ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪ ಮಲ್ಲಿಗೆನಹಳ್ಳಿ ಬಳಿ ತ್ಯಾಗದಬಾಗಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಪ್ರದೇಶದಲ್ಲಿ ಜೋಳ ಬೆಳೆದ ಸ್ಥಳದಲ್ಲಿ ವಿದ್ಯುತ್ ಹರಿದು ಸುಮಾರು 35 ವರ್ಷದ ಸಲಗ ಸಾವಪ್ಪಿದೆ.
ಗಂಡುಆನೆ ಅಕ್ರಮ ವಿದ್ಯುತ್ ಗೆ ಬಲಿಯಾಗಿದ್ದು, ಈ ಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಆನೆಗಳು ಅಕ್ರಮ ವಿದ್ಯುತ್ಗೆ ಬಲಿಯಾಗುತ್ತಲೇ ಇವೆ. ಬೆಳೆ ರಕ್ಷಿಸಿಕೊಳ್ಳಲು ಅಕ್ರಮ ವಿದ್ಯುತ್ ತಂತಿ ಈ ಭಾಗದಲ್ಲಿ ಅವ್ಯತವಾಗಿ ಹಾಕಲಾಗುತ್ತಿದೆ. ಅನೆಗೆ ವಿದ್ಯುತ್ ಸಿಕ್ಕಿ ಸತ್ತಿದೆ ಎನ್ನಲಾಗಿದೆ.
ಆನೆಯ ಸೊಂಡಿಲಿನ ಭಾಗಕ್ಕೆ ವಿದ್ಯುತ್ ಹೊಡೆದಿದೆ, ವಿದ್ಯುತ್ ತಂತಿ ಕೂಡ ಸೊಂಡಲಿಗೆ ಸಿಕ್ಕಿ ಹಾಕಿಕೊಂಡಿತ್ತು. ಈ ಸಂಬಂಧ ಅರಣ್ಯ ಇಲಾಖೆ ಮತ್ತು ಪೊಲೀಸರು ಪ್ರತ್ಯೇಕ ದೂರು ದಾಖಲಿಸಿಕೊಂಡಿದ್ದಾರೆ. ಕಳೆದ ತಿಂಗಳು ಭದ್ರಾ ಅಭಯಾರಣ್ಯದ ತನಿಗೆಬೈಲು ವ್ಯಾಪ್ತಿಯ ಬಫರ್ ಪ್ರದೇಶದ, ನಂದಿ ಬಟ್ಟಲು ಗ್ರಾಮದ ಪರಮೇಶ್ ಅವರ ಜೋಳದ ಜಮೀನಿನಲ್ಲಿ ಅಕ್ರಮ ವಿದ್ಯುತ್ ಹರಿಸಿ ಸಲಗ ಸಾವಪ್ಪಿದೆ ಬೆನ್ನಲ್ಲೆ ಮತ್ತೊಂದು ಸಲಗಅಕ್ರಮ ವಿದ್ಯುತ್ತಂತಿ ಬೇಲಿಗೆ ಸಿಕ್ಕಿ ಮೃತಪಟ್ಟಿದೆ.
ಆರೋಪಿ ರಘು ಮತ್ತು ಆತನ ತಾಯಿ ತಲೆ ಮರೆಸಿಕೊಂಡಿದ್ದಾರೆ. ಶಿವಮೊಗ್ಗ ವನ್ಯಜೀವಿ ವಿಭಾಗದ ಪಶವೈದ್ಯಾಧಿಕಾರಿ ವಿನಯ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಘಮ್ಮನಗಟ್ಟಿ, ತರೀಕೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್, ವಲಯ ಅರಣ್ಯಾಧಿಕಾರಿ ಸತೀಶ್, ಗೌರವ ವನ್ಯಜೀವಿ ಪರಿಪಾಲಕ ಜಿ .ವೀರೇಶ್,ಲಿಂಗದಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ರವಿ ಸ್ಥಳದಲ್ಲಿ ಇದ್ದರು.
Death of a man who ran power in a reserve forest.
Discussion about this post