ಶ್ರೀನಗರ: ಜಮ್ಮು-ಕಾಶ್ಮೀರದ ಫೂಂಛ್ ಜಿಲ್ಲೆಯ ಭಾಟ ದುರಿಯನ್ ಅರಣ್ಯದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯು ಭಾನುವಾರ 14ನೇ ದಿನಕ್ಕೆ ಪ್ರವೇಶಿಸಿದೆ. ಎನ್ಕೌಂಟರ್ ವೇಳೆ ಇಬ್ಬರು ಪೊಲೀಸರು ಮತ್ತು ಒಬ್ಬರು ಸೈನಿಕ ಗಾಯಗೊಂಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಜಿಯಾ ಮುಸ್ತಫಾ ಕೂಡ ಗಾಯಗೊಂಡಿದ್ದು, ವಿಪರೀತ ಗುಂಡಿನ ಚಕಮಕಿ ನಡೆಯುತ್ತಿರುವ ಕಾರಣ ಈತನನ್ನು ಆಸ್ಪತ್ರೆಗೆ ದಾಖಲಿಸಲು ಆಗಿಲ್ಲ ಎಂದು ಸೇನೆ ತಿಳಿಸಿದೆ. ಈತನನ್ನು ಮೆಂಧರ್ನಲ್ಲಿ ಪೊಲೀಸರು ಶುಕ್ರವಾರ ವಶಕ್ಕೆ ತೆಗೆದುಕೊಂಡಿದ್ದರು. ಮುಸ್ತಫಾ 15 ವರ್ಷದ ಹಿಂದೆಯೇ ಕಾಶ್ಮೀರಕ್ಕೆ ಒಳನುಸುಳಿ ಬಂದಿದ್ದ. ಕೋಟ್ ಬಲ್ವಾಲ್ ಜೈಲಿನಲ್ಲಿದ್ದ ಈತ, ಅಲ್ಲಿಂದಲೇ ಉಗ್ರರ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ.
10 ಸ್ಥಳೀಯರು ವಶಕ್ಕೆ
ಉಗ್ರರಿಗೆ ಸರಕು ಮತ್ತು ಆಹಾರ ಇನ್ನಿತರ ನೆರವು ಪೂರೈಸುತ್ತಿರುವ ಆಪಾದನೆ ಮೇಲೆ ಇಬ್ಬರು ಮಹಿಳೆಯರೂ ಸೇರಿ 10 ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯಿಂದ 20 ಕಿ.ಮೀ. ದೂರದಲ್ಲಿರುವ ಫೂಂಛ್-ರಾಜೌರಿ ನಡುವೆಯ ದಟ್ಟ ಅರಣ್ಯ ಪ್ರದೇಶದದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸೇನೆಯ ಇಬ್ಬರು ಕಿರಿಯ ಅಧಿಕಾರಿಗಳು ಸೇರಿ ಒಂಭತ್ತು ಮಂದಿ ಸಾವನ್ನಪ್ಪಿದ್ದಾರೆ. ಪಾಕ್ ಸೇನೆಯ ಅಧಿಕಾರಿಯ ಮಾರ್ಗದರ್ಶನದಲ್ಲಿ ಉಗ್ರರು ಈ ಅಡವಿಯಲ್ಲಿ ಅಡಗಿದ್ದಾರೆ ಎನ್ನಲಾಗಿದೆ. ಅಪಾರ ಶಸ್ತ್ರಾಸ್ತ್ರವನ್ನು ಹೊಂದಿರುವ ಕಾರಣ ಭದ್ರತಾಪಡೆಗಳನ್ನು ಎದುರಿಸುತ್ತಿದ್ದಾರೆ. ಉಗ್ರರನ್ನು ಬೇಟೆಯಾಡಲು ಡ್ರೋನ್, ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದೆ. ಅರೆ ಸೇನಾಪಡೆಯ ಕಮಾಂಡ್ ತುಕುಡಿ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.
ಕಳೆದ ಹದಿನೈದು ದಿನದಲ್ಲಿ 11 ನಾಗರಿಕರ ಹತ್ಯೆ ನಂತರ ಉಗ್ರರ ವಿರುದ್ಧ ಫೂಂಚ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಭಾನುವಾರ 14ನೇ ದಿನಕ್ಕೆ ಕಾಲಿಟ್ಟಿದೆ. ಇದು ಜಮ್ಮು-ಕಾಶ್ಮೀರದಲ್ಲಿ ಈ ವರೆಗೂ ನಡೆದ ಸುದೀರ್ಘ ಕಾರ್ಯಾಚರಣೆ ಆಗಿದೆ.
Encounter in Jammu and Kashmir on 14th Day
ಇದನ್ನೂ ಓದಿ: ಕಾಶ್ಮೀರದ ಶೋಪಿಯಾನ್ ನಲ್ಲಿ ಇಬ್ಬರು ಉಗ್ರರು ಬಲಿ
ಇದನ್ನೂ ಓದಿ: Kashmir: ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿ: ಪಾಕಿಸ್ತಾನದ ಐಎಸ್ಐ ಹಸ್ತಕ್ಷೇಪ
Discussion about this post