ನವದೆಹಲಿ: ಗುಜರಾತ್ನಲ್ಲಿ 2002ರ ಗೋಧ್ರಾ ನಂತರದ ಗಲಭೆಯ ವೇಳೆ ಅಹಮದಾಬಾದ್ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ದೊಂಬಿಯಲ್ಲಿ ಪತಿ ಎಹ್ಸಾನ್ ಜಾಫ್ರಿಯನ್ನು ಕಳೆದುಕೊಂಡ ಜಾಕಿಯಾ ಜಾಫ್ರಿ (81), ಪ್ರಕರಣವನ್ನು ಪರಿಸಮಾಪ್ತಿಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ವರದಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅಜಿರ್ಯನ್ನು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠ ಬುಧವಾರ ವಿಚಾರಣೆ ನಡೆಸಿದ ವೇಳೆ ಎಸ್ಐಟಿ ಲೋಪವನ್ನು ಜಾಕಿಯಾ ಪಟ್ಟಿ ಮಾಡಿದ್ದಾರೆ. ಪ್ರಕರಣದ ಸಮರ್ಪಕ ತನಿಖೆ ನಡೆಸದೆ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಹಾಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲ ಆರೋಪಿಗಳಿಗೆ ಕ್ಲೀನ್ಚಿಟ್ ನೀಡಲಾಗಿದೆ. ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಲ್ಲ, ಆರೋಪಿತರ ಫೋನ್ ಜಪ್ತಿ ಮಾಡದೆ ತನಿಖೆ ಮುಗಿಸಲಾಗಿದೆ. ಗುಲ್ಬರ್ಗ್ ಸೊಸೈಟಿಯಲ್ಲಿ ಸ್ಫೋಟಗೊಂಡ ಕಚ್ಚಾ ಬಾಂಬ್ಗಳನ್ನು ಎಲ್ಲಿ ತಯಾರಿಸಿದ್ದು ಎಂಬುದರ ಬಗ್ಗೆ ತನಿಖೆ ನಡೆಸಿಲ್ಲ ದೂರಿದ್ದಾರೆ.
ಜಾಕಿಯಾ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲರಾದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಅಜಿರ್ದಾರರು ದಳ್ಳುರಿಗೆ ಎರಡೆರಡು ಬಾರಿ ಸಂತ್ರಸ್ತೆಯಾಗಿದ್ದಾರೆ. 1947ರಲ್ಲಿ ದೇಶ ವಿಭಜನೆ ವೇಳೆ ನಡೆದ ಕೋಮು ಸಂಘರ್ಷದಲ್ಲಿ ತನ್ನ ತವರು ಮನೆಯವರನ್ನು ಕಳೆದುಕೊಂಡ ನತದೃಷ್ಟೆ, 2002ರಲ್ಲಿ ಪತಿಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಹಿಂಸಾಚಾರವನ್ನು ತಡೆಯಬೇಕಿದ್ದ ರಾಜ್ಯ ಸರ್ಕಾರ ತನ್ನ ಕರ್ತವ್ಯದಲ್ಲಿ ವಿಫಲವಾಗಿದ್ದೇ ಗೋಧ್ರಾ ನಂತರದ ಗಲಭೆಗೆ ಪ್ರಮುಖ ಕಾರಣ. ಜನರನ್ನು ಪ್ರಚೋದಿಸಲೆಂದೇ ಉದ್ರೇಕಕಾರಿ ಭಾಷಣಗಳನ್ನು ನಾಯಕರು ಮಾಡಿದರು. ರಾಜ್ಯ ಸರ್ಕಾರ ಪೊಲೀಸರ ಕೈಕಟ್ಟಿಹಾಕಿದ್ದರಿಂದ ನೂರಾರು ಜನರ ಹತ್ಯೆ ನಡೆಯಿತು ಎಂದು ಆರೋಪಿಸಿದರು.
ಪತಿಯ ಹಂತಕರಿಗೆ ಶಿಕ್ಷೆಯಾಗಬೇಕೆಂದು ತಮ್ಮ ಕಕ್ಷಿದಾರರು ಸುಮಾರು ಎರಡು ದಶಕದಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಿಬಲ್ ಮನವಿ ಮಾಡಿದರು.
ಪ್ರಕರಣದ ಹಿನ್ನೆಲೆ:
2002ರ ಫೆಬ್ರವರಿ 27ರಂದು ಅಯೋಧ್ಯೆಯಿಂದ ಬರುತ್ತಿದ್ದ ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಬೋಗಿಗೆ ಗೋಧ್ರಾ ಎಂಬಲ್ಲಿ ಬೆಂಕಿ ಹಚ್ಚಿ 59 ಕರಸೇವಕರನ್ನು ಜೀವಂತ ದಹಿಸಲಾಯಿತು. ಮರುದಿನ ಗುಜರಾತ್ನಲ್ಲಿ ವ್ಯಾಪಕ ಹಿಂಸಾಚಾರ ಶುರುವಾಯಿತು.
ಅಹಮದಾಬಾದ್ನ ಗುಲ್ಬರ್ಗ್ ಸೊಸೈಟಿಗೆ ನುಗ್ಗಿದ ದುಷ್ಕಮಿರ್ಗಳ ಗುಂಪು ಚಾಕು-ಚೂರಿ, ಬಡಿಗೆಗಳನ್ನು ಹಿಡಿದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿತು. ಸೀಮೆಎಣ್ಣೆ ತಯಾರಿಸಿದ ಕೈಬಾಂಬ್, ಗ್ಯಾಸ್ ಸಿಲಿಂಡರ್ಗಳನ್ನು ಸ್ಫೋಟಿಸಿತು. ಇದರಿಂದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿ 68 ಮಂದಿ ಸಾವನ್ನಪ್ಪಿದರು. ಈ ಪ್ರಕರಣದಲ್ಲಿ ಆಗ ಗುಜರಾತ್ ಸಿಎಂ ಆಗಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ತನಿಖೆ ನಡೆಸಿದ ಎಸ್ಐಟಿ, 2012ರಲ್ಲಿ ವಿಚಾರಣೆಗೆ ಅರ್ಹವಾದ ಸಾಾಧಾರಗಳು ಇಲ್ಲವೆಂದು ಪರಿಸಮಾಪ್ತಿ ವರದಿ ಸಲ್ಲಿಸಿ ಮೋದಿಯಾದಿಯಾಗಿ 63 ಆರೋಪಿಗಳಿಗೆ ಕ್ಲೀನ್ಚಿಟ್ ನೀಡಿದೆ.
ಇದನ್ನೂ ಓದಿ: ಮೋದಿ ರೈತ ವಿರೋಧಿ ಪ್ರಧಾನಿ; ಭಾರತೀಯ ಕಿಸಾನ್ ಯೂನಿಯನ್ ಆರೋಪ
Discussion about this post