ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನ ಈರುಳ್ಳಿ ಬೆಲೆ ಬಹಳ ಕಡಿಮೆಯಾಗಿದೆ. ಇದೆಲ್ಲವೂ ಸರ್ಕಾರ ತೆಗೆದುಕೊಂಡ ಮುಂಜಾಗ್ರತ ಕ್ರಮಗಳ ಪರಿಣಾಮ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಇಂದು ದೇಶದ ಎಲ್ಲ ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿಯ ಬೆಲೆ ಕೆಜಿಗೆ 40.13 ರೂಪಾಯಿ, ಕ್ವಿಂಟಲ್ಗೆ 2,215.92 ರೂಪಾಯಿ ಆಗಿದೆ ಎಂದು ಗ್ರಾಹಕ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗದಂತೆ ಮಾಡಲು ಗ್ರಾಹಕ ಸಚಿವಾಲಯವು ಹೆಚ್ಚುವರಿ ಈರುಳ್ಳಿ ದಾಸ್ತಾನು ಮಾಡಲು, ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವಂತೆ ವಿತರಣೆ ಮಾಡಿದೆ. ಇದರ ಉದ್ದೇಶ ಗ್ರಾಹಕರಿಗೆ ಬೆಲೆ ಹೊರೆ ಆಗದಂತೆ ನೋಡಿಕೊಳ್ಳುವುದು ಹಾಗೂ ಅನಗತ್ಯ ದಾಸ್ತಾನಿನಿಂದ ಈರುಳ್ಳಿ ಹಾಳಾಗುವುದನ್ನು ತಡೆಯುವುದೂ ಆಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.
ನವೆಂಬರ್ 2, 2021ರ ತನಕ 1,11,276.17 ಮೆಟ್ರಿಕ್ ಟನ್ ಈರುಳ್ಳಿಯನ್ನು ದೇಶದ ಪ್ರಮುಖ ನಗರಗಳಾದ ದೆಹಲಿ, ಕೊಲ್ಕತ್ತಾ, ಲಕ್ನೋ, ಪಾಟ್ನಾ, ರಾಂಚಿ, ಬೆಂಗಳೂರು, ಹೈದ್ರಾಬಾದ್, ಮುಂಬಯಿ, ಛತ್ತೀಸಗಡ ಮುಂತಾದ ಪ್ರದೇಶಗಳಿಗೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ಕೊಲ್ಕತ್ತಾದಲ್ಲಿ 1 ಕೆಜಿ ಈರುಳ್ಳಿಯ ಬೆಲೆ 60 ರೂಪಾಯಿ ಆಗಿತ್ತು. ಮಳೆ ಪರಿಣಾಮದಿಂದ ಈ ರೀತಿ ಬೆಲೆ ಏರುತ್ತಿದೆ ಎನ್ನುವುದನ್ನು ಮನಗಂಡ ಸರ್ಕಾರ, ಎಲ್ಲಾ ರಾಜ್ಯಗಳಿಗೂ ಹೆಚ್ಚವರಿ ದಾಸ್ತಾನು ಮಾಡಲು ಬಿಡ್ ಕರೆಯಿತು. ಕೆ.ಜಿಗೆ 21ರೂ ನಂತೆ ಹೆಚ್ಚುವರಿ ದಾಸ್ತಾನು ಬೆಲೆಯಲ್ಲಿ ವಿತರಣೆ ಮಾಡಿತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ದಾಖಲೆಯ 200,000ಟನ್ ನಷ್ಟು ಈರುಳ್ಳಿಯನ್ನು ದಾಸ್ತಾನು ಮಾಡಿದ್ದರಿಂದಲೇ ಇವತ್ತಿನ ಈ ಬೆಲೆ ಇಳಿಕೆಗೆ ಕಾರಣ ಎಂದು ಸರ್ಕಾ ಹೇಳಿಕೊಂಡಿದೆ.
Onion cheaper than last year because of our effort says Govt of India
ಇದನ್ನೂ ಓದಿ: ಬೆಂಬಲ ಬೆಲೆ ಇಲ್ಲ : ಈರುಳ್ಳಿ ಬೆಳೆಯನ್ನು ತಾನೇ ನಾಶ ಮಾಡಿದ ರೈತ

























Discussion about this post