ಗುವಾಹಟಿ: ಮುಂಬರುವ ದೀಪಾವಳಿ, ಛತ್, ಕ್ರಿಸ್ಮಸ್ ಮತ್ತು ಹೊಸ ವರ್ಷದ ವೇಳೆ ಹಸಿರು ಪಟಾಕಿ ಹೊರತು ಪಡಿಸಿ ಬೇರೆ ರೀತಿಯ ಪಟಾಕಿ ಸಿಡಿಸಲು ಸಂಪೂರ್ಣ ನಿರ್ಬಂಧ ವಿಧಿಸಿ ಅಸ್ಸಾಂನ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ ಆದೇಶ ಹೊರಡಿಸಿದೆ. ಆದರೆ, ಜನರ ಭಾವನೆಗಳನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಬಂಧವನ್ನು ಮರುಪರಿಶೀಲನೆ ಮಾಡಿ ಹೊಸ ಆದೇಶ, ಮಾರ್ಗಸೂಚಿ ಹೊರಡಿಸುವುದಾಗಿ ರಾಜ್ಯ ಬಿಜೆಪಿ ಸರ್ಕಾರ ಹೇಳಿದೆ. ಇದರಿಂದ ಮಂಡಳಿ ಮತ್ತು ಸರ್ಕಾರದ ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದೆ.
ಪರಿಸರ ಮಾಲಿನ್ಯ ಕಾರಣವಾಗುವ ಯಾವುದೇ ರೀತಿಯ ಪಟಾಕಿ ಸಿಡಿಸುವಂತಿಲ್ಲ. ಹಸಿರು ಪಟಾಕಿಯನ್ನು ಸಹ ದೀಪಾವಳಿ ವೇಳೆ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ, ಛತ್ ಸಂದರ್ಭದಲ್ಲಿ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಹಾಗೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ವೇಳೆ ಮಧ್ಯರಾತ್ರಿ 11.55ರಿಂದ 12.30ರವರೆಗೆ ಸಿಡಿಸಬಹುದು ಎಂದು ಮಂಡಳಿಯ ಆದೇಶ ತಿಳಿಸಿದೆ. ಪಟಾಕಿ ಮಾರಾಟಕ್ಕೂ ನಿಯಮಾವಳಿನ್ನು ಸ್ವಯಂಪ್ರೇರಿತವಾಗಿ ನಿಗದಿ ಮಾಡಿದೆ.
ಈ ಆದೇಶ ಹೊರಡಿಸುವುದಕ್ಕೂ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯ ಸರ್ಕಾರವನ್ನು ಸಂಪರ್ಕಿಸಲಿಲ್ಲ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶಮರ್ಮಾ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಂಡಳಿಯ ಆದೇಶವನ್ನು ಮರುಪರಿಶೀಲಿಸಿ, ಜನರ ಭಾವನೆಯನ್ನ ಗಮನದಲ್ಲಿ ಇಟ್ಟುಕೊಂಡು ಇಡೀ ಪ್ರಕರಣವನ್ನು ಸಮಗ್ರವಾಗಿ ವಿವೇಚಿಸಲಾಗುವುದು ಎಂದು ಶಮರ್ಮಾ ಮಂಗಳವಾರ ಬೆಳಗ್ಗೆಯೇ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಪೀಠವು ಪಟಾಕಿ ಮಾರಾಟ ಮತ್ತು ಸಿಡಿಸುವ ಸಂಬಂಧ ರೂಪಿಸಿರುವ ನಿಯಮ ಮತ್ತು ಕೋವಿಡ್ ನಿಯಂತ್ರಣದ ಕ್ರಮದ ಮಾರ್ಗಸೂಚಿ ಅನ್ವಯವೇ ಮಾಲಿನ್ಯ ನಿಯಂತ್ರಣ ಮಂಡಳಿ ಈ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.
Assam Politics on Crackers Himanta Biswa Sarma reacts to Green Board
ಇದನ್ನೂ ಓದಿ: ತಮಿಳುನಾಡು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸದ್ದಿಲ್ಲದೇ ರಾಜಕೀಯಕ್ಕಿಳಿದರೇ ನಟ ವಿಜಯ್?
ಇದನ್ನೂ ಓದಿ: ಭಾರತ ಪ್ರಯಾಣಿಕರ ಮೇಲೆ ಕೋವಿಡ್ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಅಮೆರಿಕ

























Discussion about this post