ನವದೆಹಲಿ: ಸಾಧಾರಣರಾಗಿದ್ದರೂ ಪರವಾಗಿಲ್ಲ ಬದುಕಿನಲ್ಲಿ ಎದುರಾಗುವುದನ್ನು ಅದು ಬಂದಹಾಗೆಯೇ ಸ್ವೀಕರಿಸಬೇಕು. ಯಾವುದೇ ಕೆಲಸ ಮಾಡಿದರೂ ಅದನ್ನು ಅಚ್ಚುಕಟ್ಟಾಗಿ ಮಾಡಿ, ಭರವಸೆಯನ್ನು ಕಳೆದುಕೊಳ್ಳಬೇಡಿ’ – ಹೀಗೆಂದು ತಮಿಳುನಾಡಿನ ಊಟಿ ಬಳಿಯ ಕೂನೂರು ಬಳಿ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕೈಕ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ತಾವು ಕಲಿತ ಶಾಲೆಗೆ ಕಳೆದ ಸೆಪ್ಟೆಂಬರ್ನಲ್ಲಿ ಸ್ಫೂರ್ತಿದಾಯಕ ಪತ್ರ ಬರೆದಿದ್ದರು. ಗಂಭೀರವಾಗಿ ಸುಟ್ಟಗಾಯದಿಂದ ಬಳಲುತ್ತಿರುವ ವರುಣ್ ಸದ್ಯ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ನಾನು ಸಾಧಾರಣ ವಿದ್ಯಾರ್ಥಿಯಾಗಿದೆ. ಕ್ರೀಡೆಯಲ್ಲೂ ನನ್ನದು ಹೇಳಿಕೊಳ್ಳುವಂತಹ ಸಾಧನೆ ಏನೂ ಅಲ್ಲ. ಆದರೆ, ಏರೋಪ್ಲೇನ್ ಅಥವಾ ವೈಮಾನಿಕ ಸಾಧನಗಳ ಬಗ್ಗೆ ಅತೀವ ಒಲವು ಇತ್ತು’ ಎಂದು ವರುಣ್ ಹೇಳಿಕೊಂಡಿದ್ದಾರೆ.
ಹರಿಯಾಣದ ಚಂಡಿಮಂದಿರ್ ಕಂಟೋನ್ಮೆಂಟ್ನಲ್ಲಿರುವ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಕಲಿತ್ತಿದ್ದ ವರುಣ್, ಈ ಹೈಪರ್ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧಾರಣ ಮಕ್ಕಳಲ್ಲಿ ಸ್ಪೂರ್ತಿ ತುಂಬುತ್ತಿದ್ದರು.
ಬುಧವಾರ ಮಧ್ಯಾಹ್ನ ಹೆಲಿಕಾಪ್ಟರ್ ಪತನದಿಂದ ಮೂರೂ ಸೇನಾಪಡೆಗಳ ಪ್ರಧಾನ ದಂಡನಾಯಕ (ಸಿಡಿಎಸ್) ಬಿಪಿತ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್, ಸೇನೆಯ 11 ಅಧಿಕಾರಿಗಳು ಸಾವನ್ನಪ್ಪಿದರು. ವರುಣ್ ಸಿಂಗ್ ಒಬ್ಬರೆ ಬದುಕುಳಿದಿದ್ದಾರೆ. ಆದರೆ ಅವರಿಗೂ ತೀವ್ರ ಸುಟ್ಟ ಗಾಯ ಆಗಿದೆ.
ವರುಣ್ ಕಳೆದ ಆಗಸ್ಟ್ನಲ್ಲಿ ಶೌರ್ಯ ಚಕ್ರಕ್ಕೆ ಗೌರವಕ್ಕೆ ಭಾಜನರಾಗಿದ್ದರು. ತೇಜಸ್ ಯುದ್ಧ ವಿಮಾನ ತಾಂತ್ರಿಕ ದೋಷದಿಂದ ಪತನದ ಅಂಚಿಗೆ ಬಂದಿತ್ತು. ಇಂಥ ಅಪಾಯದ ಪರಿಸ್ಥಿತಿಯನ್ನು ವರುಣ್ ನಿಭಾಯಿಸಿದ್ದಕ್ಕೆ ಈ ಪ್ರಶಸ್ತಿ ನೀಡಲಾಗಿತ್ತು.
Officer Who Survived Crash Wrote To His School
ಇದನ್ನು ಓದಿ: Indian Army: ಭಾರತೀಯ ಸೇನೆಯಲ್ಲಿ ಖಾಲಿಯಿದೆ 1 ಲಕ್ಷಕ್ಕೂ ಅಧಿಕ ಹುದ್ದೆಗಳು
ಇದನ್ನೂ ಓದಿ: ಕೇರಳದ ಪ್ರವಾಹದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಚಾಪರ್ ಪತನದಲ್ಲಿ ಮೃತಪಟ್ಟ ಅಧಿಕಾರಿ
Discussion about this post