ನವದೆಹಲಿ: ಹೆಚ್ಚಿನ ಲಾಭದ ನಿರೀಕ್ಷೆಯೊಂದಿಗೆ ಹೂಡಿಕೆ ಮಾಡುವಾಗ ಠವಣಿದಾರರು ಅತ್ಯಂತ ಎಚ್ಚರವಹಿಸಬೇಕು. ಯಾಕೆಂದರೆ ಇಂಥ ಹೂಡಿಕೆಗಳಲ್ಲಿ ಅಪಾಯವೂ ಹೆಚ್ಚಿನ ಮಟ್ಟದಲ್ಲಿರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
‘ಹೆಚ್ಚಿನ ರಿಟರ್ನ್ಸ್ ನೀಡುವ ಕೆಲವು ಸಂಸ್ಥೆಗಳಿವೆ. ಹೆಚ್ಚಿನ ರಿಟರ್ನ್ಸ್ ದೊರೆಯುವಲ್ಲಿ ಅಪಾಯವೂ ಹೆಚ್ಚಿರುತ್ತದೆ. ಅಂಥ ಸಂಸ್ಥೆಗಳಲ್ಲಿ ಠವಣಿ ಇಡುವ ಮುನ್ನ ಜನ ಜಾಗರೂಕರಾಗಿರಬೇಕು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅರಬ್ ದೇಶಗಳಿಗೆ ಕೃಷಿ ರಫ್ತಿನಲ್ಲಿ ಭಾರತವೀಗ ನಂಬರ್ 1
‘ಡೆಪಾಸಿಟರ್ಸ್ ಫಸ್ಟ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗಲು ಮತ್ತು ಕಾಲಕ್ಕೆ ಅನುಗುಣವಾಗಿ ಹೊಂದಿಕೊಳ್ಳುವಂತೆ ಮಾಡಲು ಆರ್ಬಿಐ ಕಟಿಬದ್ಧವಾಗಿದೆ. ಇದಕ್ಕೆ ಬ್ಯಾಂಕ್ನ ಆಡಳಿತ ಮಂಡಳಿಯೂ ಸೇರಿದಂತೆ ಎಲ್ಲರ ಹೊಣೆಗಾರಿಕೆಯೂ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Discussion about this post