ಕನ್ಯಾಕುಮಾರಿ: ದೀಪಾವಳಿಯ ನಿಮಿತ್ತ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಮುಳಗುಮೂಡುವಿನ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ವಾಯನಾಡು ಕ್ಷೇತ್ರದ ಸಂಸದ ರಾಹುಲ್ ಗಾಂಧಿಗೆ “ಪ್ರಧಾನಿಯಾದರೆೆ ಮೊದಲು ಮಾಡುವ ಕೆಲಸ ಏನು?’ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಸವಕಾಶವಾಗಿ ಉತ್ತರಿಸಿದ ಅವರು, “ನಾನು ಪ್ರಧಾನಮಂತ್ರಿಯಾದರೆ ಮೊದಲು ಮಾಡುವ ಕೆಲಸ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಆದೇಶಕ್ಕೆ ಸಹಿ ಮಾಡುವುದು’ ಎಂದರು.
“ಮಕ್ಕಳಿಗೆ ಏನನ್ನು ಕಲಿಸಲು ಇಚ್ಛಿಸುವಿರಿ’ ಎನ್ನುವ ಪ್ರಶ್ನೆಗೆ, “ವಿನಮ್ರತೆಯನ್ನು ಹೇಳಿಕೊಡುವೆ. ಏಕೆಂದರೆ ನಮ್ರತೆ ಇರುವವರಲ್ಲಿ ಅರ್ಥ ಮಾಡಿಕೊಳ್ಳುವ ಶಕ್ತಿ ಹೆಚ್ಚಿರುತ್ತದೆ’ ಎಂದು ಮಕ್ಕಳ ಜತೆಗೆ “ಚೋಲಾ ಭತೂರ’ ಸವಿಯುತ್ತ ರಾಹುಲ್ ಗಾಂಧಿ ಹೇಳಿದರು. ಅವರ ಈ ಒಂದು ನಿಮಿಷದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
” ಮಕ್ಕಳೊಂದಿಗೆ ದೀಪಾವಳಿ ಆಚರಣೆ ಮಾಡಿದ್ದು, ದೇಶದ ಸಾಂಸ್ಕೃತಿಕ ಸಂಗಮದ ಪ್ರತಿಕವಾಗಿತ್ತು. ಭಾರತದ ದೊಡ್ಡ ಶಕ್ತಿಯಾದ ಇಂಥ ಸಂಗತಿಯನ್ನು ಜತನದಿಂದ ಜೋಪಾನ ಮಾಡಬೇಕು’ ಎಂದು ರಾಹುಲ್ ಗಾಂಧಿ ಟ್ವೀಟ್ನಲ್ಲಿ ಬರೆದಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದ ಒಂದು ಸಭೆಯಲ್ಲಿ ಮಾತನಾಡಿದ ರಾಹುಲ್ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರಾಜಕೀಯದಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಬಗ್ಗೆ ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೇ. 40ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡುವುದಾಗಿ ಹೇಳಿದ್ದರು. ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದರು. ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳಿಗೆ ಉಚಿತವಾಗಿ ಸ್ಕೂಟಿ, ಸ್ಮಾರ್ಟ್ ಫೋನ್ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ. ಈಗ ಇದೇ ಮಹಿಳೆಯರ ಮೀಸಲಾತಿ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ.
IF I Become A Prime Minisiter Rahul Gandhi
ಇದನ್ನು ಓದಿ: ಕೊಳಕು ಮನಸ್ಸಿನ ಚಿಂತನೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
ಇದನ್ನು ಓದಿ: Congress Manifesto: ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ನಿಂದ ಭರಪೂರ ಭರವಸೆ
Discussion about this post