ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ. ಮಾನವ ಪ್ರಯತ್ನದ ಜೊತೆಗೆ ಗ್ರಹಗತಿಗಳ ಪ್ರಭಾವವೂ ಮನುಷ್ಯರ ಬದುಕಿನ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡರೆ ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ದೋಷಪೂರಿತರಾದ ಗ್ರಹಗಳಿಂದ ತೊಂದರೆ ಎದುರಿಸುತ್ತಿರುವವರು ಶಾಂತಿಗೆ ಸುಲಭ ಪರಿಹಾರ ಕ್ರಮಗಳನ್ನು ಅನುಸರಿಸಬಹುದು ಎನ್ನುತ್ತಾರೆ ಗೌರಿಬಿದನೂರಿನ ಜ್ಯೋತಿಷಿ ಪಂಡಿತ್ ರಾಮಕೃಷ್ಣ ಗುಂಜೂರ್. ಗ್ರಹಗತಿಗಳ ಸಮಸ್ಯೆ ಸುಲಭದ ಪರಿಹಾರ ಜೊತೆಗೆ ವಾರ ಭವಿಷ್ಯದ ವಿವರವೂ ಈ ಬರಹದಲ್ಲಿದೆ.
ಶನಿದೋಷವಿದ್ದಲ್ಲಿ ಶನಿವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ 9 ಕರ್ಪೂರಗಳನ್ನು ದೇವರ ಗರ್ಭಗುಡಿಯ ಮುಂದೆ ಹಚ್ಚಿ, 9 ಪ್ರದಕ್ಷಿಣೆಗಳನ್ನು ಮಾಡಿ, ಆಂಜನೇಯನ ಪ್ರಾರ್ಥನೆ ಮಾಡಿ. ಶನಿಮಹಾತ್ಮನ ದೇವಾಲಯಕ್ಕೆ ಹೋಗಿ 9 ಎಳ್ಳುಬತ್ತಿಗಳನ್ನು ಹಚ್ಚಿ, 9 ಪ್ರದಕ್ಷಿಣೆಗಳನ್ನು ಮಾಡಿ ಪ್ರಾರ್ಥಿಸಿಕೊಳ್ಳಿ. ಗುರುಬಲವಿಲ್ಲದಿದ್ದರೆ ಗೋಪೀಚಂದನ ಅಥವಾ ಶ್ರೀಗಂಧವನ್ನು ಹಣೆಗೆ ಮತ್ತು ಹೊಕ್ಕಳಿಗೆ ಹಚ್ಚಿಕೊಳ್ಳಿ. ಗುರುವಾರದಂದು ರಾಘವೇಂದ್ರ ಸ್ವಾಮಿಗಳ ಮಠದಲ್ಲಾಗಲೀ ಅಥವಾ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಾಗಲೀ ಕಡಲೇಕಾಳಿನಿಂದ ಮಾಡಿದ ಪ್ರಸಾದವನ್ನು ಹಂಚಿ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೂ ಗುರುವಿನ ವಿಶೇಷ ಅನುಗ್ರಹ ಸಿಗುತ್ತದೆ.
ಮಂಗಳಗ್ರಹದ ಸಮಸ್ಯೆಯಿದ್ದಲ್ಲಿ, ದೇವಿಯ ಆರಾಧನೆ ಅಥವಾ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದರಿಂದ ಅನುಕೂಲವಾಗುತ್ತದೆ. ರಾಹುಗ್ರಹದ ಸಮಸ್ಯೆಯಿದ್ದಲ್ಲಿ ರಾಹುವಿಗೇ ವಿಶೇಷ ಪ್ರಾರ್ಥನೆ ಮಾಡಬೇಕು ಅಥವಾ ನಾಗನಿಗೆ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಅಶ್ವತ್ಥಕಟ್ಟೆಗೆ ಪೂಜೆ ಮಾಡುವುದರಿಂದ ರಾಹು-ಕೇತು ಇಬ್ಬರ ಶಾಂತಿಯಾಗುತ್ತದೆ. ಚಂದ್ರ ದೋಷಪೂರಿತನಾಗಿದ್ದರೆ ಶಿವನ ಆರಾಧನೆ ಮಾಡುವುದರಿಂದ ಅನುಕೂಲವಾಗುತ್ತದೆ.
ಈಗ ಪ್ರತಿ ರಾಶಿಯ ವಾರ ಭವಿಷ್ಯವನ್ನು ಪರಿಶೀಲಿಸೋಣ. ವಾರ ಭವಿಷ್ಯ – ಭಾನುವಾರದಿಂದ (24/10/2021) ಶನಿವಾರದವರೆಗೆ (30/10/2021).
ವಾರ ಭವಿಷ್ಯ
ಮೇಷ ರಾಶಿ: ಹಣ, ಆಸ್ತಿ ಬಗ್ಗೆ ಚಿಂತೆ. ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಕಾಣುತ್ತದೆ. ಆರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತದೆ. ವಾರದ ಮಧ್ಯಭಾಗದಿಂದ ಸ್ವಲ್ಪ ಸಮಾಧಾನ ಬರುತ್ತದೆ. ಶುಕ್ರಮ ಜಪ ಮಾಡಿ. ಶುಕ್ರವಾರ ಲಕ್ಷ್ಮೀ ಆರಾಧನೆ ಮಾಡಿ.
ವೃಷಭ ರಾಶಿ: ಮನಸಿಗೆ ಮತ್ತಷ್ಟು ಕಿರಿಕಿರಿ ಸಾಧ್ಯತೆ. ಹಣ ವ್ಯಯ. ಗಂಡ-ಹೆಂಡತಿ ಮಧ್ಯೆ ಸಣ್ಣಪುಟ್ಟ ಕಲಹಗಳು ಈ ವಾರವೂ ಮುಂದುವರೆಯುತ್ತದೆ. ಮಕ್ಕಳ ಬಗ್ಗೆ ಉತ್ತಮ ಫಲ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು. ಖರ್ಚಿಗೆ ಬೇಕಾದ ಹಣ ಬಂದರೂ ಎಲ್ಲವೂ ವ್ಯಯ. ರಾಹು-ಕೇತು ಜಪ ಮಾಡಿ. ಅರಳಿಕಟ್ಟೆ ಪ್ರದಕ್ಷಿಣೆಯಿಂದ ಶುಭಫಲ.
ಮಿಥುನ ರಾಶಿ: ಹಣದ ಅಡಚಣೆಯಿಂದ ಚಿಂತೆ. ತಾಯಿಗೆ ಸಮಸ್ಯೆ. ವಿವಿಧ ಕಾರ್ಯಗಳಿಗೆ ಅಡೆತಡೆ ಇದೆ. ಗುರು ಮತ್ತು ಶನಿ ಜಪದಿಂದ ಪರಿಸ್ಥಿತಿ ತುಸು ಸುಧಾರಿಸಬಹುದು.
ಕಟಕ ರಾಶಿ: ಮಕ್ಕಳು, ತಾಯಿ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಚಿಂತೆ, ಭಯ. ಆಸ್ತಿ ವಿಚಾರದಲ್ಲಿ ಉತ್ತಮ ಸುದ್ದಿ. ಮಾಡುವ ಕಾರ್ಯಗಳಲ್ಲಿ ಜಯ. ಮಂಗಳ, ಕೇತು ಜಪ ಮಾಡಿ.
ಸಿಂಹ ರಾಶಿ: ಕಲಿಕೆಗೆ ನಿರಾಸಕ್ತಿ. ಭೂಮಿ ಮತ್ತು ಸರ್ಕಾರಿ ಕೆಲಸಗಳಲ್ಲಿ ಉತ್ತಮ ಪ್ರಗತಿ. ತಾಯಿಯ ಬಗ್ಗೆ ಚಿಂತೆ. ಶನಿಯಿಂದ ಮನಸ್ಸಿನ ನೆಮ್ಮದಿ ಕೊರತೆ. ಶನಿ ಮತ್ತು ಗುರು ಆರಾಧನೆಯಿಂದ ಉತ್ತಮ ಫಲ.
ಕನ್ಯಾ ರಾಶಿ: ಸರ್ಕಾರಿ ಕೆಲಸ, ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಅಡೆತಡೆ. ಹಣಕಾಸಿನ ಪರಿಸ್ಥಿತಿ ಚೇತರಿಕೆ. ಮಕ್ಕಳ ಕ್ಷೇತ್ರದಲ್ಲಿ ಚಿಂತೆ ಅಥವಾ ಅವರಿಗೆ ತೊಂದರೆ. ಶನಿ ಮತ್ತು ಗುರು ಆರಾಧನೆಯಿಂದ ಉತ್ತಮ ಫಲ.
ತುಲಾ ರಾಶಿ: ಉದ್ಯೋಗದಲ್ಲಿ ಅಡೆತಡೆ, ಸರ್ಕಾರಿ ಕೆಲಸದಲ್ಲಿ ವಿಳಂಬ. ಭೂಮಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಅಡಚಣೆ. ಈ ವಾರ ಹಣ ಬಂದರೂ ಖರ್ಚು ಜಾಸ್ತಿ. ಮನಸ್ಸಿಗೆ ಅಲ್ಪ ಸಂತೋಷ. ಚಂದ್ರ ಮತ್ತು ರಾಹು ಆರಾಧನೆಯಿಂದ ಉತ್ತಮ ಫಲ.
ವೃಶ್ಚಿಕ ರಾಶಿ: ಹಣಕಾಸಿನ ಅಡಚಣೆ, ಮನಸ್ಸಿಗೆ ಕಿರಿಕಿರಿ. ಗಂಡ ಹೆಂಡತಿಯ ಮಧ್ಯೆ ಸಣ್ಣ ವಿಚಾರಗಳಿಗೂ ಮನಸ್ಥಾಪ. ಸರ್ಕಾರಿ ಕೆಲಸ, ಭೂಮಿಗೆ ಸಂಬಂಧಿಸಿದ ಕೆಲ ಕಾರ್ಯಗಳಲ್ಲಿ ವಿಳಂಬ. ವಾರಾಂತ್ಯದಲ್ಲಿ ಸ್ವಲ್ಪ ಸಮಾಧಾನ. ರಾಹು ಮತ್ತು ಕೇತು ಆರಾಧನೆಯಿಂದ ಉತ್ತಮ ಫಲ.
ಧನಸ್ಸು ರಾಶಿ: ಸರ್ಕಾರಿ ಭೂಮಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ತೃಪ್ತಿದಾಯಕ ಬೆಳವಣಿಗೆ. ಹಣಕಾಸಿನ ಸ್ಥಿತಿ ಸುಧಾರಣೆ. ಭವಿಷ್ಯದ ಬಗ್ಗೆ ಚಿಂತೆ. ಮಕ್ಕಳ ಬಗ್ಗೆ ಚಿಂತೆ. ಚಂದ್ರ ಮತ್ತು ರಾಹು ಆರಾಧನೆಯಿಂದ ಉತ್ತಮ ಫಲ.
ಮಕರ ರಾಶಿ: ಎಲ್ಲ ಶುಭ ಕಾರ್ಯಗಳಿಗೂ ಅಡಚಣೆ. ಅಧಿಕ ತಿರುಗಾಟ. ಮಕ್ಕಳ ಕ್ಷೇತ್ರದಲ್ಲಿ ತೊಂದರೆ. ಕಲಿಕೆಯ ವಿಷಯದಲ್ಲಿ ಉತ್ತಮ ಪ್ರಗತಿ. ವಾರದ ಮಧ್ಯದಲ್ಲಿ ಸಮಾಧಾನಕರ ಬೆಳವಣಿಗೆ. ಶನಿ ಮತ್ತು ಗುರು ಆರಾಧನೆಯಿಂದ ಉತ್ತಮ ಫಲ.
ಕುಂಭ ರಾಶಿ: ವಿವಿಧ ಕಾರ್ಯಗಳಿಗೆ ವಿಫ್ನ. ತಾಯಿಗೆ ಸಂಬಂಧಿಸಿದಂತೆ ಚಿಂತೆ ಅಥವಾ ತೊಂದರೆ. ಸರ್ಕಾರಿ ಮತ್ತು ಭೂ ವ್ಯವಹಾರಗಳಲ್ಲಿ ವಾರದ ಮಧ್ಯ ಭಾಗದಿಂದ ಪ್ರಗತಿ. ಹಣಕಾಸಿನ ವಿಚಾರ ಸಮಾಧಾನಕರ. ಶನಿ ಮತ್ತು ಗುರು ಆರಾಧನೆಯಿಂದ ಶುಭಫಲ.
ಮೀನ ರಾಶಿ: ಸರ್ಕಾರಿ ಮತ್ತು ಭೂಮಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಅಡಚಣೆ. ಹಣಕಾಸಿನ ಸ್ಥಿತಿ ತೃಪ್ತಿಕರ. ಮನೆಯಲ್ಲಿ ನೆಮ್ಮದಿಯ ವಾತಾವರಣ. ರವಿ ಮತ್ತು ಮಂಗಳ ಗ್ರಹಗಳ ಆರಾಧನೆಯಿಂದ ಪರಿಸ್ಥಿತಿ ಮತ್ತಷ್ಟು ಸುಧಾರಣೆ.

ಇದನ್ನೂ ಓದಿ: Opinion: ಜ್ಯೋತಿಷ್ಯ ಎಂದರೆ ಬೆಳಕಿನ ಆಟ
ಇದನ್ನೂ ಓದಿ: Opinion: ಜ್ಯೋತಿಷವೆಂದರೆ ಭಯ ಬೇಡ, ಬೆಳಕಿನ ಆಟದ ಮೂಲ ತತ್ವಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ
Discussion about this post