ಚಿಕ್ಕಮಗಳೂರು: ರಾಜಕೀಯ ತಂತ್ರಗಾರಿಗೆಗಳು ಒಂದೇರೀತಿ ಇರುವುದಿಲ್ಲ ಡಿಕೆಶಿ ಅವರಿಗೆ ಕೇಳುತ್ತೇನೆ ಜೆಡಿಎಸ್ ಬೆಂಬಲ ವಿಲ್ಲದಿದ್ದರೆ ನಿಮ್ಮ ತಮ್ಮನನ್ನು ಸಂಸದನಾಗಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 2008ರಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಳ್ಳದಿದ್ದಿದ್ದರೆ ಡಿಕೆಶಿ ಕೂಡ ಶಾಸಕನಾಗಿ ಗೆದ್ದು ಬರಲು ತಿಣುಕಾಡಬೇಕಿತ್ತು ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯದಲ್ಲಿ 20೦ ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದು ಪಕ್ಷದ ಆಂತರಿಕ ಲೆಕ್ಕಚಾರದ ಪ್ರಕಾರ ಕನಿಷ್ಟ 11 ರಿಂದ 16 ಸ್ಥಾನ ಗೆಲ್ಲಬಹುದು, ಚುನಾಯಿತ ಪ್ರತಿನಿಧಿಗಳ ಮನಸ್ಸಿನಲ್ಲಿ ಏನಿದೆ ತಿಳಿದಿಲ್ಲ, ಗ್ರಾಮ ಸ್ವಾರಾಜ್ ಸಮಾವೇಶದಲ್ಲಿ ಗ್ರಾ.ಪಂ. ಸದಸ್ಯರನ್ನೆ ಆಧ್ಯತೆಯಾಗಿ ಸೇರಿಸಿದ ಕಾರಣ ಮೇಲ್ನೋಟಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಗೆದ್ದು ಬಂದಿದ್ದಾರೆಂಬುದು ವ್ಯಕ್ತವಾಗಿದೆ ಎಂದರು.
ರಾಜ್ಯದಲ್ಲಿ ಎಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಿಲ್ಲವೊ ಅಲ್ಲಿ ನಮಗೆ ಬೆಂಬಲ ಕೊಡಿ ಎಂದು ವರಿಷ್ಠರಾದ ಯಡಿಯೂರಪ್ಪ ಮನವಿ ಮಾಡಿದ್ದರು ಸಕಾರಾತ್ಮಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಸ್ಥಳೀಯ ನಾಯಕರ ಅಭಿಪ್ರಾಯಕ್ಕೆ ಬಿಟ್ಟಿದ್ದಾರೆ. ಪಂಚಾಯಿತಿ ಸದಸ್ಯರು ತೀರ್ಮಾನಿಸುತ್ತಾರೆ ಎಂದು ಹೇಳಿದರು.
ವೈಎಸ್ವಿ ದತ್ತಾ ಅವರು ಕಾಂಗ್ರೆಸ್ಗೆ ಬೆಂಬಲಿಸುತ್ತೇನೆಂದು ಬಹಿರಂಗವಾಗಿ ಹೇಳಿದ್ದಾರೆ ಅದನ್ನು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಎಂದು ಹೇಳಿದ್ದೇನಾ? ಮತದಾರರಿಗೆ ಚುನಾಯಿತ ಪ್ರತಿನಿಧಿಗಳಿಗೆ ಒಳ್ಳೆಯದು, ಕೆಟ್ಟದ್ದರ ಬಗ್ಗೆ ಅರಿವಿದೆ ಅವರು ಆಯ್ಕೆ ಮಾಡುತ್ತಾರೆ. ಈಗ ಕೈ ಗೆಟುಕದ ದ್ರಾಕ್ಷಿಹಣ್ಣು ಹುಳಿ ಎಂದರೆ ಅದು ಕಾಂಗ್ರೆಸ್ ಗೆ ಅನ್ವಯವಾಗುತ್ತದೆ ಎಂದರು.
ಚುನಾವಣೆಗಳಲ್ಲಿ ಆಮಿಷವೊಡ್ಡುವುದು ಒಳ್ಳೆ ಬೆಳವಣಿಯಲ್ಲ. ಎಲೆಕ್ಷನ್ಗಳು ಹಾಗೆ ಆಗಿದ್ದಾವೆ. ಆದರೆ ಇದನ್ನು ನಿಯಂತ್ರಿಸುವುದು ಕಷ್ಟದ ಸಂಗತಿ. ಕಾರಣ ಈ ದೇಶದಲ್ಲಿ ಭ್ರಷ್ಟಾಚಾರ, ಜಾತಿಯತೆ ಮತ್ತು ಓಲೈಕೆ ರಾಜಕಾರಣವನ್ನು ಹುಟ್ಟು ಹಾಕಿ, ಗೊಬ್ಬರ ನೀರು ಹಾಕಿ ಹೆಮ್ಮರವಾಗಿ ಬೆಳೆಸಲಾಗಿದೆ ಎಂದರು.
MLA C.T. Ravi
Discussion about this post