ಪಣಜಿ: ಕೊರೊನಾ ಸಾಂಕ್ರಾಮಿಕದ ವೇಳೆ ಥಾಯ್ಲೆಂಡ್ಗೆ ಪ್ರವಾಸಿಗರ ನಿರ್ಬಂಧವಿರುವ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೋವಾಕ್ಕೆ ಬಂದಿದ್ದಾರೆ ಎಂದು ಬಿಜೆಪಿ ನಾಯಕರ ಟೀಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಇದು ಬಿಜೆಪಿ ನಾಯಕರ ಕೊಳಕು ಮನಸ್ಸನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.
ಇನ್ನು ನಾಲ್ಕೈದು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸುವ ಗೋವಾಕ್ಕೆ ರಾಜಕೀಯ ನಾಯಕರ ದಂಡು ಭೇಟಿ ನೀಡಲು ಆರಂಭಿಸಿದೆ. ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಮತ್ತು ವಯನಾಡು ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಕೂಡ ಕಳೆದ ವಾರಾಂತ್ಯದಲ್ಲಿ ಗೋವಾಕ್ಕೆ ಭೇಟಿ ಕೊಟ್ಟಿದ್ದರು. ಬಾಡಿಗೆಗೆ ದೊರೆಯುವ ಬೈಕ್ನಲ್ಲಿ (ಹಿಂಬದಿ ಸವಾರನಾಗಿ) ವಿಹರಿಸಿದ್ದರು.
ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ ಬಿಜೆಪಿಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಮತ್ತು ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ, ಕೋವಿಡ್-19 ಕಾರಣ ಥಾಯ್ಲೆಂಡ್ನಲ್ಲಿ ಪ್ರವಾಸಿಗರ ನಿರ್ಬಂಧ ಇರುವ ಕಾರಣ ಅವರು (ರಾಹುಲ್ ಗಾಂಧಿ) ಗೋವಾಕ್ಕೆ ಬಂದಿದ್ದರು. ಇದೊಂದು ರೀತಿ ರಾಜಕೀಯ ಪ್ರವಾಸೋದ್ಯಮ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದ್ದರು.
ಈ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಗೋವಾ ಕಾಂಗ್ರೆಸ್ನ ಅಧ್ಯಕ್ಷ ಗಿರೀಶ್ ಚೋಡಂಕರ್, ಇಂಥ ಮಾತನ್ನು ಕೊಳಕು ಮನಸ್ಸಿನವರು ಮಾತ್ರ ಮಾಡಲು ಸಾಧ್ಯ. ಇನ್ನೊಬ್ಬರ ಚಾರಿತ್ಯದ ಮೇಲೆ ದಾಳಿ ಮಾಡುವ ಬಿಜೆಪಿಯ ಯುವ ಮುಖಂಡನ ಈ ಹೇಳಿಕೆ ಖಂಡನಾರ್ಹ ಎಂದು ಟ್ವೀಟ್ ಮಾಡಿದ್ದಾರೆ.
Congress Leaders Responds to BJP Allegations
ಇದನ್ನೂ ಓದಿ: Parking fee: ಪಾರ್ಕಿಂಗ್ ಶುಲ್ಕ ವಿರೋಧಿಸಿ ಕಾಂಗ್ರೆಸ್ನ ಕಿಸಾನ್ ಸೆಲ್ ನಗರಸಭೆಗೆ ಮುತ್ತಿಗೆ
Discussion about this post