ನವದೆಹಲಿ: ವಿಮಾನದಲ್ಲಿ ತಲೆತಿರುಗುವಿಕೆಯಿಂದ ಬಳಲುತ್ತಿದ್ದ ಸಹಪ್ರಯಾಣಿಕರೊಬ್ಬರಿಗೆ ಕೇಂದ್ರ ಸಚಿವ ಡಾ.ಭಾಗವತ್ ಕರಾಡ್ ಚಿಕಿತ್ಸೆ ನೀಡಿ ವೈದ್ಯ ವೃತ್ತಿಯ ಘನತೆಯನ್ನು ಎತ್ತಿಹಿಡಿದ್ದಾರೆ. ಈ ಸಕಾಲಿಕ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ.
ಹಣಕಾಸು ಖಾತೆಯ ರಾಜ್ಯ ಸಚಿವರಾದ ಡಾ.ಭಾಗವತ್ ಮುಂಬೈನಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿ ಮಂಗಳವಾರ ರಾತ್ರಿ ಪ್ರಯಾಣ ಕೈಗೊಂಡಿದ್ದರು. ಈ ವೇಳೆ ಸಹಪ್ರಾಣಿಕರೊಬ್ಬರು ತಲೆತಿರುಗುತ್ತಿದೆ ಎಂದು ಅಸ್ವಸ್ಥರಾದರು. ಆಗ ಕರಾಡ್ ಅವರನ್ನು ತಪಾಸಣೆ ಮಾಡಿ ಉಪಚರಿಸಿದರು. ಈ ಚಿತ್ರವನ್ನು ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.
ಕಡಿಮೆ ರಕ್ತದೊತ್ತಡದಿಂದಾಗಿ ಸುಸ್ತಾದ ಪ್ರಯಾಣಿಕರೊಬ್ಬರು ಬೆವತು ಹೋದರು. ಅವರನ್ನು ಆಸನದಲ್ಲಿ ಆರಾಮವಾಗಿ ಮಲಗಿಸಿದ ವಿಮಾನದ ಸಿಬ್ಬಂದಿ ಪ್ರಯಾಣಿಕರಲ್ಲಿ ಪೈಕಿ ಯಾರಾದರು ವೈದ್ಯರು ಇದ್ದಾರೆಯೇ ಕೇಳಿದಾಗ, ಡಾ. ಕರಾಡ್ ಮುಂದೆ ಬಂದು ಅಸ್ವಸ್ಥರಾದ ಸಹಪ್ರಯಾಣಿಕರನ್ನು ಪರೀಕ್ಷಿಸಿದರು. ಗ್ಲುಕೋಸ್ ನೀಡಿದ ನಂತರ ಅವರು ಚೇತರಿಸಿಕೊಂಡರು. ಈ ಫೋಟೋಗಳನ್ನು ಡಿಗೋ ಏರ್ಲೈನ್ಸ್ ಕೂಡ ರೀಟ್ವೀಟ್ ಮಾಡಿದೆ.
ಡಾ.ಕರಾಡ್ ಅವರ ಈ ಸೇವಾ ಗುಣಕ್ಕೆ ಮೆಚ್ಚಿಗೆ ಸೂಚಿಸಿರುವ ಪ್ರಧಾನಿ ಮೋದಿ, ನನ್ನ ಸಹೋದ್ಯೋಗಿಯದ್ದು ಯಾವಾಗಲೂ ಮಿಡಿಯುವ ವೈದ್ಯ ಹೃದಯ. ಅವರ ಸೇವಾತತ್ಪರತೆ ಸ್ಫೂರ್ತಿದಾಯಕ ಎಂದಿದ್ದಾರೆ.
ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಡಾ.ಕರಾಡ್, ಈ ಹಿಂದೆ ಔರಂಗಾಬಾದ್ನ ಮೇಯರ್ ಆಗಿದ್ದರು. ಶಸ್ತ್ರಚಿಕಿತ್ಸಕರಾದ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Doctor-Turned-Union Minister Helps Passenger Mid-Air.
ಇದನ್ನು ಓದಿ: ಸಮಾಜದಲ್ಲಿ ಮಾನವೀಯ ಸಂಬಂಧಗಳು ವೃದ್ಧಿಸಲಿ
ಇದನ್ನು ಓದಿ: ಸಮಾಜದಲ್ಲಿ ಮಾನವೀಯ ಮೌಲ್ಯ ಬೆಳೆಸುವ ಅಗತ್ಯ
Discussion about this post