ಪಣಜಿ: ಪೂರ್ವ ಕಡಲ ತೀರದ ಪಶ್ಚಿಮ ಬಂಗಾಳದಲ್ಲಿ ಹ್ಯಾಟ್ರಿಕ್ ಅಧಿಕಾರ ಹಿಡಿದಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ, ಈಗ ಪಶ್ಚಿಮ ಕಡಲ ಕಿನಾರೆಯ ಪುಟ್ಟ ರಾಜ್ಯ ಗೋವಾದತ್ತ ದೃಷ್ಟಿ ಹರಿಸಿದೆ. ಮುಂದಿನ ಫೆಬ್ರುವರಿ/ಮಾರ್ಚ್ನಲ್ಲಿ ಚುನಾವಣೆಗೆ ಒಳಪಡುವ ಐದು ರಾಜ್ಯಗಳಲ್ಲಿ ಗೋವಾ ಕೂಡ ಒಂದಾಗಿದ್ದು, ಇಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಮುಂದಾಗಿದೆ.
ಎಲ್ಲ ಸಮುದಾಯದವರನ್ನು ಸೆಳೆಯಲು ದೇಗುಲ, ಮಸೀದಿ, ಚರ್ಚ್ಗಳತ್ತ ಟಿಎಂಸಿ ಚಿತ್ತೈಸಿದೆ. ಬಹುಸಂಸ್ಕೃತಿ, ಬಹುಧರ್ಮವನ್ನು ಪಕ್ಷ ಬೆಂಬಲಿಸಿದೆ. ದೇಶದಲ್ಲಿ ಬಿಜೆಪಿಗೆ ಪರ್ಯಾಯ ಏನಾದರೂ ಇದ್ದರೆ ಅದು ಟಿಎಂಸಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿರುವ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ. ಪಣಜಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಅವರು, ನಾವು ಬಿಜೆಪಿ ವಿರುದ್ಧ ಹೋರಾಡುತ್ತೇವೆ. ಗೆಲ್ಲುವ ಸಾಧ್ಯತೆ ಇದೆ. ಹೋರಾಡುವ ವಿಶ್ವಾಸ ಕಾರ್ಯಕರ್ತರಲ್ಲಿ ಇದ್ದರೆ ನಾವು ಚುನಾವಣಾ ರಣರಂಗದಿಂದ ಹಿಂದೆ ಸರಿಯುವುದಿಲ್ಲ, ಕೆಚ್ಚೆದೆಯಿಂದ ಮುನ್ನುಗ್ಗುತ್ತೇವೆ. ದೇವಾಲಯ, ಮಸೀದಿ, ಮತ್ತು ಚರ್ಚ್ಗಳು ಪಕ್ಷಕ್ಕೆ ಸಮಾನವಾದ ಅಂಶಗಳು ಎಂದಿದ್ದಾರೆ.
ನಾವು ಇಲ್ಲಿ ಯಾರನ್ನೂ ವಿಭಜಿಸಲು ಬಂದಿಲ್ಲ. ಬದಲಿಗೆ ಎಲ್ಲರನ್ನೂ ಒಗ್ಗೂಡಿಸಲು ಬಂದಿದ್ದೇವೆ. ಟಿಎಂಸಿ ಮೈತ್ರಿಕೂಟಕ್ಕೆ ಬೆಂಬಲಿಸುವವರಿಗೆ ಸ್ವಾಗತ ಎಂದು ಗೋವಾದಲ್ಲಿ ಮೂರು ದಿನ ಪ್ರವಾಸ ಕೈಗೊಂಡಿರುವ ಮಮತಾ ಹೇಳಿದ್ದಾರೆ.
ಗೋವಾದಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಪೋರ್ಚುಗೀಸರ ವಸಹಾತು ಆಗಿದ್ದ ರಾಜ್ಯದಲ್ಲಿ ಕ್ರೈಸ್ತ ಸಮುದಾಯ ನಿರ್ಣಾಯಕ ಪಾತ್ರವಹಿಸುತ್ತದೆ. ಜತೆಗೆ ಮುಸ್ಲಿಮರ ಮತಗಳು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಒಂದು ದಶಕದಿಂದ ಬಿಜೆಪಿ ಆಡಳಿತ ನಡೆಸುತ್ತಿದೆ.
TMC Pitches “Temple, Mosque, Church” In Goa Pitches
ಇದನ್ನು ಓದಿ: ಮೇಘಾಲಯದಲ್ಲಿ ರಾಜಕೀಯ ಕ್ರಾಂತಿ: 12 ಕಾಂಗ್ರೆಸ್ ಶಾಸಕರು ಟಿಎಂಸಿಗೆ ಸೇರ್ಪಡೆ
ಇದನ್ನೂ ಓದಿ: ತ್ರಿಪುರಾ ನಗರ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ
Discussion about this post