ಆಝಮ್ಗಢ, ಉತ್ತರಪ್ರದೇಶ: ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ ಇಂದು ಉದ್ಘಾಟನೆಯಾಗಿರುವ ಪೂರ್ವಾಂಚಲ ಎಕ್ಸಪ್ರೆಸ್ವೇಯು ಉತ್ತರಪ್ರದೇಶದ ಅಭಿವೃದ್ಧಿಗೆ ಕಾರಣವಾಗುವುದಲ್ಲದೇ ರಾಜ್ಯಕ್ಕೆ ಹೊಸ ದಾರಿಯನ್ನು ತೋರಲಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ರಾಜ್ಯದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿ-130 ಹರ್ಕ್ಯೂಲಿಸ್ ವಿಮಾನದಲ್ಲಿ ಸುಲ್ತಾನ್ಪುರಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ್ದರು.
ಉತ್ತರಪ್ರದೇಶ ರಾಜ್ಯದ ಮೂಲ ಸಂರಚನೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಲಿರುವ ಈ ಯೋಜನೆಯ ಶಿಲಾನ್ಯಾಸವನ್ನು ಮೋದಿಯವರೇ ಮಾಡಿದ್ದು ಸುಮಾರು 3 ವರ್ಷಗಳ ನಂತರ ಇದರ ಉದ್ಘಾಟನೆಯಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಪೂರ್ಣಗೊಳಿಸಿರುವ ಮೂಲಸಂರಚನೆ ಅಭಿವೃದ್ಧಿಯ ಬೃಹತ್ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಿದ್ದು ಇದಕ್ಕೆ ಸುಮಾರು 22,500 ಕೋಟಿ ರೂಪಾಯಿಗಳ ವೆಚ್ಚ ಮಾಡಲಾಗಿದೆ. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಪೂರ್ವಾಂಚಲ ಪ್ರದೇಶದ ಸಾಗಾಣಿಕೆ ವ್ಯವಸ್ಥೆಯಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ.
ಉತ್ತರಪ್ರದೇಶದ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಅಭಿವೃದ್ಧಿ ಕಾರ್ಯದ ಕೀರ್ತಿಯನ್ನು ಪಡೆಯುವ ವಿಚಾರದಲ್ಲಿ ಹಗ್ಗಜಗ್ಗಾಟ ಶುರುವಾಗಿದ್ದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರದೇಶ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಇದು ನಮ್ಮ ಆಡಳಿತಕಾಲದ ಸಾಧನೆಯಾಗಿದ್ದು ಚುನಾವಣೆಗೆ ಮುಂಚೆ ಬಿಜೆಪಿ ಇದನ್ನು ತಾನೇ ಮಾಡಿರುವಂತೆ ಬಿಂಬಿಸುತ್ತಿದೆಯೆಂದು ದೂರಿದ್ದಾರೆ. ಅಷ್ಟುಮಾತ್ರವಲ್ಲದೇ, ಯೋಗಿ ಆದಿತ್ಯನಾಥ್ರ ಸರಕಾರವು ಈ ಯೋಜನೆಯ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಂಡಿದೆಯೆಂದೂ ಆರೋಪಿಸಿದ್ದಾರೆ.
Inaugurating the Purvanchal Expressway. #एक्सप्रेस_प्रदेश https://t.co/LyF31LjZjn
— Narendra Modi (@narendramodi) November 16, 2021
Modi Inaugurates Purvanchal Expressway in Uttar Pradesh 3 years after laying foundation stone
ಇದನ್ನೂ ಓದಿ: ರಾಜ್ಯದಲ್ಲಿ ಬಿಟ್ಕಾಯಿನ್ ದಂಧೆ: ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ
ಇದನ್ನೂ ಓದಿ: Heavy rain: ನವೆಂಬರ್ 20ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಧಿಕ ಮಳೆ
Discussion about this post