ಬೆಂಗಳೂರು: ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ 2021ರ (public Affairs Index – PAI) ವರದಿಯಲ್ಲಿ ಕರ್ನಾಟಕವು ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿ ಇದ್ದದ್ದು, ಈ ಬಾರಿ 7ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯದ ಆಡಳಿತವನ್ನು ಅಭಿವೃದ್ಧಿ, ಸುಸ್ಥಿರತೆಯ ಆಧಾರದ ಮೇಲೆ ವಿಶ್ಲೇಷಣೆ ಮಾಡುವ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ಕರ್ನಾಟಕ ರಾಜ್ಯ ಮೂರು ಸ್ಥಾನ ಕುಸಿದು, ಕೇರಳಕ್ಕಿಂತ ಹಿಂದಿದೆ. ಆನಂತರ, ತಮಿಳುನಾಡು, ತೆಲಂಗಾಣ, ಛತ್ತೀಸಗಡ ರಾಜ್ಯಗಳಿವೆ.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಮಾತ್ರ ಕರ್ನಾಟಕ ಅತ್ಯುತ್ತಮವಾಗಿ ಜಾರಿಮಾಡಿದೆ ಎಂದು ಬೆಂಗಳೂರಿನ ಎನ್ಜಿಒ ಪಬ್ಲಿಕ್ ಅಫೇರ್ ಸೆಂಟರ್ ಹೇಳಿದೆ.
ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಮಾಡುವುದರಲ್ಲಿ 0.327 ಸೂಚ್ಯಂಕ ಪಡೆಯುವ ಮೂಲಕ ಕರ್ನಾಟಕವು ನಾಲ್ಕನೇ ಸ್ಥಾನ ಗಳಿಸಿದೆ. ಮೊದಲ ಸ್ಥಾನದಲ್ಲಿ ಕೇರಳ ರಾಜ್ಯವಿದೆ (0.649), ಬಿಸಿಯೂಟ ವಿತರಣೆ ಮತ್ತು ಸಮಗ್ರ ಶಿಕ್ಷಣ ಯೋಜನೆ ಜಾರಿ ಮಾಡುವಲ್ಲಿ ಕರ್ನಾಟಕ 7 ನೇ ಸ್ಥಾನದಲ್ಲಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್, ಮಕ್ಕಳ ಅಭಿವೃದ್ಧಿ ಸೇವೆಗಳನ್ನು ತಲುಪಿಸುವಲ್ಲಿ ಕರ್ನಾಟಕ ಸರ್ಕಾರ ಹಿಂದುಳಿದಿದೆ.
0.046 ಸೂಚ್ಯಂಕ ಪಡೆಯುವ ಮೂಲಕ 10ನೇ ಸ್ಥಾನಕ್ಕೆ ಇಳಿದಿರುವುದನ್ನು ಪಿಎಸಿ ನಮೂದಿಸಿದೆ. ಕೋವಿಡ್ ಸಂದರ್ಭದಲ್ಲಿ ಆಡಳಿತ ಯಂತ್ರ ಹೇಗೆಲ್ಲಾ ಜನರಿಗೆ ನೆರವಾಗಿದೆ ಎನ್ನುವ ಆಧಾರದ ಮೇಲೆ ಆರೋಗ್ಯ ವಿಭಾಗದಲ್ಲೂ ರಾಂಕಿಂಗ್ ನೀಡಿದೆ. ಪಿಎಸಿಯ ಸಂಶೋಧನಾ ತಂಡದ ಸದಸ್ಯೆ ಸಮೃದ್ಧಿ ಪಾಂಡೆ ಹೇಳುವ ಪ್ರಕಾರ,’ಕರ್ನಾಟಕವು ಕೋವಿಡ್ ನಿಯಂತ್ರಿಸಲು ಬಹಳ ಚೆನ್ನಾಗಿ ಕೆಲಸ ಮಾಡಿದೆ. ಸಂಪನ್ಮೂಲಗಳನ್ನು ಹಂಚವುದಕ್ಕೆ ತನ್ನ ಸಂಪೂರ್ಣ ಗಮನವನ್ನು ಕೇಂದ್ರಿಕರಿಸಿತ್ತು’ ಎಂದು ಹೇಳಿದ್ದಾರೆ.
ಕೋವಿಡ್ ಟಾಪ್ 5 ನಿರ್ವಹಣಾ ರಾಜ್ಯಗಳಲ್ಲಿ ಕರ್ನಾಟಕ 5 ನೇ ಸ್ಥಾನದಲ್ಲಿದೆ. ಮೊದನೆಯದು ಕೇರಳ, ಎರಡನೆಯದು ತಮಿಳುನಾಡು, ಮೂರನೆಯದು ಆಂಧ್ರ.
Public Affairs Index rankings Karnataka drops to seventh place
ಇದನ್ನೂ ಓದಿ: Home Minister’s Medal: ಕರ್ನಾಟಕದ 11 ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ಪದಕ ಘೋಷಣೆ
ಇದನ್ನೂ ಓದಿ: Award: ವಿವಿಧ ವಲಯದ 66 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

























Discussion about this post