ಕೇರಳ: ಕೇರಳ ಪೊಲೀಸ್ನ ಭಯೋತ್ಪಾದನೆ ನಿಗ್ರಹದಳ (ಎಟಿಎಸ್)ವು ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿಯ ಕಾರ್ಯದರ್ಶಿ ಹಿರಿಯ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಹಾಗೂ ಹಾಗೂ ಸಾವಿತ್ರಿಯನ್ನು ಬಂಧಿಸಿದ್ದಾರೆ.
ಕೇರಳ ಪೊಲೀಸರು ಸುಲ್ತಾನಬತ್ತೇರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ನಕ್ಸಲ್ ಹೋರಾಟದ ಮುಂಚೂಣಿಯಲ್ಲಿದ್ದು ೨೦೦೩ ರಿಂದ ಭೂಗತನಾಗಿದ್ದ ಬಿ.ಜಿ. ಕೃಷ್ಣಮೂರ್ತಿ ೨೦೧೮ರಲ್ಲಿ ಅವರ ತಂದೆ ಗೋಪಾಲ ರಾವ್ (೮೧) ನಿಧನರಾದಾಗಲೂ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ.
ಜಿಲ್ಲೆಯ ಮಾವೋವಾದಿ ವಲಯಗಳಲ್ಲಿ ಬಿಜಿಕೆ’ ಎಂದೇ ಪರಿಚಿತರಾಗಿರುವ ಕೃಷ್ಣಮೂರ್ತಿ ವಯನಾಡಿನ ಸುಲ್ತಾನ್ ಬತೇರಿಯಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಪಿಐ(ಮಾವೋವಾದಿ)ನ ಕಬನಿ ದಳಂ ಕಮಾಂಡರ್ ಸಾವಿತ್ರಿ ಅಲಿಯಾಸ್ ರೆಜಿತಾಳನ್ನೂ ಬಿಜಿಕೆ ಜೊತೆ ಬಂಧಿಸಲಾಗಿದೆ.
ಜಿಲ್ಲೆಯ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಮತ್ತೆ ನಕ್ಸಲರು ಸಕ್ರಿಯರಾಗುವ ಮೂಲಕ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ನಿದ್ದೆಗೆಡಿಸಿದ್ದರು. ಇದನ್ನು ಬಹಳಷ್ಟು ಸಮಯದಿಂದ ಪೊಲೀಸರು ಬೆನ್ನಟ್ಟಿದ್ದರು. ಜಿಲ್ಲೆಯಲ್ಲಿ ನಕ್ಸಲ್ ನಾಯಕತ್ವದ ಕೊರತೆ ಇಂದ ಚಟುವಟಿಕೆಯೇ ಇಲ್ಲ ಎಂಬುದು ಈಗ ಇಬ್ಬರ ಬಂಧನದಿಂದ ಹುಸಿಯಾಗಿದೆ
ಇತ್ತೀಚಿಗಷ್ಟೇ ಪಕ್ಷದ ಕೇಂದ್ರ ಸಮಿತಿಗೆ ಪದೋನ್ನತಿಗೊಂಡಿದ್ದ ಕೃಷ್ಣಮೂರ್ತಿಯವರ ಬಂಧನ ಪೊಲೀಸರ ಪಾಲಿಗೆ ದೊಡ್ಡ ಸಾಧನೆಯಾಗಿದೆ. ೨೦೧೬, ನವಂಬರ್ ನಲ್ಲಿ ಮಲಪ್ಪುರಂ ಜಿಲ್ಲೆಯ ನಿಲಂಬೂರಿನಲ್ಲಿ ನಡೆದಿದ್ದ ಎನ್ಸೆಂಟರ್ನಲ್ಲಿ ಕುಪ್ಪು ದೇವರಾಜ ಕೊಲ್ಲಲ್ಪಟ್ಟ ಬಳಿಕ ಬಿಜಿಕೆಯವರನ್ನು ಸಿಪಿಐ (ಮಾವೋವಾದಿ)ನ ಹಂಗಾಮಿ ಕಾರ್ಯದರ್ಶಿಯನ್ನಾಗಿ ಬಡ್ತಿಗೊಳಿಸಲಾಗಿತ್ತು. ೨೦೧೭ರಲ್ಲಿ ನಡೆದಿದ್ದ ವಲಯ ಸಮಿತಿಯ ಸಭೆಯಲ್ಲಿ ಅವರನ್ನು ಹುದ್ದೆಗೆ ಕಾಯಂ ಆಗಿ ನೇಮಕಗೊಳಿಸಲಾಗಿತ್ತು.
ಕರ್ನಾಟಕದ ಶೃಂಗೇರಿ ಮೂಲದ ಬಿಜಿಕೆ ವಿರುದ್ಧ ಅಧಿಕ ಪ್ರಕರಣಗಳಿವೆ. ೨೦೦೫ರಲ್ಲಿ ಸಾಕೇತ್ ರಾಜನ್ ಹತ್ಯೆಯ ಮತ್ತು ೨೦೦೬ರಲ್ಲಿ ನಕ್ಸಲ್ ಆಂದೋಲನದಲ್ಲಿ ವಿಭಜನೆಯ ಬಳಿಕ ಅವರು ಕರ್ನಾಟಕದಲ್ಲಿ ಪಕ್ಷದ ನಾಯಕರಾಗಿದ್ದರು. ಬಿ.ಜಿ.ಕೃಷ್ಣಮೂರ್ತಿ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ ಎಲ್ಎಲ್ಬಿ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೆದಿದ್ದರು.
ವಿದ್ಯಾರ್ಥಿ ಜೀವನದಲ್ಲಿಯೇ ಮಾವೋ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು. ೨೦೦೦ರ ಆಸುಪಾಸಿನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಸಂದರ್ಭ ಚುರುಕುಗೊಂಡ ನಕ್ಸಲ್ ಚಟುವಟಿಕೆಗೆ ಸೇರ್ಪಡೆಗೊಂಡ ಬಿ.ಜಿ.ಕೃಷ್ಣಮೂರ್ತಿ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ಸಾವಿತ್ರಿ ಮಾವೋವಾದಿ ನಾಯಕ ವಿಕ್ರಮ ಗೌಡನ ಪತ್ನಿಯಾಗಿದ್ದಳು. ಈತನೂ ವಯನಾಡ-ಕೋಝಿಕ್ಕೋಡ್ ಪ್ರದೇಶದಲ್ಲಿ ಸಕ್ರಿಯವಾಗಿರುವ ಮಾವೋವಾದಿಗಳ ಕಬನಿ ದಳಂನಲ್ಲಿದ್ದಾನೆ. ಎರಡು ವರ್ಷಗಳ ಹಿಂದೆ ವಿಕ್ರಮ ಗೌಡನಿಂದ ವಿಚ್ಛೇದನ ಪಡೆಯಲು ಪಕ್ಷವು ಆಕೆಗೆ ಅನುಮತಿಯನ್ನು ನೀಡಿತ್ತು.
ಸಧ್ಯ ೪೮ ವರ್ಷದ ಬಿ.ಜಿ ಕೃಷ್ಣಮೂರ್ತಿ ಮೇಲೆ ರಾಜ್ಯದ ವಿವಿಧ ಪೋಲಿಸ್ ಠಾಣೆಯಲ್ಲಿ ಸುಮಾರು ೫೩ ಕೇಸ್ ಗಳಿದ್ದು, ೩೬ ವರ್ಷದ ಸಾವಿತ್ರಿ ಮೇಲೆ ೨೨ ಕೇಸ್ ಗಳಿವೆ.
Naxal leader B G Krishnamurthy- Savitri arrested in Kerala
Discussion about this post