ಚಿಕ್ಕಮಗಳೂರು: ಕರ್ನಾಟಕ ವಿಧಾನಪರಿಷತ್ (ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರ) ಚುನಾವಣೆ-೨೦೨೧ ರ ಹಿನ್ನೆಲೆಯಲ್ಲಿ ಮತ ಎಣಿಕೆ ಕಾರ್ಯವನ್ನು ಚಿಕ್ಕಮಗಳೂರು ನಗರದ ಎಸ್.ಟಿ.ಜೆ. ಕಾಲೇಜಿನಲ್ಲಿ ಡಿಸೆಂಬರ್ ೧೪ ರಂದು ನಡೆಯಲಿದ್ದು, ಸಾರ್ವಜನಿಕ ಶಾಂತಿ ಶಿಸ್ತುಪಾಲನೆಯ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಹಿಸುವುದು ಅತ್ಯಾವಶ್ಯಕವಾಗಿರುವುದರಿಂದ ಡಿಸೆಂಬರ್ ೧೪ ರ ಬೆಳಿಗ್ಗೆ ೬ ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಮುಗಿಯುವವರೆಗೆ ಚಿಕ್ಕಮಗಳೂರು ನಗರದ ಎಸ್.ಟಿ.ಜೆ ಕಾಲೇಜಿನ (ಮತ ಎಣಿಕೆ ಕೇಂದ್ರ) ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ.
೧೪ ರಂದು ಮದ್ಯ ಮಾರಾಟ ನಿಷೇಧ: ಕರ್ನಾಟಕ ವಿಧಾನಪರಿಷತ್ (ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರ) ಚುನಾವಣೆ-೨೦೨೧ ರ ಹಿನ್ನೆಲೆಯಲ್ಲಿ ಮತ ಎಣಿಕೆ ಕಾರ್ಯವನ್ನು ಚಿಕ್ಕಮಗಳೂರು ನಗರದ ಎಸ್.ಟಿ.ಜೆ. ಕಾಲೇಜಿನಲ್ಲಿ ಡಿಸೆಂಬರ್ ೧೪ ರಂದು ನಡೆಯಲಿದ್ದು, ಡಿಸೆಂಬರ್ ೧೪ ರ ಬೆಳಿಗ್ಗೆ ೬ ಗಂಟೆಯಿಂದ ಮಧ್ಯರಾತ್ರಿ ೧೨ ಗಂಟೆಯವರೆಗೆ ಚಿಕ್ಕಮಗಳೂರು ನಗರ ಹಾಗೂ ೧೦ ಕಿ.ಮೀ ವ್ಯಾಪ್ತಿಯಲ್ಲಿ(ಕೆಎಸ್ಬಿಸಿಎಲ್ ಹೊರತುಪಡಿಸಿ) ಎಲ್ಲಾ ನಮೂನೆಯ ಮದ್ಯದಂಗಡಿಗಳನ್ನು (ಸಿಎಲ್೨, ೪, ೬ಎ, ೭, ೯, ೧೧, ೧೪ ಇತ್ಯಾದಿ ಎಲ್ಲಾ ತರಹದ) ಮುಚ್ಚುವಂತೆಯೂ ಹಾಗೂ ಮದ್ಯ, ಬೀರ್, ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ.
Prohibitory Orders
Discussion about this post