ಚಿಕ್ಕಮಗಳೂರು: ವಿಶ್ವಪಾರ್ಶ್ವವಾಯು ದಿನಾಚರಣೆಯನ್ನಾಗಿ ಅಕ್ಟೋಬರ್ ೨೯ರಂದು ಪ್ರತಿ ವರ್ಷ ಆಚರಿಸಲಾಗುತ್ತಿದ್ದು ಈ ಮೂಲಕ ಪಾರ್ಶ್ವವಾಯು ಕಾಯಿಲೆಯ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಡಿವೈಎಸ್ಪಿ ಡಿ.ಟಿ.ಪ್ರಭು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಛೇರಿ ಆವರಣದಲ್ಲಿ ವಿಶ್ವಪಾರ್ಶ್ವವಾಯು ದಿನಾಚರಣೆ ಅಂಗವಾಗಿ ಮಂಗಳೂರಿನ ಪಡೀಲ್ನ ಫಸ್ಟ್ ನ್ಯೂರೋ ಆಸ್ಪತ್ರೆ ಸಹಯೋಗದಲ್ಲಿ ಪಾರ್ಶ್ವವಾಯು ಕುರಿತ ಉಚಿತ ಜನಜಾಗೃತಿ ಅಭಿಯಾನದ ವಾಹನಕ್ಕೆ ಅವರು ಚಾಲನೆ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮನುಷ್ಯ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾನೆ, ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ರಾಜ್ಯದ ಖಾಸಗಿ ರಂಗದ ನರಸಂಬಂಧ ಚಿಕಿತ್ಸೆ ನೀಡುವ, ಮೆದುಳು, ಬೆನ್ನು ಮೂಳೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಮಂಗಳೂರಿನ ಪಡೀಲ್ ಬಳಿಯ ಫಸ್ಟ್ ನ್ಯೂರೋ ಆಸ್ಪತ್ರೆ ಸಹಯೋಗದಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ರೋಗಗಳು ಬಾರದಂತೆ ತಡೆಯಲು ಜನತೆ ಅಗತ್ಯ ಸಂದರ್ಭದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಫಸ್ಟ್ ನ್ಯೂರೋ ಆಸ್ಪತ್ರೆಯ ಅಸಿಸ್ಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್ ಸಂಪತ್ಕುಮಾರ್ ಮಾತನಾಡಿ ಮಿದುಳಿನ ಒಂದು ಭಾಗಕ್ಕೆ ರಕ್ತ ಸಂಚಾರ ಸ್ಥಗಿತಗೊಳ್ಳುವುದರಿಂದ ಪಾರ್ಶ್ವವಾಯು ಕಾಯಿಲೆಯು ಉಂಟಾಗುತ್ತದೆ. ರಕ್ತಚಲನೆಯಲ್ಲಿ ವ್ಯತ್ಯಯವಾದಾಗ ಮಿದುಳಿನ ನರಕೋಶಗಳು ನಿಷ್ಕಿçಯಗೊಳ್ಳುತ್ತದೆ. ಅಂಕಿ ಅಂಶಗಳ ಪ್ರಕಾರ ಪಾರ್ಶ್ವವಾಯು ಕಾಯಿಲೆ ಆರಂಭವಾದ ಮೊದಲ ೬ ಗಂಟೆಯವರೆಗೆ ಪ್ರತಿ ನಿಮಿಷಕ್ಕೆ ೧.೯ ಮಿಲಿಯನ್ ನರಕೋಶಗಳು ನಿಷ್ಕಿçಯಗೊಳ್ಳುತ್ತದೆ ಎಂದರು.
ಪಾರ್ಶ್ವವಾಯು ಕಾಯಿಲೆಯ ಲಕ್ಷಣಗಳೆಂದರೆ ಮಾತಿನಲ್ಲಿ ತೊದಲುವುದು, ದೇಹದ ಒಂದು ಭಾಗದ ನಿಯಂತ್ರಣ ಕಳೆದುಕೊಳ್ಳುವುದು, ದೇಹದ ಒಂದು ಭಾಗ ಮರಕಟ್ಟುವುದು, ಏಕಾಏಕಿ ದೃಷ್ಟಿ ದೋಷ ಕಾಣಿಸಿಕೊಳ್ಳುವುದು, ಪ್ರಜ್ಞೆ ಕಳೆದುಹೋಗುವುದು, ಇದಕ್ಕೆ ಪ್ರಮುಖ ಕಾರಣಗಳು. ಅತಿಯಾದ ಧೂಮ, ಮಧ್ಯಪಾನ, ಅನಿಯಂತ್ರಿತ ಸಕ್ಕರೆ ಕಾಯಿಲೆ, ಅತಿಯಾದ ರಕ್ತದೊತ್ತಡ, ರಕ್ತದಲ್ಲಿ ಕೊಬ್ಬು ಶೇಖರಣೆ, ವ್ಯಾಯಾಮವಿಲ್ಲದ ಜೀವನ ಕಾರಣವಾಗಬಹುದು ಎಂದು ತಿಳಿಸಿದರು.
ಕೇರಳದ ಆಯ್ದ ಜಿಲ್ಲೆ ಒಳಗೊಂಡತೆ ರಾಜ್ಯದ ಕಾರವಾರ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ೬ ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನ ಕೈಗೊಂಡಿದ್ದು ಹಾಸನ, ದಕ್ಷಿಣ ಕನ್ನಡದಲ್ಲಿ ಉಚಿತವಾಗಿ ಪಾರ್ಶ್ವವಾಯು ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು ವಿಶೇಷವಾಗಿ ಮೊಬೈಲ್ ವಾಹನದಲ್ಲಿ ಸರ್ಕಾರಿ ನೌಕರರು, ಪೊಲೀಸರು ಮಧುಮೇಹ, ಸಕ್ಕರೆ ಖಾಯಿಲೆ ಲಕ್ಷಣಗಳು ಕಂಡುಬಂದಲ್ಲಿ ಉಚಿತವಾಗಿ ತಪಾಸಣೆ ನಡೆಸಲಾಗುವುದು, ಈಗಾಗಲೇ ಸಾರ್ವಜನಿಕ ಪ್ರದೇಶಗಳು, ಬಸ್ ನಿಲ್ದಾಣಗಳಲ್ಲಿ ಜನಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಪೊಲೀಸ್ ವರಿಷ್ಟಾಧಿಕಾರಿ ಕಛೇರಿಯ ಸಿಬ್ಬಂದಿಗಳಿಗೆ ಬಿಪಿ ಮತ್ತು ಮಧುಮೇಹ ಸಕ್ಕರೆ ಕಾಯಿಲೆ ತಪಾಸಣೆ ನಡೆಸಲಾಯಿತು. ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಗಳಾದ ಜಿಬಿ, ವೇನ್, ಇಲಾಖೆಯ ಸಿಬ್ಬಂದಿಯವರು ಹಾಜರಿದ್ದರು.
ಇದನ್ನೂ ಓದಿ: Puneet passes away: ಪವರ್ ಕಳೆದು ಕೊಂಡ ಕರುನಾಡು: ಪುನೀತ್ ರಾಜ್ಕುಮಾರ್ ನಿಧನ
Discussion about this post