ಚಿಕ್ಕಮಗಳೂರು: ಜಿಲ್ಲಾಡಳಿತ/ಜಿಲ್ಲಾ ಪಂಚಾಯಿತಿ ಹಾಗೂ ಮಹಾತ್ಮಗಾಂಧಿ ಎಜುಕೇಷನ್ ಸೇವಾ ಟ್ರಸ್ಟ್(ರಿ) ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿ ಪ್ರದೇಶಗಳಾದ ಅಲ್ಲಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಮರ ಗ್ರಾಮದ ರಸ್ತೆ ಮಾರ್ಗವಾಗಿ ದತ್ತ ಪೀಠ, ಮಾಣಿಕ್ಯಧಾರಾ, ಗಾಳಿ ಕೆರೆ, ಅತ್ತಿಗುಂಡಿ ಇತರೆ ಸ್ಥಳಗಳ ಪರಿಸರದಲ್ಲಿ ಡಿಸೆಂಬರ್ ೧೧ ರಂದು ಬೆಳಿಗ್ಗೆ ೬.೩೦ ರಿಂದ ಸ್ವಚ್ಚತಾ ಶ್ರಮದಾನ ಕಾರ್ಯ ಹಮ್ಮಿಕೊಂಡಿದೆ.
ಈ ಕುರಿತು ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಂದು ಚಂದ್ರರ್ದ್ರೋಣ ಪರ್ವತ ಶ್ರೇಣಿಯ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಭಂದಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Tourists restricted to Mullaiyanagiri :
Discussion about this post