ಮುಂಬೈ: ಶಾರುಖ್ ಖಾನ್ ಮಗ ಆರ್ಯನ್ ಖಾನ್ ಆರೋಪಿಯಾಗಿರುವ ಮಾದಕವಸ್ತು ಬಳಕೆ ಪ್ರಕರಣವು ಮುಚ್ಚಿಹಾಕಬೇಕು ಎಂದಿದ್ದರು. ಅವರ ತಂದೆ, ಬಾಲಿವುಡ್ ನಟ ಶಾರುಖ್ ಖಾನ್ ಬಿಜೆಪಿ ಸೇರಬೇಕು. ಅವರು ಹೀಗೆ ಮಾಡಿದರೆ ಡ್ರಗ್ಸ್ ಪೌಂಡರ್, ಸಕ್ಕರೆ ಪುಡಿಯಾಗಿ ಬಿಡುತ್ತದೆ ಎಂದು ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಸಚಿವ ಛಗನ್ ಭುಜಬಲ್ ಕೇಂದ್ರ ಸಕರ್ಕಾರವನ್ನು ಲೇವಡಿ ಮಾಡಿದ್ದಾರೆ. ಛಗನ್ ಭುಜಬಲ್ ಹಿಂದೆ ಶಿವಸೇನೆಯಲ್ಲಿದ್ದರು. 1999-2003ರಲ್ಲಿ ಶಿವಸೇನೆ-ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಉಪಮುಖ್ಯಮಂತ್ರಿಯೂ ಆಗಿದ್ದರು.
ಗುಜರಾತ್ನ ಮುಂದ್ರಾ ಬಂದರಿನಲ್ಲಿ ವಶ ಪಡಿಸಿಕೊಂಡ ಅಪಾರ ಪ್ರಮಾಣದ ಮಾದಕವಸ್ತು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವುದನ್ನು ಬಿಟ್ಟು, ಶಾರುಕ್ ಖಾನ್ ಅವರನ್ನು ಬೇಟೆಯಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ತನಿಖೆಯನ್ನು ಟೀಕಿಸುವ ನಾಯಕರ ವಿರುದ್ಧ ಎನ್ಸಿಬಿ ಕ್ರಮ ಜರುಗಿಸಬೇಕು:
ವಿಹಾರ ನೌಕೆಯಲ್ಲಿ ಡ್ರಗ್ಸ್ ಸೇವಿಸಿದ ಪ್ರಕರಣದಲ್ಲಿ ಸೆಲೆಬ್ರಟಿ ಮಕ್ಕಳು ಸಿಲುಕಿರುವುದರಿಂದ ಈ ಬಗ್ಗೆ ಮಾತನಾಡಿ ರಾಜಕೀಯ ಲಾಭ ಪಡೆಯಲು ಅನೇಕ ಮುಖಂಡರು ಯತ್ನಿಸುತ್ತಿದ್ದಾರೆ. ತನಿಖಾ ಸಂಸ್ಥೆ, ತನಿಖಾಧಿಕಾರಿಯ ವಿರುದ್ಧ ಮಾತನಾಡುತ್ತಿರುವ ಎನ್ಸಿಪಿ ಮುಖಂಡ ಮತ್ತು ಮಹಾ ಆಘಡಿ ಸರ್ಕಾರದ ಸಚಿವ ನವಾಬ್ ಮಲಿಕ್ ವಿರುದ್ಧವೂ ಎನ್ಸಿಬಿ ಕ್ರಮ ಜರುಗಿಸಬೇಕು. ಆಗ ಅವರಿಗೆ ಪ್ರಕರಣದ ಗಂಭೀರತೆ ಅರಿವಾಗುತ್ತದೆ ಎಂದು ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಹೇಳಿದ್ದಾರೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ವಲಯದ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಟೀಕೆ ಮಾಡಿದ್ದರು.
Maharashtra Minister NCP Leader Chhagan Bhujbal on Aryan Khan Drugs Case
ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದ ನಂತರ ಪ್ರಥಮ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡ ಶಾರುಖ್
ಇದನ್ನೂ ಓದಿ: ನಟ ಶಾರುಖ್ ಖಾನ್ ಮನೆ ಮೇಲೆ ದಾಳಿ ನಡೆಸಿಲ್ಲವೆಂದ ಎನ್ಸಿಬಿ
Discussion about this post