ಚಂಡೀಗಡ: ಪಂಜಾಬ್ನ ಅಡ್ವೋಕೋಟ್ ಜನರಲ್ ಹುದ್ದೆಗೆ ಇತ್ತೀಚೆಗೆ ನೇಮಕವಾಗಿದ್ದ ಎ.ಪಿ.ಎಸ್. ಡಿಯೋಲ್ ಸೋಮವಾರ ನೀಡಿದ್ದ ರಾಜೀನಾಮೆಯನ್ನು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಮಂಗಳವಾರ ತಿರಸ್ಕರಿಸಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಧು ಬೇಡಿಕೆಗೆ ಒಪ್ಪುವುದಿಲ್ಲ ಎಂಬ ದೃಢ ನಿಲುವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2015ರ ಗೋಲಿಬಾರ್ ಪ್ರಕರಣದಲ್ಲಿ ವಜಾಗೊಂಡಿರುವ ಇಬ್ಬರು ಪೊಲೀಸರ ಪರ ಡಿಯೋಲ್ವಕಾಲತ್ತು ವಹಿಸಿದ್ದ ಕಾರಣ ಅವರನ್ನು ಅಡ್ವೋಕೇಟ್ ಜನರಲ್ ಹುದ್ದೆಗೆ ನೇಮಿಸಿದ್ದಕ್ಕೆ ಸಿಧು ಅಸಮಾಧಾನಗೊಂಡಿದ್ದರು. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲು ಇದು ಕೂಡ ಕಾರಣವಾಗಿತ್ತು.
ಗೃಹಬಳಕೆಯ ಪ್ರತಿ ಯೂನಿಟ್ ಶುಲ್ಕದಲ್ಲಿ 3 ರೂಪಾಯಿ ತಗ್ಗಿಸಿ, ತತಕ್ಷಣದಿಂದಲೇ ಜಾರಿಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಸಿಧು ಟೀಕಿಸಿದ್ದಾರೆ. ರಾಜಕಾರಣಿಗಳು ಜನರಿಗೆ ಲಾಲಿಪಾಪ್ ನೀಡಿ ಇದು ಉಚಿತ, ಅದು ಉಚಿತ ಎಂದು ನೀಡುತ್ತಿದ್ದಾರೆ. ಎರಡು ತಿಂಗಳಿಂದ ಏನು ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದರು.
ಇದು ಸಿಎಂ ಚನ್ನಿ ಕೋಪವನ್ನು ಕೆರಳಿಸಿತ್ತು. ಈ ಮಧ್ಯೆ, ತಮ್ಮ ನೇಮಕಾತಿಯು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಡಿಯೋಲ್ ನೀಡಿದ್ದ ರಾಜೀನಾಮೆಯನ್ನು ತಿರಸ್ಕರಿಸುವ ಮೂಲಕ ಸಿಎಂ ಚನ್ನಿ, ಸಿಧು ಬೇಡಿಕೆಗಳಿಗೆ ಬಗ್ಗುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಸಿಧು ಜತೆಗಿನ ಮುಸುಕಿನ ಗುದ್ದಾಟದ ಕಾರಣ ಕಳೆದ ಸೆಪ್ಟೆಂಬರ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅಡ್ವೋಕೇಟ್ ಜನರಲ್ ಆಗಿದ್ದ ಅತುಲ್ ನಂದಾ ಪದತ್ಯಾಗ ಮಾಡಿದ್ದರು. ಇವರ ಜಾಗಕ್ಕೆ ಹಿರಿಯ ವಕೀಲ ಎ.ಪಿ.ಎಸ್ ಡಿಯೋಲ್ ಅವರನ್ನು ಹೊಸ ಸಿಎಂ ಚನ್ನಿ ನೇಮಿಸಿದ್ದರು.
Punjab CM Rejects Advocate-General Resignation
ಇದನ್ನು ಓದಿ: ಕ್ಯಾಪ್ಟನ್ ಆಶ್ವಾಸನೆ ಹುಸಿ ಎಂದು ಟಾಂಗ್ ನೀಡಿದ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ
ಇದನ್ನು ಓದಿ: ಪಂಜಾಬ್ ಹೈ ಅಲರ್ಟ್: ಪಾಕಿಸ್ತಾನ ಹಿನ್ನೇಲೆಯ ಉಗ್ರವಾದಿಗಳನ್ನು ಬಂಧನ ಹಿನ್ನೇಲೆ
Discussion about this post