ಡಿಸೆಂಬರ್ 13, ಅಂದರೆ ಇಂದು ಉದ್ಘಾಟನೆಯಾದ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ “ಕಾಶಿ ವಿಶ್ವನಾಥ ಕಾರಿಡಾರ್” ಏನೇನನ್ನೆಲ್ಲ ಒಳಗೊಂಡಿದೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಒಟ್ಕೋಟು ಒಂಭೈನೂರು ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಇದು ಹಳೆ ಕಾಶಿಯನ್ನು “ಹೊಸ ಕಾಶಿ”ಯನ್ನಾಗಿ ಮಾಡುವ ಯೋಜನೆ.
ವಾರಾಣಸಿಯಲ್ಲಿ ಉದ್ಘಾಟನೆಗೊಳ್ಳಲಿರುವ ಈ ಅದ್ದೂರಿ ಗತ ವೈಭವವನ್ನು ಮಕರ ಸಂಕ್ರಾಂತಿಯ ತನಕ ಆಚರಿಸಲು ಪ್ಲಾನ್ ಮಾಡಲಾಗಿದೆ.ಅಂದಹಾಗೆ ಇಂದು ಉದ್ಘಾಟನೆಯಾಗಿದ್ದು ಮೊದಲ ಹಂತದ ಯೋಜನೆಯಷ್ಟೇ. ಇನ್ನೂ ಮುಂದಿನ ಹಂತದ ಯೊಜನೆಗಳು ಬಾಕಿಯಿವೆ.
ದೇಶದ ಪ್ರಮುಖ ವಾಸ್ತು ಶಿಲ್ಪಿಗಳಲ್ಲಿ ಒಬ್ಬರಾದ ಭೀಮಲ್ ಪಟೇಲ್ ಈ ಪ್ರಾಜೆಕ್ಟ್ ಅನ್ನು ವಿನ್ಯಾಸ ಮಾಡಿದ್ದಾರೆ. ಇವರು ಸೆಂಟ್ರಲ್ ವಿಸ್ತಾ ಯೋಜನೆಯ ಶಿಲ್ಪಿಯೂ ಹೌದು. ಈ ಪ್ರಾಜೆಕ್ಟ್ ವೇಳೆ ಶತಮಾನಗಳ ಹಿಂದಿನ ಸಾಕಷ್ಟು ವಿಗ್ರಹಗಳು ದೊರೆತಿದ್ದು, ಅವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿರುವ ಯೋಜನೆಯ ಮೊದಲ ಹಂತದ ವೆಚ್ಚ 339 ಕೋಟಿ ಆಗಿದೆ. ಈ ಕಾರಿಡಾರ್ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಇದ್ದು, ಗಂಗಾ ನದಿಯ ಎರಡು ಘಾಟ್ಗಳೊಂದಿಗೆ ಸಂಪರ್ಕ ಸಾಧಿಸಲಿದೆ. ಯಾತ್ರಾರ್ಥಿಗಳು ಇನ್ನು ಮುಂದೆ ಇಕ್ಕಟ್ಟಾದ ಲೇನ್ಗಳ ಮೂಲಕ ನಡೆಯಬೇಕಾಗಿಲ್ಲ. 50 ಫೀಟ್ ವಿಸ್ತಾರವಾಗಿದ್ದು ವಿಶಾಲ ಜಾಗ ಒದಗಿಸಲಿದೆ. ಇದರಿಂದಾಗಿ ಉಂಟಾಗುವ ಜನಸಂದಣಿಯನೂ ತಪ್ಪಿಸುತ್ತದೆ.
5000 ಹೆಕ್ಟೇರ್ : ಮೋದಿ ಕನಸಿನ ಯೋಜನೆ 5000 ಹೆಕ್ಟೇರ್ ಜಾಗದಲ್ಲಿ ನಿರ್ಮಾಣವಾಗಿದೆ. ಈ ಹಿಂದೆ 2000 ಹೆಕ್ಟೇರ್ ಗಳಷ್ಟು ಇದ್ದ ಈ ಪ್ರಾಜೆಕ್ಟ್ ಈಗ ಜನರ ಅನುಕೂಲಕ್ಕಾಗಿ ಇನ್ನಷ್ಟು ವಿಸ್ತರಣೆ ಮಾಡಲಾಗಿದೆ.
ಮೋದಿ ಡ್ರಿಮ್ ಪ್ರಾಜೆಕ್ಟ್ ನಲ್ಲಿ ಒಟ್ಟು 23 ಕಟ್ಟಡಗಳಿದ್ದು, ಇವುಗಳನ್ನು ಯಾತ್ರಿಕರಿಗೆ ಸಹಾಯ ಆಗುವಂತೆ ಮಾಡಲಾಗಿದೆ. ಇದರಲ್ಲಿ ಯಾತ್ರಿ ಸುವಿಧ ಕೇಂದ್ರ, ಮ್ಯೂಸಿಯಂ, ಫುಡ್ ಕೋರ್ಟ್, ವೇದಿಕ್ ಕೇಂದ್ರ ಮುಂತಾದ ಸೇವೆಗಳು ದೊರೆಯಲಿವೆ.
ಈ ಪ್ರಾಜೆಕ್ಟ್ ಸಂದರ್ಭ ಸುಮಾರು ಮುನ್ನೂರು ಆಸ್ತಿಯನ್ನು ಖರೀದಿ ಮಾಡಲಾಗಿದೆ. ಜನರನ್ನು ಸ್ಥಳಾಂತರಿಸಲಾಗಿದೆ. ಸುಮಾರು 40ಕ್ಕೂ ಹೆಚ್ಚು ಪುರಾತನ ದೇವಾಲಯಗಳನ್ನು ಉತ್ಖನನದ ವೇಳೆ ಪತ್ತೆ ಮಾಡಲಾಗಿದೆ. ಕಾಶಿ ವಿಶ್ವನಾಥ ವೆಬ್ಸೈಟ್ ನಲ್ಲಿ ಈ ಸ್ಥಳವನ್ನು”ಗೋಲ್ಡನ್ ಟೆಂಪಲ್” ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: Kashi Vishwanath Corridor: ಪ್ರಧಾನಿ ಮೋದಿಯಿಂದ ಗಂಗಾನದಿಯಲ್ಲಿ ತೀರ್ಥಸ್ನಾನ
Discussion about this post