷಾ, ಕುಟುಂಬದವರಿಗೆ ಸಂತ್ವಾನ ಹೇಳಿದರು.
Amith Shah in Jammu Kashmri Reviews Security Situation
ಇದನ್ನೂ ಓದಿ: Screening of women: 30 ವರ್ಷಗಳಲ್ಲಿ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಮಹಿಳೆಯರ ತಪಾಸಣೆ
ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಗುಪ್ತಚರ ತಂಡ ರವಾನೆ
Discussion about this post