ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ. ಮಾನವ ಪ್ರಯತ್ನದ ಜೊತೆಗೆ ಗ್ರಹಗತಿಗಳ ಪ್ರಭಾವವೂ ಮನುಷ್ಯರ ಬದುಕಿನ ಮೇಲೆ ವಿವಿಧ ರೀತಿಯಗಳಲ್ಲಿ ಪರಿಣಾಮ ಬೀರುತ್ತದೆ. ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡರೆ ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ದೋಷಪೂರಿತರಾದ ಗ್ರಹಗಳಿಂದ ತೊಂದರೆ ಎದುರಿಸುತ್ತಿರುವವರು ಶಾಂತಿಗೆ ಸುಲಭ ಪರಿಹಾರ ಕ್ರಮಗಳನ್ನು ಅನುಸರಿಸಬಹುದು ಎನ್ನುತ್ತಾರೆ ಗೌರಿಬಿದನೂರಿನ ಜ್ಯೋತಿಷಿ ಪಂಡಿತ್ ರಾಮಕೃಷ್ಣ ಗುಂಜೂರ್. ಗ್ರಹಗತಿಗಳ ಸಮಸ್ಯೆಗಳಿಗೆ ಸುಲಭದ ಪರಿಹಾರ ಜೊತೆಗೆ ವಾರ ಭವಿಷ್ಯದ ವಿವರವೂ ಈ ಬರಹದಲ್ಲಿದೆ.
ಮೇಷರಾಶಿ: ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಅಡೆತಡೆ, ಉದ್ಯೋಗದಲ್ಲಿ ಸ್ವಲ್ಪ ಅಡೆತಡೆ, ಸಂಬಂಧಗಳಲ್ಲಿ ಸ್ವಲ್ಪ ತೊಂದರೆ; ಇವುಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಪರಿಸ್ಥಿತಿ ಇದೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ವಿಷ್ಣುವಿನ ಜಪ , ಅಶ್ವತ್ಥನಾರಾಯಣ ಸೇವೆ ಮಾಡಿದರೆ ಉತ್ತಮವಾಗುತ್ತದೆ.
ವೃಷಭ ರಾಶಿ: ಈ ವಾರವೂ ಸಹ ಮನಸ್ಸಿನ ಕಿರಿಕಿರಿ ಸ್ವಲ್ಪ ಜಾಸ್ತಿಯಾಗುವ ಸಾಧ್ಯತೆಯಿದೆ. ಕೈಗೆ ಬೇಕಾದಷ್ಟು ಹಣ ಬಂದರೂ ಹಾಗೆಯೇ ಖರ್ಚಾಗಿ ಹೋಗುತ್ತದೆ. ಮಾಡುವ ಎಲ್ಲಾ ಶುಭ ಕಾರ್ಯಗಳಲ್ಲಿ ಉತ್ತಮ ಫಲವಿದೆ.ಮನಸ್ಸಿನ ನೆಮ್ಮದಿಗಾಗಿ ಶಿವನ ಆರಾಧನೆ ಮಾಡಿ.
ಮಿಥುನ ರಾಶಿ: ಈ ವಾರದಲ್ಲಿ ಉದ್ಯೋಗದಲ್ಲಿ ಸ್ಪಲ್ಪ ಪ್ರಮಾಣದ ನೆಮ್ಮದಿಯಿರಲಿದೆ. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಸಮಾಧಾನಕರ ಬೆಳವಣಿಗೆ ಆದರೂ ಇತರೆ ಕ್ಷೇತ್ರಗಳಲ್ಲಿ ತುಂಬಾ ಸಮಸ್ಯೆಗಳು ಇವೆ . ಗುರು ಮತ್ತು ಶನಿ ದೇವರ ಜಪ ಮತ್ತು ಪೂಜೆಯಿಂದ ಅನುಕೂಲಕರ.
ಕಟಕ ರಾಶಿ: ಈ ವಾರ ಸ್ವಲ್ಪ ಸಮಾಧಾನದ ಪರಿಸ್ಥಿತಿ ಬರುತ್ತದೆ. ಮಕ್ಕಳ ಕ್ಷೇತ್ರದಲ್ಲಿ ಸಮಾಧಾನಕರ ಬೆಳವಣಿಗೆ, ತಾಯಿಯ ಬಗ್ಗೆ ಚಿಂತೆ ಮುಂದುವರೆಯುತ್ತದೆ. ಹಣಕಾಸು ಕೈಯಲ್ಲಿ ನಿಲ್ಲದ ಪರಿಸ್ಥಿತಿ ಆದರೂ ನಿಮಗೆ ಬೇಕಾದಾಗ ಹಣ ಕೈ ಸೇರುತ್ತದೆ. ಶುಕ್ರ ಜಪ, ಲಕ್ಷ್ಮೀ ಆರಾಧನೆ ಮಾಡಿ. ತುಳಸಿ ಪೂಜೆಯೂ ಉತ್ತಮ.
ಸಿಂಹ ರಾಶಿ: ಬಹಳ ಅವಸರದಿಂದ ತೆಗೆದುಕೊಳ್ಳುವ ನಿರ್ಧಾರಗಳಿಂದ ಮನಸ್ಸಿಗೆ ಚಿಂತೆ , ಆರೋಗ್ಯಕ್ಕೆ ಹಾನಿ , ವ್ಯಾಪಾರ ಹಾಗೂ ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಉತ್ತಮವಾಗಿರುತ್ತವೆ. ಹಣಕಾಸು ಸ್ಥಿತಿ ಸುಧಾರಣೆಯಾಗುತ್ತದೆ. ಇನ್ನಷ್ಟು ಉತ್ತಮ ಫಲಳನ್ನು ಪಡೆಯಲು ಶನಿ ಮತ್ತು ಗುರು ಗ್ರಹರ ಆರಾಧನೆ ಉತ್ತಮ
ಕನ್ಯಾ ರಾಶಿ: ಕೃಷಿ , ವ್ಯಾಪಾರ , ಹಾಗೂ ಭೂಮಿಯ ವಿಚಾರಗಳಲ್ಲಿ ಒಳಿತು. ಸರ್ಕಾರಿ ಮತ್ತು ಉದ್ಯೋಗದ ವಿಷಯಗಳಲ್ಲಿ ಉತ್ತಮವಾಗಿರಲಿದೆ. ಮಕ್ಕಳ ಬಗ್ಗೆ ಚಿಂತೆ ಅಥವಾ ಅವರಿಂದ ತೊಂದರೆ. ಇದನ್ನು ಹೊರತು ಪಡಿಸಿ ಈ ವಾರ ಉತ್ತಮವಾಗಿದೆ. ಶನಿಯ ಆರಾಧನೆಯಿಂದ ಉತ್ತಮ ಫಲವಿದೆ.
ತುಲಾ ರಾಶಿ: ಉತ್ಸಾಹ ಕಡಿಮೆ ,ಯಾವುದೇ ಕೆಲಸ ಮಾಡಲು ನಿರಾಸಕ್ತಿ. ಭೂಮಿ ವಿಚಾರದಲ್ಲಿ ತೊಂದರೆ . ಉದ್ಯೋಗ ಮತ್ತು ವ್ಯವಹಾರದಲ್ಲಿ ಸ್ವಲ್ಪ ಸಮಾಧಾನಕರ ಬೆಳವಣಿಗೆ. ತಾಯಿಯ ಬಗ್ಗೆ ಚಿಂತೆ ಅಥವಾ ಅವರಿಗೆ ತೊಂದರೆಯಾಗಬಹುದು. ಹಣಕಾಸು ಹಾಗೂ ಇತರೆ ಪರಿಸ್ಥಿತಿಗಳಲ್ಲಿ ಸುಧಾರಣೆ. ಶನಿದೇವರ ಆರಾಧನೆ ಮತ್ತು ಶಿವನ ಆರಾಧನೆ ಮಾಡಿದರೆ ಉತ್ತಮ.
ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಸ್ವಲ್ಪ ನೆಮ್ಮದಿ. ಸಮಾಧಾನಕರ ಸ್ಥಿತಿ ಇರುತ್ತದೆ. ಮನೆಯಲ್ಲಿ ಎಲ್ಲವೂ ಸರಿ ಇದೆ ಎನ್ನುವ ಸಮಯಕ್ಕೆ ಬೇರೆ ಯಾವುದೋ ಒಂದು ಸಣ್ಣ ವಿಚಾರ ಕಲಹ ತರಬಹುದು. ಇನ್ನುಳಿದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಿದೆ. ರಾಹು-ಕೇತು ಆರಾಧನೆ , ಅರಳಿಕಟ್ಟೆ ಪೂಜೆ ಮಾಡಿ.
ಧನಸ್ಸು ರಾಶಿ: ಉದ್ಯೋಗ , ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ. ಮಾಡಿದ ಪ್ರಯತ್ನಗಳು ವಿಫಲವಾಗುವ ಸಾಧ್ಯತೆಗಳಿವೆ, ಮನಸ್ಸಿಗೆ ಚಿಂತೆ ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಜ್ಞಾನಕ್ಕೆ ಹಾಗೂ ಭೂಮಿಯಿಂದ ಮಾಡುವ ಪ್ರಯತ್ನಕ್ಕೆ ಉತ್ತಮ ಫಲ . ರವಿ ಜಪ ಮತ್ತು ಕೇತು ಆರಾಧನೆ ಮಾಡಿ.
ಮಕರ ರಾಶಿ: ವೃಥಾ ತಿರುಗಾಟ, ಮಾಡುವ ಕೆಲಸಗಳಲ್ಲಿ ಸ್ವಲ್ಪ ವಿಳಂಬ ಉಂಟಾಗುತ್ತದೆ. ಹಣಕಾಸಿನ ಅಡಚಣೆ, ಮಕ್ಕಳ ಬಗ್ಗೆ ಚಿಂತೆ ಅಥವಾ ಅವರಿಗಾಗಿ ಖರ್ಚು. ಸರ್ಕಾರಿ ಕೆಲಸ-ಕಾರ್ಯಗಳಲ್ಲಿ ಪ್ರಯತ್ನಗಳ ನಂತರ ವಿಳಂಬ ಫಲವಿದೆ. ಇನ್ನಷ್ಟು ಉತ್ತಮ ಫಲ ಪಡೆಯಲು ಶನಿ ಮತ್ತು ರವಿ ಆರಾಧನೆ ಮಾಡಿ.
ಕುಂಭ ರಾಶಿ: ಮಾಡುವ ಎಲ್ಲಾ ಪ್ರಯತ್ನಗಳಲ್ಲಿ ಸ್ವಲ್ಪ ತಡವಾಗಿ ಫಲ ಸಿಗುತ್ತದೆ, ಇದರಿಂದ ಮನಸ್ಸಿಗೆ ಆತಂಕ , ಚಿಂತೆ ಹೆಚ್ಚಾಗುತ್ತದೆ. ಗುರು-ಹಿರಿಯರ ಸಲಹೆಯಿಂದ ಮನಸ್ಸಿಗೆ ಸಮಾಧಾನ. ಇನ್ನುಳಿದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಫಲವಿದೆ. ನಿಮ್ಮ ಪ್ರಯತ್ನಗಳು ಉತ್ತಮ ಫಲ ನೀಡಲು ಗುರು ಮತ್ತು ಶನಿ ಆರಾಧನೆ ಮಾಡಿ.
ಮೀನ ರಾಶಿ:
ಮೀನರಾಶಿಗೆ ಈ ವಾರ ಬಹಳ ಉತ್ತಮ ಫಲಗಳು ಗೋಚರವಾಗುತ್ತಿವೆ . ಮಾಡುವ ಎಲ್ಲಾ ಪ್ರಯತ್ನಗಳು ಸಫಲವಾಗಿ ನೆಮ್ಮದಿ ಕೊಡುವ ಸಮಯ. ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಸ್ವಲ್ಪ ಅಸಡ್ಡೆ ಬರುತ್ತದೆ. ರಿಯಲ್ ಎಸ್ಟೇಟ್/ಭೂಮಿ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ಕುಂಠಿತವಾಗುತ್ತದೆ. ಉತ್ತಮ ಫಲಕ್ಕೆ ಬುಧ ಮತ್ತು ಮಂಗಳ ಗ್ರಹಗಳ ಆರಾಧನೆ ಮಾಡಿ.
Weekly predictions for all 12 signs according to Moon Signs
ಇದನ್ನೂ ಓದಿ: Act of Agriculture: ಮೋದಿ ನಿಲುವು ವಿರೋಧಿಸುವವರಿಗೆ ಪರಿತಪಿಸುವ ಕಾಲ ಬರಲಿದೆ: ಸಿ.ಟಿ.ರವಿ ಭವಿಷ್ಯ
ಇದನ್ನೂ ಓದಿ: Kannada sovereign language: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಮಾತೃಭಾಷೆ ಅಭಿಮಾನವಿರಲಿ

Discussion about this post