ಚೆನ್ನೈ: ತಮಿಳುನಾಡಿನ ಊಟಿ ಬಳಿಯ ಕೂನೂರು ಬಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ 13 ಮಂದಿಯಲ್ಲಿ ಒಬ್ಬರಾದ ವಾಯುಸೇನೆಯ ಜೂನಿಯರ್ ವಾರಂಟ್ ಅಧಿಕಾರಿ ಅರಕ್ಕಲ್ ಪ್ರದೀಪ್ (37), 2018ರಲ್ಲಿ ಕೇರಳದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ ಪ್ರವಾಹ ಪರಿಹಾರ ಕಾರ್ಯಾಚರಣೆಯ ತಂಡದಲ್ಲಿ ತೊಡಗಿದ್ದರು.
ಉತ್ತರಾಖಂಡದಲ್ಲಿ 2013ರಲ್ಲಿ ಸಂಭವಿಸಿದ ಪ್ರವಾಹದ ಪರಿಹಾರ ಕಾರ್ಯಾಚರಣೆಯಲ್ಲೂ ಪ್ರದೀಪ್ ಭಾಗಿಯಾಗಿದ್ದರು.
ಕೇರಳದ ತ್ರಿಶ್ಶೂರ್ ಜಿಲ್ಲೆಯ ಪುತ್ತೂರ್ ಗ್ರಾಮದವರಾದ ಪ್ರದೀಪ್, ಇತ್ತೀಚೆಗೆ ಎರಡು ವಾರ ರಜೆ ಮೇಲೆ ಊರಿಗೆ ಬಂದಿದ್ದ ಅವರು, ಮಗನ ಜನ್ಮದಿನದ ಬಳಿಕ ನಾಲ್ಕು ದಿನ ಹಿಂದೆ ಮತ್ತೆ ಸುಲೂರ್ ಏರ್ಬೇಸ್ಗೆ ಕರ್ತವ್ಯಕ್ಕೆ ಮರಳಿದ್ದರು.
ಪ್ರದೀಪ್ಗೆ ಪತ್ನಿ ಶ್ರೀಲಕ್ಷ್ಮಿ, ಇಬ್ಬರು ಮಕ್ಕಳು, ತಾಯಿ ಕುಮಾರಿ, ಅನಾರೋಗ್ಯ ಪೀಡಿತರಾಗಿ ಜೀವರಕ್ಷಕ ಸಹಾಯವನ್ನು ಪಡೆದಿರುವ ತಂದೆ ರಾಧಾಕೃಷ್ಣನ್ ಇದ್ದಾರೆ.
ಪ್ರದೀಪ್ ದುರ್ಮರಣಕ್ಕೆ ಕೇರಳದ ಸಿಎಂ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಕಂಬನಿ ಮಿಡಿದಿದ್ದಾರೆ.
ಕೊಯಮತ್ತೂರು ಬಳಿಯ ಸುಲೂರ್ ವಾಯನೆಲೆಯಿಂದ ವೆಲ್ಲಿಂಗ್ಟನ್ನ ಡಿಫೆನ್ಸ್ ಸ್ಟಾಫ್ ಕಾಲೇಜಿಗೆ ಆಮಿಸುತ್ತಿದ್ದೆ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ ಕೂನೂರು ಬಳಿ ಪತನವಾಗಿದ್ದರಿಂದ ಮೂರೂ ಸೇನಾಪಡೆಗಳು ಪ್ರಧಾನ ದಂಡನಾಯಕರಾಗಿದ್ದ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಸೇನೆಯ ವಿವಿಧ ಹಂತದ 11 ಅಧಿಕಾರಿಗಳು ಸಾವನ್ನಪ್ಪಿದರು. ಓರ್ವ ಅಧಿಕಾರಿ ಮಾತ್ರ ಬದುಕುಳಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
Kerala officer who died In chopper crash played key role in 2018 flood-rescue missions
ಇದನ್ನು ಓದಿ: ಸೇನಾ ಹೆಲಿಕಾಪ್ಟರ್ ಪತನ: ಘಟನೆ ಕುರಿತು ಪ್ರತ್ಯಕ್ಷದರ್ಶಿ ಮಾಹಿತಿ
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ನ ಬ್ಲ್ಯಾಕ್ ಬಾಕ್ಸ್ ಪತ್ತೆ
Discussion about this post