ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ. ಮಾನವ ಪ್ರಯತ್ನದ ಜೊತೆಗೆ ಗ್ರಹಗತಿಗಳ ಪ್ರಭಾವವೂ ಮನುಷ್ಯರ ಬದುಕಿನ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡರೆ ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ದೋಷಪೂರಿತರಾದ ಗ್ರಹಗಳಿಂದ ತೊಂದರೆ ಎದುರಿಸುತ್ತಿರುವವರು ಶಾಂತಿಗೆ ಸುಲಭ ಪರಿಹಾರ ಕ್ರಮಗಳನ್ನು ಅನುಸರಿಸಬಹುದು ಎನ್ನುತ್ತಾರೆ ಗೌರಿಬಿದನೂರಿನ ಜ್ಯೋತಿಷಿ ಪಂಡಿತ್ ರಾಮಕೃಷ್ಣ ಗುಂಜೂರ್. ಗ್ರಹಗತಿಗಳ ಸಮಸ್ಯೆ ಸುಲಭದ ಪರಿಹಾರ ಜೊತೆಗೆ ವಾರ ಭವಿಷ್ಯದ ವಿವರವೂ ಈ ಬರಹದಲ್ಲಿದೆ.
ಶನಿದೋಷವಿದ್ದಲ್ಲಿ ಶನಿವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ 9 ಕರ್ಪೂರಗಳನ್ನು ದೇವರ ಗರ್ಭಗುಡಿಯ ಮುಂದೆ ಹಚ್ಚಿ, 9 ಪ್ರದಕ್ಷಿಣೆಗಳನ್ನು ಮಾಡಿ, ಆಂಜನೇಯನ ಪ್ರಾರ್ಥನೆ ಮಾಡಿ. ಶನಿಮಹಾತ್ಮನ ದೇವಾಲಯಕ್ಕೆ ಹೋಗಿ 9 ಎಳ್ಳುಬತ್ತಿಗಳನ್ನು ಹಚ್ಚಿ, 9 ಪ್ರದಕ್ಷಿಣೆಗಳನ್ನು ಮಾಡಿ ಪ್ರಾರ್ಥಿಸಿಕೊಳ್ಳಿ. ಗುರುಬಲವಿಲ್ಲದಿದ್ದರೆ ಗೋಪೀಚಂದನ ಅಥವಾ ಶ್ರೀಗಂಧವನ್ನು ಹಣೆಗೆ ಮತ್ತು ಹೊಕ್ಕಳಿಗೆ ಹಚ್ಚಿಕೊಳ್ಳಿ. ಗುರುವಾರದಂದು ರಾಘವೇಂದ್ರ ಸ್ವಾಮಿಗಳ ಮಠದಲ್ಲಾಗಲೀ ಅಥವಾ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಾಗಲೀ ಕಡಲೇಕಾಳಿನಿಂದ ಮಾಡಿದ ಪ್ರಸಾದವನ್ನು ಹಂಚಿ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೂ ಗುರುವಿನ ವಿಶೇಷ ಅನುಗ್ರಹ ಸಿಗುತ್ತದೆ.
ಮಂಗಳಗ್ರಹದ ಸಮಸ್ಯೆಯಿದ್ದಲ್ಲಿ, ದೇವಿಯ ಆರಾಧನೆ ಅಥವಾ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದರಿಂದ ಅನುಕೂಲವಾಗುತ್ತದೆ. ರಾಹುಗ್ರಹದ ಸಮಸ್ಯೆಯಿದ್ದಲ್ಲಿ ರಾಹುವಿಗೇ ವಿಶೇಷ ಪ್ರಾರ್ಥನೆ ಮಾಡಬೇಕು ಅಥವಾ ನಾಗನಿಗೆ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಅಶ್ವತ್ಥಕಟ್ಟೆಗೆ ಪೂಜೆ ಮಾಡುವುದರಿಂದ ರಾಹು-ಕೇತು ಇಬ್ಬರ ಶಾಂತಿಯಾಗುತ್ತದೆ. ಚಂದ್ರ ದೋಷಪೂರಿತನಾಗಿದ್ದರೆ ಶಿವನ ಆರಾಧನೆ ಮಾಡುವುದರಿಂದ ಅನುಕೂಲವಾಗುತ್ತದೆ.
ಈಗ ಪ್ರತಿ ರಾಶಿಯ ವಾರ ಭವಿಷ್ಯವನ್ನು ಪರಿಶೀಲಿಸೋಣ. ವಾರ ಭವಿಷ್ಯ – ಭಾನುವಾರದಿಂದ (07/10/2021) ಶನಿವಾರದವರೆಗೆ (13/11/2021).
ಮೇಷ ರಾಶಿ: ಈ ಉತ್ತಮವಾದ ಪರಿಸ್ಥಿತಿ ಕಾಣುತ್ತಿದೆ. ಹಣಕಾಸಿನ ಸ್ಥಿತಿ ಸುಧಾರಣೆ , ವ್ಯಾಪಾರ , ಉದ್ಯೋಗ , ವಿದ್ಯಾಭ್ಯಾಸ, ಭೂಮಿಯಿಂದ ಲಾಭ , ಅಷ್ಟಮ ಚಂದ್ರ ಮತ್ತು ಕೇತುವಿನಿಂದ ಮನಸ್ಸಿಗೆ ಸ್ವಲ್ಪ ಕಿರಿಕಿರಿ ಇದೆ. ಶಿವ ಮತ್ತು ದೇವಿಯ ಆರಾಧನೆಯಿಂದ ಮತ್ತಷ್ಟು ಉತ್ತಮ ಫಲವಿದೆ.
ವೃಷಭ ರಾಶಿ: ಮದುವೆ ಸಂಬಂಧ ಪ್ರಯತ್ನಗಳು ವಿಫಲ. ಗಂಡ ಹೆಂಡತಿಯ ಮದ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಹೊಂದಾಣಿಕೆ. ಕಷ್ಟಪಟ್ಟು ಹಣ ಸಂಪಾದನೆ ಮಾಡಿದರೂ ಬಂದದ್ದು ಎಲ್ಲವೂ ಖರ್ಚಿಗೆ ಮೂಲವಾಗುತ್ತದೆ. ವ್ಯಾಪಾರ, ಉದ್ಯೋಗದಲ್ಲಿ ಸಮಾಧಾನಕರ ಬೆಳವಣಿಗೆ. ಅಶ್ವತ್ಥ ನಾರಾಯಣ ಅಥವಾ ಸುಬ್ರಮಣ್ಯನ ಪೂಜೆಯಿಂದ ಉತ್ತಮ.
ಮಿಥುನ ರಾಶಿ: ಮನಸ್ಸಿಗೆ ಬೇಸರದಿಂದ ಉಂಟಾಗುವ ಆರೋಗ್ಯ ಸಮಸ್ಯೆ ಮಕ್ಕಳ ವಿದ್ಯಾಭ್ಯಾಸ, ಭವಿಷ್ಯದ ಬಗ್ಗೆ ಉತ್ತಮ ಚಿಂತನೆ. ಮಕ್ಕಳಿಗೆ ಆರೋಗ್ಯದ ಭಯ, ಗಾಯವಾಗುವ ಸಾಧ್ಯತೆ, ಮಾಡುವ ಕೆಲಸಗಳ ವೈಫಲ್ಯ. ಗುರು-ಶನಿಯ ಆರಾಧನೆ ಮಾಡಿ . ಹಣೆಗೆ ಶ್ರೀ ಗಂಧವನ್ನು ಧರಿಸಿ. ಇದರಿಂದ ಉತ್ತಮ ಫಲ ಸಿಗುತ್ತದೆ.
ಕಟಕ ರಾಶಿ: ತಾಯಿಯ ಕಡೆಯಿಂದ ಬುದ್ಧಿಮಾತು, ಸಹಾಯ, ಆಶೀರ್ವಾದ , ಪ್ರೀತಿ ದೊರೆಯಲಿದೆ. ಮಕ್ಕಳ ಬಗ್ಗೆ ಮಾಡುವ ಪ್ರಯತ್ನ ವಿಫಲ, ಮಕ್ಕಳ ಬಗ್ಗೆ ಅತಿಯಾದ ಚಿಂತೆ. ಮಾಡುವ ಕೆಲಸಗಳಲ್ಲಿ ಸಮಾಧಾನಕರ ಪ್ರಗತಿ. ಹಣಕಾಸಿನ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆ. ಶಿವನ ಆರಾಧನೆ ಮಾಡಿ.
ಸಿಂಹ ರಾಶಿ: ವಿಶೇಷವಾಗಿ ಭೂಮಿ, ಉದ್ಯೋಗ , ವ್ಯಾಪಾರ ಮತ್ತು ಜ್ಙಾನವನ್ನು ಬಳಸಿ ಮಾಡುವ ಕೆಲಸದಲ್ಲಿ ಲಾಭ , ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ಮಕ್ಕಳಿಂದ ಸುಖ. ಹಣಕಾಸು ಸ್ಥಿತಿ ಸುಧಾರಣೆ ಇದೆ. ಗುರುವಿನ ಆರಾಧನೆ ಮಾಡಿ.
ಕನ್ಯಾ ರಾಶಿ: ಮಾಡುವ ಎಲ್ಲಾ ಕೆಲಸಗಳಲ್ಲಿ ಸಮಾಧಾನಕರ ಪ್ರಗತಿ. ಹಣಕಾಸಿನ ಸ್ಥಿತಿಯೂ ಸುಧಾರಿಸುತ್ತದೆ. ಮಕ್ಕಳಿಂದ ಕಿರಿಕಿರಿ ಅಥವಾ ಅವರ ವಿಚಾರದಲ್ಲಿ ಖರ್ಚು ಬರುತ್ತದೆ. ಆದ್ದರಿಂದ ಗುರು ಮತ್ತು ಶನಿಯ ಆರಾಧನೆ ಮಾಡಿ.
ತುಲಾ ರಾಶಿ: ಭೂಮಿ, ವ್ಯಾಪಾರ, ಉದ್ಯೋಗದಲ್ಲಿ ಅಲ್ಪ ಪ್ರಗತಿ. ಅಡೆತಡೆಗಳು. ಅವಸರದ ನಿರ್ಧಾರದಲ್ಲಿ ಮಾಡಿದ ಕೆಲಸದಲ್ಲಿ ನಷ್ಟ. ತಾಯಿಯ ಬಗ್ಗೆ ಚಿಂತೆ. ಹಣಕಾಸು ತುಂಬಾ ವ್ಯಯವಾಗುತ್ತದೆ. ಲಕ್ಷ್ಮೀ ಮತ್ತು ನಾರಾಯಣ ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ.
ವೃಶ್ಚಿಕ ರಾಶಿ: ಎಲ್ಲರೊಟ್ಟಿಗೆ ಬಹಳ ಸಮಾಧಾನದಿಂದ ವರ್ತಿಸಿ. ಉದ್ಯೋಗ , ವ್ಯಾಪಾರ , ವಿದ್ಯಾಭ್ಯಾಸದಲ್ಲಿ ಅಡಚಣೆ ಇದೆ. ಗಂಡ ಹೆಂಡತಿಯ ಮದ್ಯೆ ವಿರಸ, ಕಲಹ, ವಾದ ವಿವಾದ ಸಾಧ್ಯತೆ. ಆದರೂ ಮಾಡುವ ಕೆಲಸಗಳಲ್ಲಿ ಸಮಾಧಾನಕರ ಪ್ರಗತಿ. ವಿಷ್ಣು ಆರಾಧನೆ ಮಾಡಿ.
ಧನಸ್ಸು ರಾಶಿ: ಮಾಡುವ ಕಾರ್ಯಗಳಲ್ಲಿ ಸ್ವಲ್ಪಮಟ್ಟಿಗೆ ಉತ್ತಮವಾದ ಬೆಳವಣಿಗೆ. ಭವಿಷ್ಯದ ಬಗ್ಗೆ ಚಿಂತೆ. ಭೂಮಿ , ಉದ್ಯೊಗ, ವಿದ್ಯಾಭ್ಯಾಸ, ವ್ಯಾಪಾರದಲ್ಲಿ ಉತ್ತಮ, ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ. ಶಿವ ಮತ್ತು ದೇವಿಯ ಆರಾಧನೆ ಮಾಡಿ ಉತ್ತಮ.
ಮಕರ ರಾಶಿ: ಎಲ್ಲಾ ಸಮಸ್ಯೆಗಳನ್ನು ಗಟ್ಟಿ ಮನಸ್ಸಿನಿಂದ ಸ್ವೀಕರಿಸಿ. ಅವುಗಳನ್ನು ಪರಿಹರಿಸುವ ಯತ್ನ, ಮಾಡುವ ಶುಭ ಕಾರ್ಯಗಳಲ್ಲಿ ಅಡೆತಡೆ. ಮಕ್ಕಳ ಬಗ್ಗೆ ಚಿಂತೆ. ಅವರಿಗಾಗಿ ಕೆಲ ಯೋಜನೆಗಳು ಮಾಡುವ ಕಾರ್ಯ. ಹಣಕಾಸಿನ ಸಮಸ್ಯೆ. ಶನಿ ಮತ್ತು ಗುರು ಆರಾಧನೆ ಮಾಡಿ.
ಕುಂಭ ರಾಶಿ: ಉದ್ಯೋಗ, ವ್ಯಾಪಾರ, ಭೂಮಿ ಕ್ಷೇತ್ರದಲ್ಲಿ ಸಮಾಧಾನಕರ ಬೆಳವಣಿಗೆ. ಹಣಕಾಸಿನ ಪರಿಸ್ಠಿತಿ ಸುಧಾರಣೆ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಮತ್ತು ಅದರ ಬಗ್ಗೆ ಗಮನ . ಶುಭಕಾರ್ಯಗಳಿಗೆ ಅಡ್ಡಿ. ಗುರು ಮತ್ತು ಶನಿಯನ್ನು ಆರಾಧಿಸಿ, ಉತ್ತಮ ಫಲ.
ಮೀನ ರಾಶಿ: ಎಲ್ಲಾ ಸಮಸ್ಯೆಗಳನ್ನು ಬಹಳ ಧೈರ್ಯದಿಂದ ಸ್ವೀಕರಿಸಿ ಸವಾಲಾಗಿ ತೆಗೆದುಕೊಂಡು ಮುಂದೆ ಸಾಗುವ ಕಾಲ . ವ್ಯಾಪಾರ , ಉದ್ಯೋಗ , ಅಲ್ಪ ಪ್ರಗತಿ. ಶುಭ ಕಾರ್ಯಗಳು ಮಾಡುವ ಪ್ರಯತ್ನ ಉತ್ತಮವಾಗಿದೆ. ಹಣಕಾಸಿನ ಸ್ಥಿತಿ ಸಮಾಧಾನಕರ . ಲಕ್ಷ್ಮೀ ಮತ್ತು ವಿಷ್ಣುವಿನ ಆರಾಧನೆ ಮಾಡಿ.
Discussion about this post