ಚಿಕ್ಕಮಗಳೂರು : ಡಿಸೆಂಬರ್ 6 ರಂದು ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ 65 ನೇ ಪರಿನಿಬ್ಬಾಣ ದಿನವನ್ನು ನಗರದಲ್ಲಿ ದೀಪದ ಮೆರವಣಿಗೆ ನಡೆಸುವ ಮೂಲಕ ಸ್ಮರಿಸಲಾಗುವುದು ಎಂದು ಮಾನವ ಹಕ್ಕು ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹೊನ್ನೇಶ್ ತಿಳಿಸಿದರು.
ಇದನ್ನೂ ಓದಿ: Mk Pranesh wins: 600ಕ್ಕೂ ಅಧಿಕ ಮತಗಳಿಂದ ಎಂ.ಕೆ.ಪ್ರಾಣೇಶ್ ಗೆಲುವು
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಡಿಸೆಂಬರ್ ೬ ರಂದು ಪರಿನಿಬ್ಬಾಣ ಆಚರಣಾ ಸಮಿತಿ ಮತ್ತು ದಲಿತ ಸಂಘಟನೆಗಳು ಒಟ್ಟುಗೂಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆಯ ಪರಿನಿಬ್ಬಾಣ ದಿನವನ್ನು ದೀಪದ ಮೆರವಣಿಗೆ ಮೂಲಕ ಆಚರಿಸಲಾಗುವುದು ಅಂದು ಸಂಜೆ ೫.೩೦ ಕ್ಕೆ ತಾಲ್ಲೂಕು ಕಛೇರಿ ಆವರಣದಿಂದ ದೀಪ ಹಿಡಿದು ಎಂ.ಜಿ ರಸ್ತೆಯ ಮೂಲಕ ಮರವಣಿಗೆ ಸಾಗಿ ಆಜಾದ್ ಪಾರ್ಕ್ನಲ್ಲಿ ಸಮಾವೇಶಗೊಳ್ಳುವ ಮೂಲಕ ಸಾರ್ವಜನಿಕ ಬಹಿರಂಗ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Dangerous: ರೂಪಾಂತರಿ ಒಮಿಕ್ರಾನ್ ಅಷ್ಟೊಂದು ಅಪಾಯಕಾರಿ ಸೋಂಕು ಅಲ್ಲ
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ನಟ ಚೇತನ್, ಹಾಗೂ ಮುಖ್ಯ ಭಾಷಣಕಾರರಾಗಿ ಡಿ.ವಿ.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೋ. ಹೆಚ್.ರಾಚಪ್ಪ ಭಾಗವಹಿಸಲಿದ್ದಾರೆ. ಎಂದು ತಿಳಿಸಿದರು.
ಇದನ್ನೂ ಓದಿ: e Paper – December 5, 2021
ಸಮಸಮಾಜದ ಭಾರತವನ್ನು ಕಟ್ಟುವ ಕನಸು ಹೊತ್ತಿದ ಮಹಾನಾಯಕ ಡಾ. ಬಿ.ಆರ್ ಅಂಬೇಡ್ಕರ್ ಅವರು ೧೯೫೬ ಡಿಸೆಂಬರ್ ೬ ರಂದು ಎಲ್ಲಾ ಶೋಷಿತ ವರ್ಗವನ್ನು ಬಿಟ್ಟು ಅಗಲಿದರು ಆ ಸ್ಮರಣೆಯ ದಿನವನ್ನು ಪರಿನಿಬ್ಬಾಣ ದಿನವನ್ನಾಗಿ ದೇಶಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ ಆ ಮೂಲಕ ಅವರು ತೋರಿದ ಸನ್ಮಾರ್ಗದಲ್ಲಿ ಸಾಗುವ ಆಶಯ ಹೊಂದಲಾಗಿದೆ ಎಂದರು.
ಇದನ್ನೂ ಓದಿ: IND vs NZ Test: ಎಜಾಜ್ 10 ವಿಕೆಟ್ ಸಾಧನೆ ಬಳಿಕ ಮಂಕಾದ ನ್ಯೂಜಿಲೆಂಡ್, ಮೊದಲ ಇನ್ನಿಂಗ್ಸ್ನಲ್ಲಿ 62ಕ್ಕೆ ಆಲೌಟ್
ಈ ಸಂದರ್ಭದಲ್ಲಿ ಎಂ.ಜಿ.ಲೋಕೇಶ್, ಮುರುಗೇಶ್, ಮಂಜುನಾಥ್, ರಾಕೇಶ್, ವಸಂತ್ಕುಮಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಒಮಿಕ್ರಾನ್ ಭೀತಿ ಮಧ್ಯೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ ಟೀಂ ಇಂಡಿಯಾ: ಸಿಎಸ್ಎ
Discussion about this post