ಮಥುರಾ: ಇಲ್ಲಿನ ಬಕಲ್ಪುರ ಪ್ರದೇಶದ ಅಮರ್ ಕಾಲೋನಿ ನಿವಾಸಿ ಪ್ರತಾಪ್ ಸಿಂಗ್ ಹೆಸರಿನ ರಿಕ್ಷಾ ಚಾಲಕನಿಗೆ ಆದಾಯ ತೆರಿಗೆ ಇಲಾಖೆಯು 3,47,54,896/= ರೂಪಾಯಿಗಳ ಆದಾಯ ತೆರಿಗೆ ನೋಟೀಸ್ ನೀಡಿರುವ ಆಘಾತಕಾರಿ ವಿಷಯ ವರದಿಯಾಗಿದ್ದು ಗಾಬರಿಗೊಂಡ ರಿಕ್ಷಾ ಚಾಲಕನು ಈ ಸಂಬಂಧ ಹೆದ್ದಾರಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಯಾರದೋ ಅವ್ಯವಹಾರದ ಕಾರಣದಿಂದ ಈ ನೋಟೀಸ್ ಬಂದಿರಬಹುದೆಂದು ಭಾವಿಸಿರುವ ರಿಕ್ಷಾಚಾಲಕನ ದೂರನ್ನು ಠಾಣಾಧಿಕಾರಿ ಅನುಜ್ ಕುಮಾರ್ ಸ್ವೀಕರಿಸಿದ್ದು “ಈ ಸಂಬಂಧ ನಾವು ಇನ್ನೂ ಯಾವ ಪ್ರಕರಣವನ್ನೂ ದಾಖಲಿಸಿಲ್ಲವಾದರೂ ಇದನ್ನು ಕೂಲಂಕುಷವಾಗಿ ಪರಿಶೀಲಸಲಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾವು ಠಾಣೆಯಲ್ಲಿ ಪ್ರಕರಣದ ಬಗ್ಗೆ ನೀಡಿದ ವಿವರಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರತಾಪ್ ಸಿಂಗ್ ಘಟನೆಯ ವಿವರಗಳನ್ನು ನೀಡಿದ್ದಾರೆ.
ಅವರ ಪ್ರಕಾರ, ಕಳೆದ ಮಾರ್ಚ್ 15ರಂದು ತಮ್ಮ ಬ್ಯಾಂಕ್ ವ್ಯವಹಾರಗಳ ಅವಶ್ಯಕತೆಗಾಗಿ ಬಕಲ್ಪುರದ ತೇಜಪ್ರಕಾಶ ಉಪಾಧ್ಯಾಯ ಎನ್ನುವವರು ನಡೆಸುತ್ತಿರುವ ಜನ ಸುವಿಧಾ ಕೇಂದ್ರದಲ್ಲಿ ಪ್ಯಾನ್ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದು ತದನಂತರ ಸಂಜಯ್ಸಿಂಗ್ ಎನ್ನುವವರಿಂದ ಮೊಬೈಲ್ ದೂರವಾಣಿ ಮೂಲಕ ಪ್ಯಾನ್ಕಾರ್ಡ್ನ ಕಲರ್ ಫೋಟೋಪ್ರತಿ ಬಂದಿತೆಂದು ತಿಳಿಸಿದ್ದಾರೆ.
ನಾನು ಅವಿದ್ಯಾವಂತನಾಗಿರುವ ಕಾರಣದಿಂದ ನನಗೆ ಅದು ಮೂಲಪ್ರತಿಯೇ ಅಥವಾ ಫೊಟೋಪ್ರತಿಯೇ ಎನ್ನುವುದು ಗೊತ್ತಾಗಲಿಲ್ಲ ಎಂದಿರುವ ಅವರು ಸತತ ಮೂರು ತಿಂಗಳ ಅಲೆದಾಟದ ನಂತರ ನನಗೆ ಪ್ಯಾನ್ಕಾರ್ಡ್ ಸಿಕ್ಕಿತೆಂದು ಹೇಳಿದ್ದಾರೆ.
ಇದಾದ ಕೆಲ ಸಮಯದ ನಂತರ ಆದಾಯ ತೆರಿಗೆ ಇಲಾಖೆಯಿಂದ ಅಕ್ಟೋಬರ್ 19ರಂದು ದೂರವಾಣಿ ಕರೆಯೊಂದು ಬಂದಿತಲ್ಲದೇ ನನಗೆ 3,47,54,896/= ರೂಪಾಯಿಗಳ ಆದಾಯ ತೆರಿಗೆ ನೀಡಬೇಕೆನ್ನುವ ನೋಟೀಸನ್ನು ನೀಡಲಾಯಿತೆಂದರು.
ನಿಮ್ಮ ಹೆಸರಿನಲ್ಲಿ ಬೇರೆ ಯಾರೋ ಜಿಎಸ್ಟಿ ಸಂಖ್ಯೆಯನ್ನು ಪಡೆದಿರುವ ಸಾಧ್ಯತೆಯಿದ್ದು 2018-19ರ ಸಾಲಿನಲ್ಲಿ 43,44,36,201/= ರೂಪಾಯಿಗಳ ವ್ಯವಹಾರ ನಡೆಸಿದ್ದು ಅದರ ಆದಾಯ ತೆರಿಗೆ ನೋಟೀಸ್ ನಿಮಗೆ ಬಂದಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆಂದೂ ಅವರು ಹೇಳಿದ್ದಾರೆ.
Rickshaw puller gets income tax notice for more than 3 crores and files a complaint in a nearby police station
ಇದನ್ನೂ ಓದಿ: income for Chamundeshwari: ಚಾಮುಂಡೇಶ್ವರಿಗೆ ಮೂರು ಪಟ್ಟು ಆದಾಯ
ಇದನ್ನೂ ಓದಿ: ರೈತರ ಆದಾಯ ದ್ವಿಗುಣ: ರೈತರ ಸಮಿತಿ ರಚನೆ : ಸಿಎಂ
Discussion about this post