ನವದೆಹಲಿ: ಭಾರತ ಸರಕಾರವು 2008ರಿಂದ ಪ್ರತಿವರ್ಷ ನವೆಂಬರ್ 11 ರಂದು ರಾಷ್ಟ್ರೀಯ ವಿದ್ಯಾದಿನವನ್ನಾಗಿ ಆಚರಿಸುತ್ತಿದೆ. ಭಾರತದ ಪ್ರಪ್ರಥಮ ವಿದ್ಯಾಸಚಿವ ಅಬುಲ್ ಕಲಾಮ್ ಆಝಾದ್ ದೇಶದ ಶಿಕ್ಷಣ ವ್ಯವಸ್ಥೆಯ ಆಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಅವರ ಈ ಕೊಡುಗೆಯನ್ನು ಸ್ಮರಿಸಲೆಂದೇ ಅವರ ಜನ್ಮ ವಾರ್ಷಿಕೋತ್ಸವವಾದ ನವೆಂಬರ್ 11ರಂದು ರಾಷ್ಟ್ರೀಯ ವಿದ್ಯಾದಿನವನ್ನಾಗಿ ಆಚರಿಸಲಾಗುತ್ತಿದೆ.
ಆಝಾದ್ ತಾವು ದೇಶದ ವಿದ್ಯಾಸಚಿವರಾಗಿದ್ದ ಅವಧಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಗೆ ಒಂದು ರೂಪ ಕೊಡಲು ಶ್ರಮಿಸಿದ್ದಲ್ಲದೇ ಅವರ ಕಾರ್ಯಾವಧಿಯಲ್ಲಿ ವಿಶ್ವವಿದ್ಯಾಲಯುಗಳ ಧನಸಹಾಯ ಸಮಿತಿ, ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಮಿತಿ, ಖರಗಪುರದ ಉನ್ನತ ಶಿಕ್ಷಣ ಸಂಸ್ಥೆ, ಹಾಗೂ ಪ್ರೌಢಶಿಕ್ಷಣ ಆಯೋಗಗಳನ್ನು ಸ್ಥಾಪಿಸಲಾಯಿತು.
ಇದಲ್ಲದೇ ದೇಶದ ಪ್ರಮುಖ ವಿದ್ಯಾಸಂಸ್ಥೆಗಳಾದ ಖರಗಪುರದ ಭಾರತೀಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾಗಳನ್ನು ಪ್ರಾರಂಭಿಸುವಲ್ಲೂ ಪ್ರಮುಖ ಪಾತ್ರವಹಿಸಿವರು ಆಝಾದ್.
ಈ ಸಂದರ್ಭದಲ್ಲಿ ರಾಷ್ಟ್ರದ ಪ್ರಮುಖ ನಾಯಕರುಗಳು ಆಝಾದ್ರ ಈ ಮಹೋನ್ನತ ಸೇವೆಯನ್ನು ಸ್ಮರಿಸುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರೂ ಸಹ ಆಝಾದ್ರಿಗೆ ತಮ್ಮ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ. ಅವರು “ಮೌಲಾನಾ ಆಝಾದ್ರಿಗೆ ಶ್ರದ್ಧಾಂಜಲಿಗಳು. ಅವರೊಬ್ಬ ಪ್ರಖರ ಚಿಂತಕರಾಗಿದ್ದುದರ ಜೊತೆಗೆ ಜ್ಞಾನಿಗಳೂ ಆಗಿದ್ದರು. ವಿದ್ಯಾವಲಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಸಮಾಜದಲ್ಲಿ ಭ್ರಾತೃತ್ವವನ್ನು ಬೆಳೆಸಲು ಸತತವಾಗಿ ಶ್ರಮಿಸಿದ್ದರು” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
“ಸ್ವಾತಂತ್ರ್ಯಹೋರಾಟಗಾರ ಹಾಗೂ ವಿದ್ವಾಂಸರಾಗಿದ್ದ ಮೌಲಾನಾ ಆಝಾದ್ರಿಗೆ ವಿನಯಪೂರ್ವಕ ಶ್ರದ್ಧಾಂಜಲಿಗಳು. ಸ್ವತಂತ್ರ ಭಾರತದ ಪ್ರಬಲ ವಿದ್ಯಾ ವ್ಯವಸ್ಥೆಗೆ ಅಡಿಪಾಯವನ್ನು ಹಾಕುವುದರಲ್ಲಿ ಅಮೂಲ್ಯ ಕೊಡುಗೆ ನೀಡಿದ ಅವರನ್ನು ಮರೆಯಲು ಸಾಧ್ಯವಿಲ್ಲ” ಎಂದು ಒರಿಸ್ಸಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Prime Minister Narendra Mode pays tribute to the first education minister of independent India
ಇದನ್ನೂ ಓದಿ: Online Lesson: ಆನ್ಲೈನ್ ಪಾಠ ಕೇಳಿ ಕುಗ್ಗಿದ್ದ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಲು ಸುರಾನ ವಿದ್ಯಾಲಯದಿಂದ ವಿಶೇಷ ತರಬೇತಿ
ಇದನ್ನೂ ಓದಿ: ಜೂನ್ ಅಂತ್ಯದೊಳಗೆ ಕೇಂದ್ರಿಯ ವಿದ್ಯಾಲಯ ಕಾಮಗಾರಿ ಪೂರ್ಣಗೊಳಿಸಿ
Discussion about this post