ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ. ಮಾನವ ಪ್ರಯತ್ನದ ಜೊತೆಗೆ ಗ್ರಹಗತಿಗಳ ಪ್ರಭಾವವೂ ಮನುಷ್ಯರ ಬದುಕಿನ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡರೆ ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ದೋಷಪೂರಿತರಾದ ಗ್ರಹಗಳಿಂದ ತೊಂದರೆ ಎದುರಿಸುತ್ತಿರುವವರು ಶಾಂತಿಗೆ ಸುಲಭ ಪರಿಹಾರ ಕ್ರಮಗಳನ್ನು ಅನುಸರಿಸಬಹುದು ಎನ್ನುತ್ತಾರೆ ಗೌರಿಬಿದನೂರಿನ ಜ್ಯೋತಿಷಿ ಪಂಡಿತ್ ರಾಮಕೃಷ್ಣ ಗುಂಜೂರ್. ಗ್ರಹಗತಿಗಳ ಸಮಸ್ಯೆ ಸುಲಭದ ಪರಿಹಾರ ಜೊತೆಗೆ ವಾರ ಭವಿಷ್ಯದ ವಿವರವೂ ಈ ಬರಹದಲ್ಲಿದೆ.
ಶನಿದೋಷವಿದ್ದಲ್ಲಿ ಶನಿವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ 9 ಕರ್ಪೂರಗಳನ್ನು ದೇವರ ಗರ್ಭಗುಡಿಯ ಮುಂದೆ ಹಚ್ಚಿ, 9 ಪ್ರದಕ್ಷಿಣೆಗಳನ್ನು ಮಾಡಿ, ಆಂಜನೇಯನ ಪ್ರಾರ್ಥನೆ ಮಾಡಿ. ಶನಿಮಹಾತ್ಮನ ದೇವಾಲಯಕ್ಕೆ ಹೋಗಿ 9 ಎಳ್ಳುಬತ್ತಿಗಳನ್ನು ಹಚ್ಚಿ, 9 ಪ್ರದಕ್ಷಿಣೆಗಳನ್ನು ಮಾಡಿ ಪ್ರಾರ್ಥಿಸಿಕೊಳ್ಳಿ. ಗುರುಬಲವಿಲ್ಲದಿದ್ದರೆ ಗೋಪೀಚಂದನ ಅಥವಾ ಶ್ರೀಗಂಧವನ್ನು ಹಣೆಗೆ ಮತ್ತು ಹೊಕ್ಕಳಿಗೆ ಹಚ್ಚಿಕೊಳ್ಳಿ. ಗುರುವಾರದಂದು ರಾಘವೇಂದ್ರ ಸ್ವಾಮಿಗಳ ಮಠದಲ್ಲಾಗಲೀ ಅಥವಾ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಾಗಲೀ ಕಡಲೇಕಾಳಿನಿಂದ ಮಾಡಿದ ಪ್ರಸಾದವನ್ನು ಹಂಚಿ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೂ ಗುರುವಿನ ವಿಶೇಷ ಅನುಗ್ರಹ ಸಿಗುತ್ತದೆ.
ಮಂಗಳಗ್ರಹದ ಸಮಸ್ಯೆಯಿದ್ದಲ್ಲಿ, ದೇವಿಯ ಆರಾಧನೆ ಅಥವಾ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದರಿಂದ ಅನುಕೂಲವಾಗುತ್ತದೆ. ರಾಹುಗ್ರಹದ ಸಮಸ್ಯೆಯಿದ್ದಲ್ಲಿ ರಾಹುವಿಗೇ ವಿಶೇಷ ಪ್ರಾರ್ಥನೆ ಮಾಡಬೇಕು ಅಥವಾ ನಾಗನಿಗೆ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಅಶ್ವತ್ಥಕಟ್ಟೆಗೆ ಪೂಜೆ ಮಾಡುವುದರಿಂದ ರಾಹು-ಕೇತು ಇಬ್ಬರ ಶಾಂತಿಯಾಗುತ್ತದೆ. ಚಂದ್ರ ದೋಷಪೂರಿತನಾಗಿದ್ದರೆ ಶಿವನ ಆರಾಧನೆ ಮಾಡುವುದರಿಂದ ಅನುಕೂಲವಾಗುತ್ತದೆ.
ಈಗ ಪ್ರತಿ ರಾಶಿಯ ವಾರ ಭವಿಷ್ಯವನ್ನು ಪರಿಶೀಲಿಸೋಣ. ವಾರ ಭವಿಷ್ಯ – ಭಾನುವಾರದಿಂದ (31/10/2021) ಶನಿವಾರದವರೆಗೆ (06/11/2021).
ವಾರ ಭವಿಷ್ಯ
ಮೇಷ ರಾಶಿ
ತಾಯಿಯ ಕಡೆಯಿಂದ ಪ್ರೀತಿ. ಭೂಮಿಗೆ ಸಂಬಂದಿಸಿದ ಕೆಲಸಗಳು ಉತ್ತಮವಾಗುತ್ತವೆ ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಅಡೆತಡೆ. ಹಣಕಾಸಿನ ಪರಿಸ್ಥಿತಿ ಸ್ವಲ್ಪ ಸುಧಾರಣೆ. ಕಲಿಕೆ ಮತ್ತು ವಿದ್ಯಾಭ್ಯಾಸ ಉತ್ತಮ. ಕೇತು ಮತ್ತು ರವಿ ಜಪದಿಂದ ಇನ್ನೂ ಉತ್ತಮ ಫಲ ಲಭ್ಯ.
ವೃಷಭ ರಾಶಿ
ಮನಸ್ಸಿಗೆ ಸ್ವಲ್ಪ ಸಮಾಧಾನ. ಹೊಸ ವಿಚಾರಗಳ ಕಲಿಕೆಗೆ ಆಸಕ್ತಿ. ಜ್ವರ ಅಥವಾ ಉಷ್ಣಕ್ಕೆ ಸಂಬದಿಸಿದ ಕಾಯಿಲೆ ಬರುವ ಸಂಭವ ಮತ್ತು ರಕ್ತ ಹೊರಬರುವಂತಹ ಗಾಯದ ಸನ್ನಿವೇಶಗಳು ಬರಬಹುದು. ಹಣಕಾಸಿನ ಸ್ಥಿತಿ ಸುಧಾರಿಸಿದರೂ ಖರ್ಚು ಬಹಳ. ರಾಹು ಮತ್ತು ರವಿ ಜಪ ಮಾಡಿ
ಮಿಥುನ ರಾಶಿ
ಮನಸ್ಸಿಗೆ ಸಮಾಧಾನಕರ ಬೆಳವಣಿಗೆ. ಹೊಸ ವಿಚಾರಗಳು ಕಲಿಕೆಗೆ ಅವಕಾಶ. ವಿದ್ಯಾಭ್ಯಾಸ ಉತ್ತಮ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ. ಸ್ವಲ್ಪ ಆರೋಗ್ಯಲ್ಲಿ ವ್ಯತ್ಯಾಸ. ಮಾಡುವ ಶುಭಕಾರ್ಯಗಳಿಗೆ ಅಡ್ಡಿ. ಖರ್ಚು ಹೆಚ್ಚು. ರಾಹು, ಗುರು, ಶನಿ ಜಪ ಮಾಡಿ
ಕಟಕ ರಾಶಿ
ಮನಸ್ಸಿಗೆ ಉಲ್ಲಾಸ. ಹೊಸ ವಿಚಾರಗಳ ಅನ್ವೇಷಣೆ. ತಾಯಿಯ ಮುಂದಿನ ಜೀವನದ ಬಗ್ಗೆ ಚಿಂತೆ. ಮಕ್ಕಳಿಗೆ ಸಂಬಂದಿಸಿದಂತೆ ಚಿಂತೆ ಹಣಕಾಸು ಸ್ಥಿತಿಯಲ್ಲಿ ಸುಧಾರಣೆ. ಆಸ್ತಿ ಬಗ್ಗೆ ವ್ಯವಹಾರಗಳು ಉತ್ತಮ. ಕೇತು ಮತ್ತು ರವಿ ಆರಾಧನೆ ಮಾಡಿ.
ಸಿಂಹ ರಾಶಿ
ಮನಸ್ಸಿಗೆ ಕಿರಿಕಿರಿ. ಭೂಮಿ, ಸರ್ಕಾರಿ ಕೆಲಸಗಳಲ್ಲಿ ಉತ್ತಮ ಫಲ, ತಾಯಿಯ ಬಗ್ಗೆ ಗಮನ ಕೊಡಿ. ಅನಾವಶ್ಯಕ ಚಿಂತೆಯಿಂದ ನಿದ್ರೆ ಹಾನಿ. ಇತರೆ ಎಲ್ಲಾ ಕ್ಷೇತ್ರದಲ್ಲಿ ಸಮಾಧಾನಕರ ಬೆಳವಣಿಗೆ. ಗುರು ಮತ್ತು ಶನಿ ಆರಾಧನೆಯಿಂದ ಉತ್ತಮ ಫಲ.
ಕನ್ಯಾ ರಾಶಿ
ಹೊಸ ಕಲಿಕೆಗೆ ಒಳ್ಳೆಯ ಕಾಲ, ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ. ಹಣಕಾಸಿನ ಸ್ಥಿತಿ ಸುಧಾರಣೆ. ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳಿ. ಉಳಿದ ಕ್ಷೇತ್ರಗಳು ಉತ್ತಮ. ಶನಿ ಜಪ ಮಾಡಿದರೆ ಒಳ್ಳೆಯದಾಗುತ್ತದೆ.
ತುಲಾ ರಾಶಿ
ಸರ್ಕಾರಿ ಮತ್ತು ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಅಡಚಣೆ. ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ತಾಯಿ ಬಗ್ಗೆ ಚಿಂತೆ, ತಾಯಿಯ ನೆನಪುಗಳು. ಗುರು ಹಿರಿಯರ ಬಗ್ಗೆ ಗೌರವ. ಕಲಿಕೆಗೆ ನಿರಾಸಕ್ತಿ. ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆ. ರಾಹು ಮತ್ತು ಬುಧನ ಆರಾಧನೆ ಮಾಡಿ.
ವೃಶ್ಚಿಕ ರಾಶಿ
ಸರ್ಕಾರಿ, ಭೂಮಿಗೆ ಸಂಬಂದಿಸಿದಂತೆ ಕೆಲಸಗಳಲ್ಲಿ ಅಡೆತಡೆ. ಹೊಸ ಹೊಸ ಆಲೋಚನೆಗಳು, ಗಂಡ ಮತ್ತು ಹೆಂಡತಿಯ ಆಲೋಚನೆಯಲ್ಲಿ ಭಿನ್ನಾಭಿಪ್ರಾಯ. ಆದರೂ ಈ ವಾರ ಸಮಾಧಾನಕರವಾಗಿ ಮುಗಿಯುತ್ತದೆ. ರಾಹು ಮತ್ತು ಕೇತು ಆರಾಧನೆ ಮಾಡಿ.
ಧನಸ್ಸು ರಾಶಿ
ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ. ಭವಿಷ್ಯದ ಬಗ್ಗೆ ಚಿಂತೆ. ವಿದ್ಯಾಭ್ಯಾಸ ಹೊಸ ಕಲಿಕೆಗೆ ಅವಕಾಶ ಮಾಡುವ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಉತ್ತಮವಾದ ಬೆಳವಣಿಗೆ. ಚಂದ್ರ ಮತ್ತು ಕೇತು ಜಪ ಮಾಡಿದರೆ ಒಳ್ಳೆಯದು.
ಮಕರ ರಾಶಿ
ಮಾಡುವ ಶುಭ ಕಾರ್ಯಗಳಲ್ಲಿ ಅಡಚಣೆ. ಮಕ್ಕಳ ಮದುವೆ ಭವಿಷ್ಯದ ಬಗ್ಗೆ ಚಿಂತೆ. ಮನಸ್ಸಿಗೆ ಅಸಂತೋಷ. ಸರ್ಕಾರಿ, ಭೂಮಿಗೆ ಸಂಬಂಧಿಸಿದ ಕೆಲಸಗಳು ಉತ್ತಮ. ಗುರುವಿನ ಆರಾಧನೆ ಮಾಡಿದರೆ ಒಳ್ಳೆಯದು.
ಕುಂಭ ರಾಶಿ
ಶುಭಕಾರ್ಯಗಳು ತಡವಾಗುತ್ತವೆ .ಸರ್ಕಾರಿ, ಭೂಮಿ ಕೆಲಸ ಗಳಲ್ಲಿ ಪ್ರಗತಿ .ತಾಯಿಯ ಬಗ್ಗೆ ಅಲೋಚನೆ ಹೊಸವಿಚಾರಗಳು ಕಲಿಕೆಗೆ ನಿರಾಸಕ್ತಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆ ಇತರೆ ಉಳಿದ ಕ್ಷೇತ್ರಗಳಲ್ಲಿ ಉತ್ತಮ ಫಲ . ಗುರು ಮತ್ತು ಶನಿಯ ಆರಾಧನೆ ಮಾಡಿ ಉತ್ತಮ
ಮೀನ ರಾಶಿ
ಮಕ್ಕಳಿಂದ ಸಂತೋಷ. ಸರ್ಕಾರಿ ಉದ್ಯೋಗ ಹಾಗೂ ಭೂಮಿಗೆ ಸಂಬಂದಿಸಿದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು. ಹಣಕಾಸಿನ ಸ್ಥಿತಿ ಉತ್ತಮ. ಮನಸ್ಸಿಗೆ ಸಮಾಧಾನಕರ ಸ್ಥಿತಿ. ಈ ವಾರವಿದೆ. ರವಿ ಮತ್ತು ಮಂಗಳನ ಆರಾಧನೆಯಿಂದ ಉತ್ತಮ ಫಲ.
Weekly Horoscope octiber 31 to November 6

Discussion about this post