ಲಖನೌ: ಮುಂದಿನ ಮೂರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿರುವ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಲು ಸಾಲಾಗಿ ಚಾಲನೆಗೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಸಚಿವರು, ಸಂಸದರು, ಶಾಸಕರು ಮೂಲಸೌಕರ್ಯದ ಅನೇಕ ಯೋಜನೆಗಳನ್ನು ಉದ್ಘಾಟಿಸುತ್ತಿದ್ದಾರೆ. ಹಲವು ಯೋಜನೆಗಳಿಗೆ ಅಡಿಗಲ್ಲು ಹಾಕುತ್ತಿದ್ದಾರೆ. ಇಂಥದ್ದೇ ಒಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕಳಪೆ ಕಾಮಗಾರಿಯ ಅಧ್ವಾನದ ಪ್ರದರ್ಶನ ಆಗಿದೆ.
ಬಿಜ್ನೋರ್ ಜಿಲ್ಲೆಯ ಖೆಡಾ ಗ್ರಾಮದಲ್ಲಿ ಏಳು ಕಿಮೀ. ಉದ್ದದ ರಸ್ತೆಯ ಕಾಮಗಾರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ರ್ಪೂಣಗೊಂಡಿದೆ. ಇದಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಭಾಗಿಯಾಗಿದ್ದ ಸ್ಥಳಿಯ ಶಾಸಕಿ ಸುಚಿ ಚೌಧರಿ, ರಸ್ತೆಯ ಲೆಕಕ್ಕೆ ಪೂಜೆಯಲ್ಲ ಆದ ಮೇಲೆ ಇಡುಗಾಯಿ ಹಾಕಿದರು. ಅದರೆ, ಕಾಯಿ ಒಡೆಯಲಿಲ್ಲ. ಡಾಂಬರು ಕಿತ್ತು ಬಂದು ಮಣ್ಣು ಮೇಲೆಕ್ಕೆ ಎದ್ದಿತು. ಕಾಮಗಾರಿಯ ಬಣ್ಣ ಉದ್ಘಾಟನೆಯ ದಿನವೇ, ಜನಪ್ರತಿನಿಧಿಯ ಇರುವಿಕೆಯಲ್ಲಿ ಬಯಲಾಗಿ ಇರಿಸುಮುರಿಸು ಉಂಟುಯಿತು.
ಸ್ಥಳದಲ್ಲೇ ಇದ್ದ ಶಾಸಕಿಯ ಪತಿ ಮೌಸಂ ಚೌಧರಿ ಸಲಿಕೆಯಿಂದ ರಸ್ತೆಯನ್ನು ಕೆದಕಿದಾಗ ಡಾಂಬರಿನ ತೆಕ್ಕೆಗಳು ಮೇಲೆದ್ದವು. ಇದರಿಂದ ಕೆಂಡಾಮಂಡಲವಾದ ಶಾಸಕಿ, ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರು, ರಸ್ತೆಯನ್ನು ತಪಾಸಣೆ ಮಾಡಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ರೇಗಾಡಿದರು. ಕಾಮಗಾರಿಯ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದರು. ರಸ್ತೆಯ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದ್ದು, ಪರೀೆಗೆ ಕಳುಹಿಸಲಾಗಿದೆ ಎಂದು ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ವಿಕಾಸ್ ಅಗರ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಆಲೂಗಡ್ಡೆ ತಳಿಗೆ ಏಕಸ್ವಾಮ್ಯ ಪಡೆದಿದ್ದ ಪೆಪ್ಸಿ ಕಂಪನಿ ವಿರುದ್ಧದ ಮೊಕದ್ದಮೆ ಗೆದ್ದ ರೈತ ಮಹಿಳೆ
Discussion about this post