ನವದೆಹಲಿ: ಉದ್ಯೋಗ ಕಳೆದುಕೊಂಡು ಇಲ್ಲವೆ ಸಂಟಿತ ವಲಯದಿಂದ ಅಸಂಟಿತ ವಲಯಕ್ಕೆ ಹೋಗಿರುವ ಕಾರಣ ಸದಸ್ಯತ್ವ ಕಳೆದುಕೊಂಡಿರುವವರನ್ನು ಮತ್ತೆ ಚಂದಾದಾರನ್ನಾಗಿ ಮಾಡಲು ಕಾಮಿರ್ಕರ ಭವಿಷ್ಯ ನಿಧಿ ಸಂಸ್ಥೆ ಯೋಜನೆಯೊಂದನ್ನು ರೂಪಿಸುತ್ತಿದೆ.
ಮಾಜಿ ಚಂದಾದಾರರ ಮರುಸೇರ್ಪಡೆಗೆ ತಿಂಗಳ ವಂತಿಕೆಯನ್ನು ಕನಿಷ್ಠ 500 ರೂಪಾಯಿ ಅಥವಾ ಮಾಸಿಕ ಆದಾಯದ ಶೇ.12ಕ್ಕೆ ನಿಗದಿ ಮಾಡುವ ಚಿಂತನೆಯಲ್ಲಿದೆ. ಈ ಕುರಿತ ಸಾಧಕ ಬಾಧಕದ ಬಗ್ಗೆ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ. ಈ ಯೋಜನೆಯ ಆರಂಭದಿಂದ ನಿವೃತ್ತಿಯ ನಂತರ ಕಾಮಿರ್ಕರ ಪಿಂಚಣಿ, ಭವಿಷ್ಯ ನಿಧಿ ಮತ್ತು ವಿಮಾ ಆಧಾರಿತ ಠೇವಣಿ ಯೋಜನೆಯ ಮೇಲೆ ಉಂಟಾಗುವ ಪರಿಣಾಮದ ಕುರಿತು ವಿಶ್ಲೇಷಣೆ ನಡೆಸಲಾಗುತ್ತಿದೆ. ಇವೆಲ್ಲವನ್ನು ಸಮಗ್ರವಾಗಿ ಅವಲೋಕಿಸಿ ಮಾಜಿ ಚಂದಾದಾರರ ಮರುಸೇರ್ಪಡೆಗೆ ಅವಕಾಶ ಮಾಡಿಕೊಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
2018 ಮತ್ತು 2020ರ ಅವಧಿಯಲ್ಲಿ 48 ಲಕ್ಷ ಚಂದಾದಾರರು ಈ ಯೋಜನೆಯಿಂದ ನಿರ್ಗಮಿಸಿದ್ದಾರೆ. 2020ರಲ್ಲಿ ಕೊರೊನಾ ಕಾರಣ ಅನೇಕರು ಕೆಲಸ ಕಳೆದುಕೊಂಡಿರುವುದರಿಂದ ಈ ಸಂಖ್ಯೆ ಇನ್ನು ಅಧಿಕ ಆಗಬಹುದ. ಇಂಥವರನ್ನು ಮತ್ತೆ ಚಂದಾದಾರನ್ನಾಗಿ ಮಾಡುವುದರಿಂದ ಅವರ ಇಳಿಗಾಲದ ಬದುಕಿನಲ್ಲಿ ಆಥಿರ್ಕ ಅಭದ್ರತೆ ತೀವ್ರವಾಗುವುದಿಲ್ಲ ಮತ್ತು ಅವರನ್ನು ನಂಬಿರುವ ಕುಟುಂಬಕ್ಕೂ ಹಣಕಾಸು ಭದ್ರತೆ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಯುನಿವರ್ಸಲ್ ಅಕೌಂಟ್ ನಂಬರ್ಗೆ (ಯುಎಎನ್) ಆಧಾರ್ ಸಂಖ್ಯೆ ಜೋಡಣೆ ಆಗಿರುವ ಕಾರಣ ಮಾಜಿ ಚಂದಾದಾರರನ್ನು ಹುಡುಕುವುದು ಸುಲಭ ಎಂದು ಅವರು ಹೇಳಿದ್ದಾರೆ.
2020ರ ಸಾಮಾಜಿಕ ಭದ್ರತಾ ಸಂಹಿತೆಯಡಿ ಹೊಸ ಯೋಜನೆಗಳನ್ನು ಆರಂಭಿಸಲು ಅವಕಾಶ ಇದೆ. ಈ ಸಂಹಿತೆಯೇ ಮುಂದಿನ ಆರ್ಥಿಕ ಸಾಲಿನಿಂದ ಅನುಷ್ಠಾನವಾಗಲಿರುವುದರಿಂದ ಹೊಸ ಯೋಜನೆ ಕೂಡ ಮುಂದಿನ ಹಣಕಾಸು ಸಾಲನಿಂದ ಜಾರಿ ಆಗಬೇಕಾಗುತ್ತದೆ. ಸದ್ಯ 6.90 ಕೋಟಿ ಚಂದಾದಾರರು ಮತ್ತು 71 ಲಕ್ಷ ಪಿಂಚಣಿದಾರರು ಇದ್ದಾರೆ. ಪಿಎಫ್ ಹೂಡಿಕೆಗೆ ಶೇ. 8.5ರ ಬಡ್ಡಿ ನೀಡಲಾಗುತ್ತಿದೆ.
ಇದನ್ನೂ ಓದಿ: ಜನರ ಕೈಲಿ ಹರಿದಾಡುತ್ತಿದೆ ದುಡ್ಡು: ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎನ್ನುತ್ತಿದ್ದಾರೆ ತಜ್ಞರು
Discussion about this post