ನವದೆಹಲಿ: ನಮಗೆ ನಿಜವಾದ ಸ್ವಾತಂತ್ರ್ಯ ಬಂದದ್ದು 2014ರಲ್ಲಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಂದು ಹೇಳಿದ್ದ ನಟಿ, ಕಂಗನಾ ರನೌತ್ ಹೇಳಿಕೆಗೆ ಬಾಲಿವುಡ್ ಬರಹಗಾರ ಜಾವೇದ್ ಅಖ್ತರ್ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಕ್ರವಾರ, ತಮ್ಮ ಟ್ವಿಟರ್ ನಲ್ಲಿ ರನೌತ್ ಅವರ ಹೆಸರನ್ನು ಉಲ್ಲೇಖಿಸದೆಯೇ, ‘ನನಗೆ ಎಲ್ಲವೂ ಅರ್ಥವಾಗುತ್ತಿದೆ. ಅವರೆಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಯಾವ ಕೊಡುಗೆ ನೀಡದೆ ಇದ್ದರೂ, 1947ರಲ್ಲಿ ನಮಗೆ ದೊರೆತ ಸ್ವಾತಂತ್ರ್ಯ ಕೇವಲ ಭಿಕ್ಷೆ ಅಂತೆಲ್ಲ ಏಕೆ ಮಾತನಾಡುತ್ತಾರೆ ಅನ್ನೋದು ತಿಳಿಯುತ್ತಿದೆ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಕಂಗನಾ ರನೌತ್ ಮೇಲೆ ಕಿಡಿ ಕಾರಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕಂಗನಾ ರನೌತ್ಗೆ ಪದ್ಮಶ್ರೀ ನೀಡಿ ಗೌರವಿಸಿತು. ಪ್ರಶಸ್ತಿ ಸ್ವೀಕರಿಸಿದ ನಂತರ ಕಂಗನಾ ರನೌತ್ ದೇಶದ ಸ್ವಾತಂತ್ರ್ಯದ ಬಗ್ಗೆ ಈ ವಿವಾದಿತ ಹೇಳಿಕೆ ನೀಡಿದ್ದರು.
ಜಾವೀದ್ ಅಖ್ತರ್-ರನೌತ್ ನಡುವೆ ಕಾನೂನು ಸಮರ ನಡೆಯುತ್ತಿದೆ
ಟಿವಿ ಕಾರ್ಯಕ್ರಮವೊಂದರಲ್ಲಿ ಕಂಗನಾ ಅಖ್ತರ್ ಬಗ್ಗೆ ಮಾನ ಹಾನಿಯಾಗುವ ಹೇಳಿಕೆ ನೀಡಿದ್ದಾರೆ ಎಂದು ಅಖ್ತರ್ ಆರೋಪಿಸಿ ಕಳೆದ ನವೆಂಬರ್ನಲ್ಲಿ ಆಕೆಯ ವಿರುದ್ಧ ಮೊಕದ್ದಮೆ ಹೂಡಿದ್ದರು. ಕಂಗನಾಗೆ ಬಾಲಿವುಡ್ ನಲ್ಲಿ ಸಾಲು ಸಾಲು ಚಿತ್ರಗಳು ಕಾಯುತ್ತಿವೆ. ಮಣಿಕರ್ಣಿಕಾ ರಿಟನ್ಸ್, ತೇಜಸ್, ಎಮರ್ಜೆನ್ಸಿ, ಅಪರಾಜಿತಾ ಮುಂತಾದ ದೊಡ್ಡ ಬಜೆಟ್ನ ಚಿತ್ರಗಳು ಕಂಗನಾ ಕೈಯಲ್ಲಿವೆ.
ಇತ್ತೀಚೆಗಷ್ಟೇ, ಕಂಗನಾ ತಮ್ಮ ಮಣಿಕರ್ಣಿಕಾ ಪ್ರೊಡಕ್ಷನ್ ನಲ್ಲಿ ಟಿಕು ವೆಡ್ಸ್ ಶೇರು ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದ್ದರು. ಈ ಚಿತ್ರವನ್ನು ಸಾಯಿ ಕಬೀರ್ ನಿರ್ದೇಶನ ಮಾಡಲಿದ್ದಾರೆ. ಕಂಗನಾ ಅವರ ಮೊದಲ ಡಿಜಿಟಲ್ ಪ್ರಯತ್ನ ಇದಾಗಿದೆ.
ಇದನ್ನೂ ಓದಿ: ನಟಿ ಕಂಗನಾರನ್ನು ಬಂಧಿಸಿ, ದೇಶದ್ರೋಹದ ಕೇಸ್ ದಾಖಲಿಸಲು ವಿಪಕ್ಷಗಳ ಆಗ್ರಹ
Discussion about this post